ನವದೆಹಲಿ, ಜನವರಿ 30: ಸ್ಪಾಟ್ ಫಿಕ್ಸಿಂಗ್ ಆರೋಪದಡಿಯಲ್ಲಿ ಬಿಸಿಸಿಐನಿಂದ ಜಿವಾವಧಿ ನಿಷೇಧ ಶಿಕ್ಷೆಗೆ ಒಳಗಾಗಿರುವ ಶ್ರೀಶಾಂತ್ ಅವರನ್ನು ವಿಚಾರಣೆ ನಡೆಸುತ್ತಿರುವ ಸುಪ್ರೀಮ್ ಕೋರ್ಟ್, ನಿಮ್ಮನ್ನು ಬುಕ್ಕಿಗಳು ಸಂಪರ್ಕಿಸಿದಾಗ ಆ ಕೂಡಲೇ ವಿಚಾರವನ್ನು ಬಿಸಿಸಿಐ ಗಮನಕ್ಕೆ ಏಕೆ ತರಲಿಲ್ಲ ಎಂದು ಪ್ರಶ್ನಿಸಿದೆ.
ರೋ'ಹಿಟ್' ಪಾಲಿಗೆ ವೆರಿ ವೆರಿ ಸ್ಪೆಷಲ್ ಅನ್ನಿಸಲಿದೆ ಹ್ಯಾಮಿಲ್ಟನ್ ಏಕದಿನ ಪಂದ್ಯ!
ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸಿದ್ದ ಶ್ರೀಶಾಂತ್ ಐಪಿಎಲ್ ಸ್ಪಾಟ್ ಫಿಕ್ಸಿಂಗ್ನಲ್ಲಿ ಪಾಲ್ಗೊಂಡ ಆರೋಪದಡಿಯಲ್ಲಿ ಬಂಧಿಸಲ್ಪಟ್ಟಿದ್ದರು. ಶ್ರೀಶಾಂತ್ ನಡವಳಿಕೆಯನ್ನು ಗಮನಿಸಿ, ವಿಚಾರಣೆ ನಡೆಸಿದ ಕೋರ್ಚ್ ಅಂತಿಮವಾಗಿ 'ಉತ್ತಮವಾಗಿಲ್ಲ' ಎಂದು ತೀರ್ಮಾನಿಸಿದೆ.
People realizing that Sreesanth is an innocent & now India wants #JusticeForSreesanth pic.twitter.com/CIJ7p6EAqw
— Sharif(मासूम छोरा)😊 (@sharifgouri00g1) January 22, 2019
ವೇಗಿ ಶ್ರೀಶಾಂತ್ ಮತ್ತೆ ಕ್ರಿಕೆಟ್ ಆಡುವ ಇಂಗಿತ ವ್ಯಕ್ತಪಡಿಸಿದ್ದರು. ತಪ್ಪಿಗಾಗಿ ಕಣ್ಣೀರಿಟ್ಟಿದ್ದರು ಕೂಡ. ಆದರೆ ಶ್ರೀಶಾಂತ್ ಮೇಲೆ ಬಿಸಿಸಿಐ ನಿಧಿಸಿರುವ ನಿಷೇಧ ತೆರವಾಗಿಲ್ಲ. ಹಿಂದೊಮ್ಮೆ ಶ್ರೀಶಾಂತ್ ತಾನು ಬೇರೆ ದೇಶದ ಪರ ಆಡಲು ನಿರ್ಧರಿಸಿರುವುದಾಗಿ ಹೇಳಿಕೊಂಡಿದ್ದರು. ತಾನು ಬಿಸಿಸಿಐಯಿಂದ ಮಾತ್ರ ನಿಷೇಧಕ್ಕೊಳಗಾಗಿದ್ದೇನೆ, ಐಸಿಸಿಯಿಂದಲ್ಲ ಎಂದು ಆ ವೇಳೆ ಶ್ರೀಶಾಂತ್ ಹೇಳಿದ್ದರು.