ಪಂದ್ಯಗಳನ್ನು ಗೆಲ್ಲಲು ಶ್ರೀಲಂಕಾ ನಿರ್ಭೀತ ಆಟ ಆಡಬೇಕು: ಕುಸಾಲ್ ಪೆರೆರ

ಕೊಲಂಬೋ: ಶ್ರೀಲಂಕಾ ರಾಷ್ಟ್ರೀಯ ಕ್ರಿಕೆಟ್ ತಂಡ ಪಂದ್ಯಗಳನ್ನು ಹೆಚ್ಚು ಗೆಲ್ಲಬೇಕಾದರೆ ನಿರ್ಭೀತ ಆಟ ಆಡುವುದನ್ನು ಮೊದಲು ಶುರು ಮಾಡಬೇಕು ಎಂದು ಶ್ರೀಲಂಕಾ ಏಕದಿನ ತಂಡದ ನಾಯಕರಾಗಿ ಆರಿಸಲ್ಪಟ್ಟಿರುವ ಕುಸಾಲ್ ಪರೆರಾ ಹೇಳಿದ್ದಾರೆ.
'ಪಂದ್ಯಗಳನ್ನು ನಾವು ಗೆಲ್ಲಬೇಕಾದರೆ ನಿರ್ಭೀತಿಯ ಆಟ ನೀಡೋದು ಅಗತ್ಯವಾಗಿದೆ. ಪಂದ್ಯ ಸೋಲುವ ಬಗ್ಗೆ ನಾವು ಭೀತಿಗೊಳ್ಳಬಾರದು. ನೀವು ನಿಮ್ಮ ಸ್ಥಾನದ ಬಗ್ಗೆ ಚಿಂತಿಸಲಾರಂಭಿಸಿದೆ ನೀವು ನಿಮ್ಮ 100 ಶೇ. ಆಟ ನೀಡಲು ಸಾಧ್ಯವಾಗುವುದಿಲ್ಲ. ಆಟಗಾರರು ಮೈದಾನಕ್ಕಿಳಿದು ಅವರದ್ದೇನಿದೆಯೇ ಆ ಕೊಡುಗೆ ನೀಡಬೇಕೆಂದು ನಾನು ಹೇಳುತ್ತಿದ್ದೇನೆ,' ಎಂದು ಕುಸಾಲ್ ಪೆರೆರಾ ಹೇಳಿದ್ದಾರೆ.
ಒಡಿಐ ಸೂಪರ್ ಲೀಗ್ ಭಾಗವಾಗಿ ಬಾಂಗ್ಲಾದೇಶದ ಶೇರ್ ಇ ಬಾಂಗ್ಲಾ ಸ್ಟೇಡಿಯಂನಲ್ಲಿ ಮೇ 23, 25, 28ಕ್ಕೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ. ಶ್ರೀಲಂಕಾ ತಂಡ ಮೇ 16ಕ್ಕೆ ಧಾಕಾದಲ್ಲಿ ಇಳಿಯಲಿದೆ. ಈ ಸರಣಿ ಸಂಬಂಧ ಈಗಾಗಲೇ ಲಂಕಾ ತಂಡ ಪ್ರಕಟವಾಗಿದೆ.
ಶ್ರೀಲಂಕಾ ಏಕದಿನ ತಂಡ
ಕುಸಾಲ್ ಪೆರೆರಾ (ಸಿ), ಕುಸಾಲ್ ಮೆಂಡಿಸ್ (ವಿಸಿ), ದನುಷ್ಕಾ ಗುಣತಿಲಕ, ಧನಂಜಯ ಡಿ ಸಿಲ್ವಾ, ಪಾತುಮ್ ನಿಸ್ಸಂಕಾ, ದಾಸುನ್ ಶಾನಕಾ, ಆಶೆನ್ ಬಂದರಾ, ವನಿಂದು ಹಸರಂಗ, ಇಸುರು ಉದಾನ, ಅಕಿಲಾ ದನಂಜಯ, ನಿರೋಶನ್ ಡಿಕ್ವೆಲ್ಲ, ದುಷ್ಮಂತಾ ಚಮೀರಾ, ರಮೇಶ್ ಮೆಂಡಿಸ್, ಅಸಿಥಾ ಫರ್ನಾಂಡೊ, ಲಕ್ಷನ್ ಸಂದಕನ್, ಚಮಿಕಾ ಕರುಣರತ್ನ, ಬಿನುರಾ ಫರ್ನಾಂಡೊ, ಶಿರನ್ ಫರ್ನಾಂಡೊ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications