
ಅಭ್ಯಾಸದ ವೇಳೆ ರೋಹಿತ್ ಕೈಗೆ ತಾಗಿದ ಚೆಂಡು
ಭಾರತ ಏಕದಿನ ಮತ್ತು ಟಿ ಟ್ವೆಂಟಿ ತಂಡಗಳಿಗೆ ಪೂರ್ಣಾವಧಿ ನಾಯಕನಾಗಿ ಆಯ್ಕೆಯಾಗಿರುವ ರೋಹಿತ್ ಶರ್ಮಾ ಮುಂಬರಲಿರುವ ದಕ್ಷಿಣ ಆಫ್ರಿಕಾ ಪ್ರವಾಸದ ಸಲುವಾಗಿ ಮುಂಬೈನ ಶರದ್ ಪವಾರ್ ಅಕಾಡೆಮಿಯಲ್ಲಿ ತಂಡದ ಆಟಗಾರರಾದ ಅಜಿಂಕ್ಯ ರಹಾನೆ ಮತ್ತು ಕೆ ಎಲ್ ರಾಹುಲ್ ಜತೆ ಅಭ್ಯಾಸ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ ಭಾರತ ತಂಡದ ಥ್ರೋಡೌನ್ ತಜ್ಞ ರಾಘವೇಂದ್ರ ಅವರು ಎಸೆದ ಎಸೆತ ರೋಹಿತ್ ಶರ್ಮಾ ಅವರ ಕೈಗೆ ಬಲವಾಗಿ ಬಡಿದಿದೆ. ಈ ಸಂದರ್ಭದಲ್ಲಿ ರೋಹಿತ್ ಶರ್ಮಾ ತೀವ್ರ ನೋವಿಗೆ ಒಳಗಾದರು ಎಂದು ವರದಿಯಾಗಿದೆ. ಹೀಗೆ ಚೆಂಡು ಬಲವಾಗಿ ಕೈಗೆ ತಾಗಿದ ಕಾರಣ ನೋವಿಗೊಳಗಾದ ಕಾರಣ ರೋಹಿತ್ ಶರ್ಮಾ ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸದ ಮೇಲೆ ಪ್ರಭಾವ ಬೀರಲಿದೆಯಾ ಈ ಘಟನೆ
ಅಭ್ಯಾಸದ ವೇಳೆ ಕೈಗೆ ಚೆಂಡು ಬಲವಾಗಿ ತಾಗಿರುವ ಕಾರಣದಿಂದಾಗಿ ಅಭ್ಯಾಸವನ್ನು ರೋಹಿತ್ ಶರ್ಮಾ ಅರ್ಧಕ್ಕೆ ಮೊಟಕುಗೊಳಿಸಿರುವುದು ಸದ್ಯ ರೋಹಿತ್ ಅಭಿಮಾನಿಗಳ ಪಾಲಿಗೆ ಕಹಿ ಸುದ್ದಿಯಾಗಿ ಪರಿಣಮಿಸಿದೆ. ರೋಹಿತ್ ಶರ್ಮಾಗೆ ಚೆಂಡು ಬಲವಾಗಿ ತಾಗಿದೆಯಾ ಹಾಗೂ ಇದರಿಂದ ರೋಹಿತ್ ಗಾಯಕ್ಕೊಳಗಾಗಿರುವ ಸಂಭವವಿದೆಯಾ ಎಂಬ ಆತಂಕ ಇದೀಗ ರೋಹಿತ್ ಶರ್ಮಾ ಅಭಿಮಾನಿಗಳಲ್ಲಿ ಮೂಡಿದೆ. ಆದರೆ, ಅಭ್ಯಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿದ ರೋಹಿತ್ ಶರ್ಮಾ ಸ್ಥಳದಲ್ಲಿ ನೆರೆದಿದ್ದ ತಮ್ಮ ಅಭಿಮಾನಿಗಳಿಗೆ ನಗುಮೊಗದೊಂದಿಗೆ ಸೆಲ್ಫಿ ನೀಡಿದ್ದು ಮಾತ್ರ ರೋಹಿತ್ ಅಭಿಮಾನಿಗಳ ಪಾಲಿಗೆ ಕೊಂಚ ಸಮಾಧಾನವನ್ನು ತಂದಿದೆ.

ಏಕದಿನ ನಾಯಕನಾಗಿ ರೋಹಿತ್ ಅಂಕಿ ಅಂಶ
ರೋಹಿತ್ ಶರ್ಮಾ ಇದುವರೆಗೂ ಒಟ್ಟು 10 ಏಕದಿನ ಪಂದ್ಯಗಳಲ್ಲಿ ನಾಯಕನಾಗಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದು, ಈ ಪಂದ್ಯಗಳ ಪೈಕಿ ಭಾರತ 8 ಪಂದ್ಯಗಳಲ್ಲಿ ಗೆದ್ದಿದ್ದು, ಕೇವಲ 2 ಪಂದ್ಯಗಳಲ್ಲಿ ಸೋತಿದೆ. 2018ರಲ್ಲಿ ನಡೆದ ಏಷ್ಯಾ ಕಪ್ ಟೂರ್ನಮೆಂಟ್ ವೇಳೆ ವಿರಾಟ್ ಕೊಹ್ಲಿ ತಂಡದಿಂದ ಹೊರಗುಳಿದು ವಿಶ್ರಾಂತಿ ಪಡೆದಿದ್ದ ಕಾರಣ ಭಾರತ ತಂಡವನ್ನು ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ಅವರೇ ಮುನ್ನಡೆಸಿ ಯಶಸ್ವಿಯಾಗಿ ಟ್ರೋಫಿಯನ್ನು ಗೆಲ್ಲಿಸಿಕೊಟ್ಟಿದ್ದರು.


Click it and Unblock the Notifications
