Sanjay Krishnamurthi: ಐಸಿಸಿ ಟಿ20 ವಿಶ್ವಕಪ್ನಲ್ಲಿ ಇಂದು ಹಾಲಿ ಚಾಂಪಿಯನ್ ಟೀಮ್ ಇಂಡಿಯಾ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್ಎ) ತಂಡಗಳು ಮುಖಾಮುಖಿಯಾಗಿವೆ. ಯುಎಸ್ಎ ಟಾಸ್ ಗೆದ್ದು ಮೊದಲು ಬೌಲಿಂಗ್ಗೆ ಇಳಿದಿದ್ದು, ಈ ವೇಳೆ ಯುಎಸ್ಎ ಪರ ಪೀಲ್ಡಿಂಗ್ ಮಾಡಿದ ಕರ್ನಾಟಕದ ಜೊತೆ ನಂಟು ಹೊಂದಿರುವ ಸಂಜಯ್ ಕೃಷ್ಣಮೂರ್ತಿ ಅವರು ಬೌಂಡರಿ ಲೈನ್ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ.
ಅಲಿ ಖಾನ್ ಅವರು ಮಾಡಿದ ಬೌಲಿಂಗ್ನಲ್ಲಿ ಅಭಿಷೇಕ್ ಶರ್ಮಾ ಅವರು ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದ್ದು, ಈ ಕ್ಯಾಚ್ ಹಿಡಿದಿದ್ದು ಸಂಜಯ್ ಕೃಷ್ಣಮೂರ್ತಿ ಅವರು. ಹಾಗಾದ್ರೆ, ಇವರ ಹಿನ್ನೆಲೆ ಏನು ಎನ್ನುವ ಕುತೂಹಲ ಬಹುತೇಕ ಮಂದಿ ತಲೆಯಲ್ಲಿರುತ್ತದೆ. ಅದೆಲ್ಲದಕ್ಕೂ ಉತ್ತರವನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಟಾಸ್ ಗೆದ್ದ ಯುಎಸ್ಎ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಅದರಂತೆಯೇ ಭಾರತ ತಂಡ ಮೊದಲು ಬ್ಯಾಟಿಂಗ್ಗೆ ಇಳಿದಿದೆ. ಈ ಪಂದ್ಯ ಮುಂಬೈನ ಪ್ರಸಿದ್ಧ ವಾಂಖೇಡೆ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ವೇಳೆ ಯುಎಸ್ಎ ಪರ ಆಡುತ್ತಿರುವ ಕರ್ನಾಟಕದ ಜೊತೆ ನಂಟು ಹೊಂದಿರುವ ಸಂಜಯ್ ಕೃಷ್ಣಮೂರ್ತಿ ಅವರ ಬಗ್ಗೆ ಕುತೂಹಲಕಾರಿ ಚರ್ಚೆಗಳು ಆರಂಭವಾಗಿವೆ.
ಸಿಕ್ಸರ್ಗಳ ಸುರಿಮಳೆ ಸುರಿಸಿದ್ದ ಸಂಜಯ್: ಈ ಹಿಂದೆಯಷ್ಟೇ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಗಮನ ಸೆಳೆಯುತ್ತಿರುವ ರಚಿನ್ ರವೀಂದ್ರ ಅವರ ಓವರ್ನಲ್ಲಿ ಸಿಕ್ಸರ್ಗಳ ಸುರಿಮಳೆಯನ್ನು ಸುರಿಸಿ ಮಿಂಚಿದ್ದರು. ವಾಷಿಂಗ್ಟನ್ ಫ್ರೀಡಂ ತಂಡದ ಪರ ರಚಿನ್ ರವೀಂದ್ರ ಇನಿಂಗ್ಸ್ನ 8ನೇ ಓವರ್ ಬೌಲಿಂಗ್ ಮಾಡುವಾಗ, ಸಂಜಯ್ ಮೊದಲ ಎರಡು ಎಸೆತಗಳಲ್ಲಿ ಯಾವುದೇ ರನ್ ಬಾರಿಸಲಿಲ್ಲ. ಆದರೆ, ನಂತರ ಮುಂದಿನ ನಾಲ್ಕು ಎಸೆತಗಳಲ್ಲೂ ನಾಲ್ಕು ಸಿಕ್ಸರ್ಗಳನ್ನು ಸಿಡಿಸಿ ಗಮನ ಸೆಳೆದರು.
ಭರವಸೆಯ ಬೌಲರ್ಗಳ ಎದುರು ಯಾವುದೇ ಭಯವಿಲ್ಲದೆ ಆಡಿದ ಸಂಜಯ್ ಅವರ ಈ ಪ್ರದರ್ಶನ ಕ್ರೀಡಾಭಿಮಾನಿಗಳ ಗಮನ ಸೆಳೆದಿದ್ದು, ಪಂದ್ಯಕ್ಕೆ ರೋಚಕತೆಯನ್ನು ಹೆಚ್ಚಿಸಿತು. ಹೀಗೆ ಒಂದೇ ಓವರ್ನಲ್ಲಿ ನಾಲ್ಕು ಸಿಕ್ಸರ್ಗಳನ್ನು ಸಿಡಿಸುವ ಮೂಲಕ ಸಂಜಯ್ ತಮ್ಮ ಬ್ಯಾಟಿಂಗ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು.
ಕರ್ನಾಟಕದ ಜೊತೆ ನಂಟು: ಇದೀಗ ಇಂದಿನಿಂದ ಅಂದರೆ, ಫೆಬ್ರವರಿ 7ರಂದು ಆರಂಭವಾಗಿರುವ ಟೀ 20 ವಿಶ್ವಕಪ್ ಪಂದ್ಯದಲ್ಲೂ ಕೂಡ ಬೌಂಡರಿ ಲೈನ್ನಲ್ಲಿ ಭಾರತದ ಸ್ಟಾರ್ ಬ್ಯಾಟರ್ ಅಭಿಷೇಕ್ ಶರ್ಮಾ ಅವರ ಕ್ಯಾಚ್ ಹಿಡಿದಿದ್ದಾರೆ. ಈ ಮೂಲಕ ಉತ್ತಮ ಫೀಲ್ಡಿಂಗ್ ಪ್ರದರ್ಶನ ಮಾಡಿ ಗಮನ ಸೆಳೆದಿದ್ದಾರೆ. ಇನ್ನೂ ಇವರು ಬ್ಯಾಟಿಂಗ್ ಹೇಗೆ ಆಡುತ್ತಾರೆ ಎಂದು ಕಾದುನೋಡಬೇಕಿದೆ. ಜೊತೆಗೆ ಇವರು ಕರ್ನಾಟಕದ ಬೆಂಗಳೂರಿನ ಜೊತೆ ಹೇಗೆ ನಂಟು ಹೊಂದಿದ್ದಾರೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ಸಂಜಯ್ ಕೃಷ್ಣಮೂರ್ತಿಗೆ ಭಾರತ ಹಾಗೂ ಕರ್ನಾಟಕದೊಂದಿಗೆ ಉತ್ತಮ ನಂಟಿದೆ. ಇವರು ಇವರು 2011ರಲ್ಲಿ ಅಮೆರಿಕದಲ್ಲಿ ಜನಿಸಿದರು. ಅಮೆರಿಕದಲ್ಲಿ ಜನಿಸಿದರೂ, ಬಾಲ್ಯದಲ್ಲೇ ಕುಟುಂಬ ಸಮೇತ ಬೆಂಗಳೂರಿಗೆ ಬಂದ ಅವರು ಇಲ್ಲಿಯೇ ಕ್ರಿಕೆಟ್ ಅಭ್ಯಾಸ ಆರಂಭಿಸಿದರು. ನಗರದ ಕ್ರಿಕೆಟ್ ಅಕಾಡೆಮಿಗಳಲ್ಲಿ ತರಬೇತಿ ಪಡೆದ ಸಂಜಯ್, ಬೆಂಗಳೂರು ತಂಡವನ್ನು ಪ್ರತಿನಿಧಿಸಿದ ಅನುಭವವನ್ನು ಹೊಂದಿದ್ದಾರೆ.
ಕೈತಪ್ಪಿದ್ದ ಭಾರತದ ಪೌರತ್ವ: ಭಾರತದ ಪೌರತ್ವ ದೊರೆಯದ ಕಾರಣ ಅವರು ಅಮೆರಿಕದ ನಾಗರಿಕರಾಗಿಯೇ ಮುಂದುವರಿದಿದ್ದು, ಬಳಿಕ ಅಲ್ಲಿಯೇ ಕ್ರಿಕೆಟ್ ಜೀವನ ಆರಂಭಿಸಿದರು. ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ ತಂಡದ ಪರ ಇದುವರೆಗೆ 14 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನು ಆಡಿರುವ ಸಂಜಯ್ ಕೃಷ್ಣಮೂರ್ತಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿದ್ದಾರೆ. ಇದೀಗ ಸದ್ಯ ಅವರು ಯುಎಸ್ಎ ತಂಡದ ಪರ ಆಡುತ್ತಿದ್ದಾರೆ.