
ಬ್ಯಾಟಿಂಗ್ನಲ್ಲಿ ಎಡವಿದ ಸರ್ವಿಸಸ್
ಕರ್ನಾಟಕ ತಂಡ ನೀಡಿದ 143 ರನ್ಗಳ ಗುರಿಯನ್ನು ಬೆನ್ನತ್ತಿದ ಸರ್ವಿಸಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 109 ರನ್ ಗಳಿಸಿತು. ಸರ್ವಿಸಸ್ ಪರ ರವಿ ಚವ್ಹಾಣ್ 4, ಲಖನ್ ಸಿಂಗ್ 0, ನಾಯಕ ಜಿ ರಾಹುಲ್ ಸಿಂಗ್ 34, ರಜತ್ ಪಲಿವಾಲ್ 12, ಮೋಹಿತ್ ಅಹಲಾವತ್ 0, ಅಮಿತ್ ಪಚ್ಚಾರ 23, ದಿವೇಶ್ ಪಠಾಣಿಯಾ 14, ಸಚ್ಚಿದಾನಂದ ಪಾಂಡೆ 8, ವಿಕಾಸ್ ಯಾದವ್ ಅಜೇಯ 1 ಮತ್ತು ರಾಹುಲ್ ಸಿಂಗ್ ಅಜೇಯ 5 ರನ್ ಕಲೆ ಹಾಕಿದರು. ಈ ಮೂಲಕ ಸರ್ವಿಸಸ್ ತಂಡದ ಪರ ಯಾವೊಬ್ಬ ಆಟಗಾರನೂ ಕೂಡ ಅಬ್ಬರದ ಬ್ಯಾಟಿಂಗ್ ನಡೆಸದ ಕಾರಣ ಕರ್ನಾಟಕ ವಿರುದ್ಧ ಸರ್ವಿಸಸ್ ಸೋಲುಂಡಿದೆ.

ಕರ್ನಾಟಕ ಬೌಲರ್ಗಳ ಅದ್ಭುತ ಪ್ರದರ್ಶನ
ಕರ್ನಾಟಕ ಸರ್ವಿಸಸ್ ತಂಡಕ್ಕೆ ಗೆಲ್ಲಲು 143 ರನ್ಗಳ ಸಾಧಾರಣ ಗುರಿಯನ್ನು ನೀಡಿದ್ದರೂ ಸಹ ಸರ್ವಿಸಸ್ ತಂಡ ಆ ಗುರಿಯನ್ನು ಮುಟ್ಟುವಲ್ಲಿ ವಿಫಲವಾಯಿತು. ಸರ್ವಿಸಸ್ ತಂಡದ ಮೇಲೆ ಕರ್ನಾಟಕ ಬೌಲರ್ಗಳು ನಡೆಸಿದ ಅದ್ಭುತ ಬೌಲಿಂಗ್ ದಾಳಿಯಿಂದ ಸರ್ವಿಸಸ್ ತಂಡವನ್ನು ಕೇವಲ 109 ರನ್ಗಳಿಗೆ ಕಟ್ಟಿಹಾಕುವಲ್ಲಿ ಕರ್ನಾಟಕ ಯಶಸ್ವಿಯಾಯಿತು. 20 ಓವರ್ಗಳಲ್ಲಿ ಸರ್ವಿಸಸ್ ತಂಡದ 8 ವಿಕೆಟ್ಗಳನ್ನು ಪಡೆದ ಕರ್ನಾಟಕ ಬೌಲರ್ಗಳು ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕರ್ನಾಟಕ ತಂಡ ವಿಜಯ್ ಕುಮಾರ್ ವೈಶಾಖ್ 3 ವಿಕೆಟ್, ದರ್ಶನ್ ಎಂಬಿ 2 ವಿಕೆಟ್, ಕೃಷ್ಣಪ್ಪ ಗೌತಮ್ ಮತ್ತು ಜಗದೀಶ್ ಸುಚಿತ್ ತಲಾ 1 ವಿಕೆಟ್ ಕಬಳಿಸಿದರು.

ಹ್ಯಾಟ್ರಿಕ್ ಗೆಲುವು, ಅಂಕಪಟ್ಟಿಯಲ್ಲಿ ಅಗ್ರಸ್ಥಾನ
ಈ ಬಾರಿಯ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ತನ್ನ ಮೊದಲೆರಡು ಪಂದ್ಯಗಳಲ್ಲಿ ಮುಂಬೈ ಮತ್ತು ಛತ್ತೀಸ್ ಗಢ ವಿರುದ್ಧ ಭರ್ಜರಿ ಜಯ ಸಾಧಿಸಿದ್ದ ಕರ್ನಾಟಕ ಇದೀಗ ಸರ್ವಿಸಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವುದರ ಮೂಲಕ ಹ್ಯಾಟ್ರಿಕ್ ಗೆಲುವನ್ನು ಕಂಡಿದೆ. ಅಷ್ಟೇ ಅಲ್ಲದೆ 12 ಅಂಕಗಳನ್ನು ಪಡೆಯುವುದರ ಮೂಲಕ ಅಂಕ ಪಟ್ಟಿಯಲ್ಲಿ ಕರ್ನಾಟಕ ಅಗ್ರ ಸ್ಥಾನಕ್ಕೇರಿದೆ.


Click it and Unblock the Notifications












