ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೆಂಟರ್ ಹುದ್ದೆ ತೊರೆದ ನಂತರ, ಗೌತಮ್ ಗಂಭೀರ್ ಅವರು ಮೊದಲ ಬಾರಿಗೆ ಫ್ರಾಂಚೈಸಿ ಸಹ-ಮಾಲೀಕ ಹಾಗೂ ಬಾಲಿವುಡ್ ಸೂಪರ್ಸ್ಟಾರ್ ಶಾರುಖ್ ಖಾನ್ ಅವರನ್ನು ಭೇಟಿಯಾದರು.
ಈ ವರ್ಷ ಮೆಂಟರ್ ಆಗಿ ಫ್ರಾಂಚೈಸಿಗೆ ಮರಳಿದ ಗೌತಮ್ ಗಂಭೀರ್, ಕೆಕೆಆರ್ ತಂಡದ ಐಪಿಎಲ್ 2024ರ ಪ್ರಶಸ್ತಿ ಗೆಲುವಿನ ಮಾಸ್ಟರ್ ಮೈಂಡ್ ಆಗಿದ್ದರು. ಮಾಜಿ ಆರಂಭಿಕ ಬ್ಯಾಟರ್ ಭಾರತ ತಂಡದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲು ಕೆಕೆಆರ್ ತಂಡದ ಮಾರ್ಗದರ್ಶಕ ಹುದ್ದೆಯನ್ನು ತೊರೆದರು.

ಮಾಜಿ ಆರಂಭಿಕ ಬ್ಯಾಟರ್ ಗೌತಮ್ ಗಂಭೀರ್ ಅವರು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಂಡ ಬಳಿಕ, ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹದ ಸಂದರ್ಭದಲ್ಲಿ ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅವರೊಂದಿಗೆ ಬೆಚ್ಚಗಿನ ಅಪ್ಪುಗೆ ಹಂಚಿಕೊಂಡರು.
ಜುಲೈ 10ರಂದು ಗೌತಮ್ ಗಂಭೀರ್ ಅವರನ್ನು ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿ ಎಂದು ಬಿಸಿಸಿಐ ಅಧಿಕೃತವಾಗಿ ದೃಢಪಡಿಸಿತು. ಇದೀಗ ಅವರ ಮಾರ್ಗದರ್ಶನದಲ್ಲಿ ಮೊದಲ ನಿಯೋಜನೆಯು ಜುಲೈ 27ರಿಂದ ಪ್ರಾರಂಭವಾಗುವ ಶ್ರೀಲಂಕಾ ಪ್ರವಾಸವಾಗಿದೆ.

ಮುಂಬೈನಲ್ಲಿ ನಡೆದ ಅನಂತ್ ಅಂಬಾನಿ-ರಾಧಿಕಾ ಮರ್ಚೆಂಟ್ ವಿವಾಹಕ್ಕೆ ಶಾರುಖ್ ಖಾನ್ ಮತ್ತು ಗೌತಮ್ ಗಂಭೀರ್ ಅತಿಥಿಗಳಾಗಿದ್ದು, ಇದೀಗ ಇಬ್ಬರ ನಡುವಿನ ಅಪ್ಪುಗೆ ಹಾಗೂ ನಗುಮುಖದ ಮಾತುಕತೆಯ ವಿಡಿಯೋ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ಬಾಲಿವುಡ್ ಸೂಪರ್ಸ್ಟಾರ್ ಮತ್ತು ಕೆಕೆಆರ್ ಮಾಲೀಕ ಶಾರುಖ್ ಖಾನ್ ಅವರು ಗೌತಮ್ ಗಂಭೀರ್ ಅವರನ್ನು ತಬ್ಬಿಕೊಳ್ಳುವುದನ್ನು ಕಾಣಬಹುದು. ಶಾರುಖ್ ಖಾನ್ ಅವರನ್ನು ಭೇಟಿಯಾದ ನಂತರ ನಗುತ್ತಿದ್ದರು ಮತ್ತು ಇಬ್ಬರೂ ಮಾತುಕತೆ ಹಂಚಿಕೊಂಡರು.
ಆಟಗಾರ ಮತ್ತು ಮಾರ್ಗದರ್ಶಕರಾಗಿ ಕೆಕೆಆರ್ ತಂಡದ ಜೊತೆಗಿನ ಸಮಯದಲ್ಲಿ ಶಾರುಖ್ ಖಾನ್ ಯಾವಾಗಲೂ ತನಗೆ ಹೇಗೆ ಬೆಂಬಲ ನೀಡುತ್ತಿದ್ದರು ಎಂಬುದರ ಕುರಿತು ಗೌತಮ್ ಗಂಭೀರ್ ಯಾವಾಗಲೂ ಮಾತನಾಡುತ್ತಿದ್ದರು.
ಟೀಂ ಇಂಡಿಯಾಗೆ ಗೌತಮ್ ಗಂಭೀರ್ ಬಲವಾದ ಸಂದೇಶ
ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಜವಾಬ್ದಾರಿ ವಹಿಸಿಕೊಂಡ ನಂತರ, ಬಲವಾದ ಸಂದೇಶವನ್ನು ಹೊಂದಿದ್ದಾರೆ. ಆಟಗಾರನು ಉತ್ತಮ ಫಾರ್ಮ್ನಲ್ಲಿದ್ದರೆ, ಅವನು ಕ್ರಿಕೆಟ್ನ ಎಲ್ಲಾ ಮೂರು ಸ್ವರೂಪಗಳಲ್ಲಿ ಮುಂದುವರಿಯಬೇಕು ಮತ್ತು ಆಡಬೇಕು ಎಂದು ಹೇಳಿದ್ದಾರೆ.
"ವೃತ್ತಿಪರ ಕ್ರಿಕೆಟಿಗರನ್ನು ನೋಡಿ, ಅವರು ಬಹಳ ಕಡಿಮೆ ಅವಧಿಯನ್ನು ಪಡೆಯುತ್ತಾರೆ. ಅವರು ತಮ್ಮ ದೇಶಕ್ಕಾಗಿ ಆಡುವಾಗ ಎಷ್ಟು ಸಾಧ್ಯವೋ ಅಷ್ಟು ಆಡಲು ಬಯಸುತ್ತಾರೆ. ಆಟಗಾರರು ಉತ್ತಮ ಫಾರ್ಮ್ನಲ್ಲಿರುವಾಗ, ಎಲ್ಲಾ ಮೂರು ಸ್ವರೂಪಗಳನ್ನು ಆಡಲು ಮುಂದುವರಿಯಬೇಕು," ಎಂದು ಗೌತಮ್ ಗಂಭೀರ್ ತಿಳಿಸಿದರು.
ಮಾಜಿ ಕ್ರಿಕೆಟಿಗ ಹಾಗೂ ನೂತನ ಮುಖ್ಯ ಕೋಚ್ ಗೌತಮ್ ಗಂಭೀರ್ ಇದೀಗ ತಮ್ಮ ಸಹಾಯಕ ಸಿಬ್ಬಂದಿಯನ್ನು ಆಯ್ಕೆ ಮಾಡಿಕೊಳ್ಳುವತ್ತ ಗಮನಹರಿಸಿರುವುದರಿಂದ, ಅವರ ನೇಮಕಾತಿಯ ಹಣಕಾಸಿನ ವಿವರಗಳನ್ನು ಇನ್ನೂ ಬಹಿರಂಗಪಡಿಸಿಲ್ಲ.