ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ನಡೆಯುತ್ತಿದೆ. ಈ ಯುದ್ಧದ ಪರಿಣಾಮ ವಿಮಾನಯಾನದಲ್ಲೂ ಏರು ಪೇರು ಉಂಟು ಮಾಡಿದೆ. ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರಿಗೂ ಇದರ ಬಿಸಿ ತಟ್ಟಿದೆ. ಸಿಂಧು ಸದ್ಯ ದುಬೈನಲ್ಲಿ ಸಿಲುಕಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಸಿಂಧು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಸಿಂಧು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಇಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗುತ್ತಿದೆ. ಈ ಸ್ಥಿತಿ ನಿಜಕ್ಕೂ ಭಯಾನಕವಾಗಿದೆ. ಹಲವು ಗೊಂದಲದ ವಿಡಿಯೋಗಳು ಹೊರಬರುತ್ತಿವೆ. ನಿಜ ಅಂದರೆ ಇದೇ ವಾಸ್ತವ ಎಂದು ಅವರು ಬರೆದುಕೊಂಡಿದ್ದಾರೆ.

ದುಬೈ ಯಾವಾಗಲೂ ಸುರಕ್ಷಿತ ಹಾಗೂ ಜೀವನ ಉತ್ಸಾಹದಿಂದ ಕೂಡಿದ ನಗರ. ಈ ನಗರವನ್ನು ನಾನು ತುಂಬ ಇಷ್ಟ ಪಡುತ್ತೇನೆ. ಈ ಕ್ಷಣವನ್ನು ಅರ್ಥಮಾಡಿಕೊಳ್ಳಲು ನನಗೆ ಕಷ್ಟವಾಗುತ್ತಿದೆ. ನನ್ನ ಸುರಕ್ಷತೆಯ ಬಗ್ಗೆ ನನಗೆ ಸಂದೇಶ ಕಳಿಸುತ್ತಿರುವ ಎಲ್ಲರಿಗೂ ಧನ್ಯವಾದಗಳು ಎಂದು ಬರೆದಿದ್ದಾರೆ.
"ನಾನು ಸುರಕ್ಷಿತವಾಗಿದ್ದೇನೆ. ನಾನು ನನ್ನ ತಂಡದೊಂದಿಗೆ ದುಬೈನಲ್ಲಿ ಸಿಲುಕಿಕೊಂಡಿದ್ದೇನೆ. ಇರಾನ್ನೊಂದಿಗಿನ ಯುದ್ಧದ ಪರಿಸ್ಥಿತಿಯಿಂದ ಇಲ್ಲಿ ನಿರಂತರವಾಗಿ ಬದಲಾಗುತ್ತಿರುವುದರಿಂದ ನಾವು ಇಲ್ಲಿ ಸುರಕ್ಷಿತವಾಗಿದ್ದೇವೆ. ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆ ಇದೆ. ಇಲ್ಲಿಯೇ ಹಲವು ಕುಟುಂಬಗಳು ಸಿಲುಕಿಕೊಂಡಿವೆ. ನಾವು ಈ ಸನ್ನಿವೇಶದಿಂದ ಆದಷ್ಟು ಬೇಗ ಹೊರ ಬರುವ ಆಶಯವನ್ನು ಹೊಂದಿದ್ದೇವೆ" ಎಂದು ಸಿಂಧು ಪೋಸ್ಟ್ ಮಾಡಿದ್ದಾರೆ.
ಇಂತಹ ಕ್ಷಣಗಳೇ ನಮಗೆ ನಮ್ಮ ಸಾಮಾನ್ಯ ಜೀವನ ಎಷ್ಟು ಕಷ್ಟಕರವಾಗಿ ಎಂದು ನೆನಪಿಸುತ್ತದೆ. ಈ ಸಂಕಷ್ಟದ ಸಮಯದಲ್ಲಿ ಸಿಲುಕಿಕೊಂಡಿರುವ ಸುರಕ್ಷತೆ ಹಾಗೂ ಶಾಂತಿಗಾಗಿ ನಾನು ಪ್ರಾರ್ಥಿಸುತ್ತೇನೆ ಎಂದು ತಿಳಿಸಿದ್ದಾರೆ.
ಭಾರತದ ಸ್ಟಾರ್ ಆಟಗಾರ್ತಿ ಪಿವಿ ಸಿಂಧು ಮಂಗಳವಾರದಿಂದ ಆರಂಭವಾಗಲಿರುವ ಆಲ್ ಇಂಗ್ಲೆಂಡ್ ಓಪನ್ಗಾಗಿ ಬರ್ಮಿಂಗ್ಹ್ಯಾಮ್ಗೆ ತೆರಳುತ್ತಿದ್ದರು.ವಿಮಾನ ನಿಲ್ದಾಣದ ಕಾರ್ಯಾಚರಣೆಗಳು ಸ್ಥಗಿತಗೊಂಡಾಗ ದುಬೈ ಅವರ ಸಾರಿಗೆ ಸಂಪರ್ಕ ಕೊಂಡಿಯಾಗಿತ್ತು. ಈ ಅಡಚಣೆಯು ಮುಂದಿನ ಮಂಗಳವಾರ ಪ್ರಾರಂಭವಾಗಲಿರುವ ಟೂರ್ನಮೆಂಟ್ಗಾಗಿ ಸಿಂಧು ಸಮಯಕ್ಕೆ ಸರಿಯಾಗಿ ಇಂಗ್ಲೆಂಡ್ ತಲುಪಲು ಸಾಧ್ಯವಾಗುತ್ತದೆಯೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ. ಇದಕ್ಕೂ ಮೊದಲು, ಸಿಂಧು ಇನ್ಸ್ಟಾಗ್ರಾಮ್ ನಲ್ಲಿ ಜನದಟ್ಟಣೆಯಿಂದ ಕೂಡಿದ ದುಬೈ ವಿಮಾನ ನಿಲ್ದಾಣದ ವೀಡಿಯೊವನ್ನು ಹಂಚಿಕೊಂಡಿದ್ದರು.