
ಬಿಸಿಸಿಐ ವೈಫಲ್ಯ
ಬಿಸಿಸಿಐ ಹಂಗಾಮಿ ಅಧ್ಯಕ್ಷರಾಗಿ ಅನುಭವ ಹೊಂದಿರುವ ಸುನಿಲ್ ಗವಾಸ್ಕರ್ ಅವರು ಈಗಿನ ಆಡಳಿತ ಮಂಡಳಿ ಮೇಲೂ ಕಿಡಿಕಾರಿದ್ದಾರೆ. ಆರ್ಥಿಕ ಕಡಿವಾಣ ಹಾಕುವುದಷ್ಟೇ ಬಿಸಿಸಿಐ ಕೆಲಸವಲ್ಲ. ತಂಡದ ಮೇಲೆ ನಿಯಂತ್ರಣವೂ ಅಗತ್ಯ ಎಂದಿದ್ದಾರೆ. ಕೊಹ್ಲಿ ಹಾಗೂ ಕುಂಬ್ಳೆ ನಡುವೆ ಸಮಸ್ಯೆ ಇರುವುದು ಗೊತ್ತಿದ್ದರೂ ಸುಮ್ಮನೆ ಇದ್ದು, ಸಮಸ್ಯೆ ಉಲ್ಬಣವಾದ ಮೇಲೆ ಮುಲಾಮು ಹಚ್ಚುವ ಕಾರ್ಯಕ್ಕೆ ಮುಂದಾಗಿದ್ದು ದುರಂತ ಎಂದು ಗವಾಸ್ಕರ್ ಹೇಳಿದ್ದಾರೆ.

ಬಿಸಿಸಿಐಗೆ ಬೈದ ಗವಾಸ್ಕರ್
ಬಿಸಿಸಿಐಗೆ ಬೈದಿರುವ ಗವಾಸ್ಕರ್ ಅವರು ಸಚಿನ್ ಅವರಿರುವ ತ್ರಿಸದಸ್ಯ ಸಮಿತಿ ಬಗ್ಗೆ ಹೆಚ್ಚು ಮಾತನಾಡಿಲ್ಲ. ಗಂಗೂಲಿ ಹಾಗೂ ಲಕ್ಷ್ಮಣ್ ಕೂಡಾ ಇರುವ ಸಮಿತಿಗೆ ಕುಂಬ್ಳೆ ಬದಲಿಗೆ ಹೊಸಬರನ್ನು ಆಯ್ಕೆ ಮಾಡುವುದು ಕಠಿಣ ಕೆಲಸ ಎಂದಿದ್ದಾರೆ.

ಕೊಹ್ಲಿ ಪರ ಸಿಡಿದಿದ್ದ ಸುನಿಲ್
ಒಬ್ಬ ವಿಶ್ವದರ್ಜೆಯ ಬ್ಯಾಟ್ಸ್ ಮನ್ ಆಡುವ ಆಟ ಅದಲ್ಲ. ಅವರು ಕನ್ನಡಿಯಲ್ಲಿ ತಮ್ಮ ಮುಖವನ್ನು ತಾವೇ ನೋಡಿಕೊಳ್ಳಲಿ. ಆಗ ಅವರಿಗೆ ಅವರೆಂಥ ತಪ್ಪು ಮಾಡಿದ್ದಾರೆಂದು ಅವರಿಗೆ ತಿಳಿಯುತ್ತದೆ ಎಂದು ಸುನಿಲ್ ಗವಾಸ್ಕರ್ ಅವರು ಕೊಹ್ಲಿ ವಿರುದ್ಧ ಐಪಿಎಲ್ ನಲ್ಲಿ ಕಿಡಿಕಾರಿದ್ದರು ಕೊಹ್ಲಿ ನಾಯಕತ್ವದ ಬಗ್ಗೆಯೂ ಪ್ರಶ್ನೆ ಎತ್ತಿದ್ದರು.

ಕುಂಬ್ಳೆ ರಾಜೀನಾಮೆ ನೀಡಬಾರದಿತ್ತು
ಕುಂಬ್ಳೆಯಥ ಹೋರಾಟಗಾರ ಈ ರೀತಿ ರಾಜೀನಾಮೆ ನೀಡಿ, ವಿಮುಖರಾಗಿರುವುದು ಸರಿಯಲ್ಲ. ಸಮಸ್ಯೆ ಏನೇ ಇರಲಿ, ತಂಡದ ಒಳಿತಿಗಾಗಿ ಇನ್ನಷ್ಟು ಕಾಲ ತಂಡದ ಜತೆ ಇರಬೇಕಾಗಿತ್ತು. ಹೊಸ ಕೋಚ್ ನೇಮಕವಾಗುವ ತನಕವಾದರೂ ಕುಂಬ್ಳೆ ತಂಡಕ್ಕೆ ಬಲ ತುಂಬಬಹುದಿತ್ತು. ಸಿಎಸಿ ಕೂಡಾ ಕುಂಬ್ಳೆಯಂಥ ದಿಗ್ಗಜರನ್ನು ನಡೆಸಿಕೊಂಡ ರೀತಿ ಸರಿಯಿಲ್ಲ ಎಂದು ಎನ್ ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಗವಾಸ್ಕರ್ ಹೇಳಿದರು.


Click it and Unblock the Notifications











