ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಆಟಗಾರರನ್ನು ಬಿಡುಗಡೆ ಮಾಡುವ ನಿಯಮದ ಬಗ್ಗೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರು ಈ ನಿಯಮವನ್ನು ರದ್ದು ಮಾಡಬೇಕು ಎಂದಿದ್ದಾರೆ. ತನ್ನ ಮಾಜಿ ತಂಡದ ಸಹ ಆಟಗಾರ ಜೋಸ್ ಬಟ್ಲರ್ ಇನ್ನು ಮುಂದೆ ತನ್ನೊಂದಿಗೆ ಆಡುವುದಿಲ್ಲ ಎಂದು ಸ್ಯಾಮ್ಸನ್ ಬೇಸರಗೊಂಡಿದ್ದಾರೆ. ರಾಜಸ್ಥಾನ ಫ್ರಾಂಚೈಸಿ ಬಟ್ಲರ್ ಅವರನ್ನು ಐಪಿಎಲ್ 2025ರ ಟೂರ್ನಿಗೆ ಉಳಿಸಿಕೊಳ್ಳಲಿಲ್ಲ. ಐಪಿಎಲ್ ಮೆಗಾ ಹರಾಜಿನಲ್ಲಿ ಬಟ್ಲರ್ ಅವರನ್ನು ಗುಜರಾತ್ ಟೈಟಾನ್ಸ್ ಖರೀದಿಸಿತು. ಇದರ ಮಧ್ಯೆ ಸಂಜು ಸ್ಯಾಮ್ಸನ್ ಅವರು ಟೀಮ್ ಇಂಡಿಯಾದ ಭವಿಷ್ಯ ಆಟಗಾರನ ಬಗ್ಗೆಯೂ ಮಾತನಾಡಿದ್ದಾರೆ.
ಸಂಜು ಸ್ಯಾಮ್ಸನ್ 13 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರನ್ನು ಹೊಗಳಿದ್ದಾರೆ. ಭವಿಷ್ಯದಲ್ಲಿ ಅವರು ಟೀಮ್ ಇಂಡಿಯಾ ಪರ ಆಡಬಹುದು ಎಂದು ಹೇಳಿದ್ದಾರೆ. ಇದಲ್ಲದೆ, ರಾಹುಲ್ ದ್ರಾವಿಡ್ ಮರಳಿದ್ದಕ್ಕೆ ರಾಜಸ್ಥಾನ ನಾಯಕ ಸಂತೋಷ ವ್ಯಕ್ತಪಡಿಸಿದ್ದಾರೆ.

ದುಬೈನಲ್ಲಿ ನಡೆದ ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 13 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮೂಲಕ ರಾಜಸ್ಥಾನ ರಾಯಲ್ಸ್ ತಂಡ ಸುದ್ದಿ ಮಾಡಿತು. 'ಅವರು ತುಂಬಾ ಆತ್ಮವಿಶ್ವಾಸದ ಆಟಗಾರ. ಅವರು ಅಕಾಡೆಮಿಯಲ್ಲಿ ಸುಲಭವಾಗಿ ಸಿಕ್ಸರ್ಗಳನ್ನು ಬಾರಿಸುತ್ತಾರೆ. ಅದು ಅವನಿಗೆ ಬೆಂಬಲ ನೀಡುವುದು ಮತ್ತು ಅಣ್ಣನಂತೆ ಅವನೊಂದಿಗೆ ಇರುವುದು ಮುಖ್ಯವಾಗಿದೆ. ಬಹುಶಃ ಕೆಲವು ವರ್ಷಗಳಲ್ಲಿ ಅವರು ಭಾರತ ಪರ ಆಡುತ್ತಾರೆ ಎಂದು ಸಂಜು ಭವಿಷ್ಯ ನುಡಿದಿದ್ದಾರೆ.
ಟ್ರಯಲ್ಸ್ನಲ್ಲಿ ನನ್ನನ್ನು ಗುರುತಿಸಿದ್ದು ರಾಹುಲ್ ಸರ್. ಅವರು ನನ್ನ ಬಳಿಗೆ ಬಂದು, ನೀವು ನನ್ನ ತಂಡಕ್ಕಾಗಿ ಆಡಬಹುದೇ? ಎಂದು ಹೇಳಿದ್ದರು. ಅಂದಿನಿಂದ ನಾನು ತಂಡದಲ್ಲಿದ್ದೇನೆ. ನಾನು ಫ್ರಾಂಚೈಸಿಯ ನಾಯಕನಾಗಿದ್ದೇನೆ. ಈಗ ಅವರು ಹಿಂತಿರುಗುತ್ತಿದ್ದಾರೆ. ನಾನು ಅವರ ನಾಯಕತ್ವದಲ್ಲಿ ರಾಜಸ್ಥಾನ ತಂಡದಲ್ಲಿ ಆಟಗಾರನಾಗಿ ಆಡಿದ್ದೇನೆ. ಅವರು ಭಾರತ ತಂಡದ ತರಬೇತುದಾರರಾಗಿದ್ದಾಗ ನಾನು ರಾಷ್ಟ್ರೀಯ ತಂಡದ ಭಾಗವಾಗಿದ್ದೇನೆ. ನಾಯಕ-ತರಬೇತುದಾರರ ನಡುವಿನ ಸಂಬಂಧವು ತುಂಬಾ ವಿಶೇಷವಾಗಿದೆ. ನಾನು ಅವರಿಂದ ಬಹಳಷ್ಟು ಕಲಿಯಲು ತುಂಬಾ ಉತ್ಸುಕನಾಗಿದ್ದೇನೆ ಸಂಜು ತಿಳಿಸಿದ್ದಾರೆ.
ಬಟ್ಲರ್ ನನ್ನ ಆತ್ಮೀಯರಲ್ಲಿ ಒಬ್ಬರು. ನಾವು ಏಳು ವರ್ಷಗಳ ಕಾಲ ಒಟ್ಟಿಗೆ ಆಡಿದ್ದೇವೆ. ಈ ಸಮಯದಲ್ಲಿ, ನಮ್ಮ ಬ್ಯಾಟಿಂಗ್ ಜೊತೆಯಾಟದ ಅವಧಿ ತುಂಬಾ ಉದ್ದವಾಗಿದ್ದು, ನಾವು ಒಬ್ಬರನ್ನೊಬ್ಬರು ಚೆನ್ನಾಗಿ ಅರ್ಥಮಾಡಿಕೊಂಡಿದ್ದೇವೆ. ಅವರನ್ನು ತಂಡದಿಂದ ಕೈಬಿಡುವುದು ನನಗೆ ಅತ್ಯಂತ ಸವಾಲಿನ ನಿರ್ಧಾರಗಳಲ್ಲಿ ಒಂದಾಗಿತು. ಇಂಗ್ಲೆಂಡ್ ವಿರುದ್ಧದ ಸರಣಿಯ ಸಮಯದಲ್ಲಿ ನಾನು ಇನ್ನೂ ಅದರಿಂದ ಚೇತರಿಸಿಕೊಂಡಿಲ್ಲ ಎಂದು ಅವರಿಗೆ ಹೇಳಿದೆ ಎಂದು ಸಂಜು ಅವರು ಬಟ್ಲರ್ ಅವರನ್ನು ಕೈ ಬಿಟ್ಟಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.