ಮ್ಯಾನ್ಚೆಸ್ಟರ್: ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಧ್ಯಕ್ಷ ಸೌರವ್ ಗಂಗೂಲಿ ಸೆಪ್ಟೆಂಬರ್ 22 ಅಥವಾ 23ರಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ (ಇಸಿಬಿ) ಕ್ರಿಕೆಟ್ ಬೋರ್ಡ್ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಟಾಮ್ ಹ್ಯಾರಿಸನ್ ಮತ್ತು ಐಯಾನ್ ವಾಟ್ಮೋರ್ ಅವರನ್ನು ಭೇಟಿಯಾಗಲಿದ್ದಾರೆ.
ಭಾರತ vs ಇಂಗ್ಲೆಂಡ್ 5ನೇ ಟೆಸ್ಟ್ ರದ್ದಿಗೆ ಅಸಲಿ ಕಾರಣ ಹೇಳಿದ ದಿನೇಶ್ ಕಾರ್ತಿಕ್
ಸೆಪ್ಟೆಂಬರ್ 22ರಿಂದ ವೈಯಕ್ತಿಕ ವಿಚಾರವಾಗಿ ಯುನೈಟೆಡ್ ಕಿಂಗ್ಡಮ್ಗೆ ಬರಲಿರುವ ಟೀಮ್ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿ, ಟಾಮ್ ಹ್ಯಾರಿಸನ್ ಮತ್ತು ಐಯಾನ್ ವಾಟ್ಮೋರ್ ಅವರನ್ನು ಭೇಟಿಯಾಗಿ ಮುಂದಿನ ವರ್ಷ ಉಳಿದಿರುವ ಈ ಒಂದು ಟೆಸ್ಟ್ ಪಂದ್ಯವನ್ನು ನಡೆಸಲು ಅವಕಾಶವಿದೆಯೇ ಎಂದು ಚರ್ಚಿಸಲಿದ್ದಾರೆ ಎನ್ನಲಾಗಿದೆ.
ಮ್ಯಾನ್ಚೆಸ್ಟರ್ನ ಓಲ್ಡ್ ಟ್ರಾಫರ್ಡ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಐದನೇ ಮತ್ತು ಕೊನೇಯ ಟೆಸ್ಟ್ ಪಂದ್ಯ ಕೋವಿಡ್-19 ಭೀತಿಯಿಂದಾಗಿ ರದ್ದಾಗಿತ್ತು. ಪಂದ್ಯ ರದ್ದಾಗಿದ್ದರಿಂದ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ಗೆ ಸುಮಾರು 40 ಮಿಲಿಯನ್ ಪೌಂಡ್ಸ್ (4,07,05,65,816 ರೂ.) ನಷ್ಟವಾಗಿದೆ. ಇದರ ಬಗ್ಗೆಯೂ ಇಂಗ್ಲೆಂಡ್ ಭೇಟಿಯ ವೇಳೆ ಗಂಗೂಲಿ ಚರ್ಚಿಸಲಿದ್ದಾರೆ.
ಮ್ಯಾಂಚೆಸ್ಟರ್ ಟೆಸ್ಟ್ ರದ್ದು: ಇಂಗ್ಲೆಂಡ್ಗೆ ಕೋಟಿ ಕೋಟಿ ನಷ್ಟ; ರದ್ದಾದ ಈ ಪಂದ್ಯ ಮತ್ತೆ ನಡೆಯುತ್ತೆ!
"ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ಗೆ ಸುಮಾರು 40 ಮಿಲಿಯನ್ ಪೌಂಡ್ಸ್ ನಷ್ಟವಾಗಿದೆ. ಇದರಲ್ಲಿ 30 ಮಿಲಿಯನ್ ಪೌಂಡ್ಸ್ (3,05,16,07,599 ರೂ.) ಪ್ರಸಾರಕಕ್ಕೆ ಸಂಬಂಧಿಸಿ ಮತ್ತು ಉಳಿದ 10 ಮಿಲಿಯನ್ ಪೌಂಡ್ಸ್ (1,01,75,39,000 ರೂ.) ಟಿಕೆಟ್ ಮತ್ತು ಆತಿಥ್ಯಕ್ಕೆ ಸಂಬಂಧಿಸಿ ನಷ್ಟವಾಗಿದೆ," ಎಂದು ಮೂಲವೊಂದು ತಿಳಿಸಿದೆ.