ತಪ್ಪಿಗೆ ಬೆಲೆ ತೆತ್ತಿದ್ದಾರೆ
ಆಸ್ಟ್ರೇಲಿಯಾ ಕ್ರಿಕೆಟ್ನ ಮುಖ್ಯಸ್ಥ ಕೆವಿನ್ ರೋಬರ್ಟ್ ಈ ಬಗ್ಗೆ ಪ್ರತಿಕ್ರಿಯಿಸಿ, 'ಸ್ಮಿತ್-ವಾರ್ನರ್ ತಪ್ಪಿಗೆ ಬೆಲೆ ತೆತ್ತಿದ್ದಾರೆ. ಅವರ ಶಿಕ್ಷೆಯ ಕಾಲಾವಧಿ ಮುಗಿದಿದೆ' ಎಂದಿದ್ದಾರೆ. ಸ್ಮಿತ್-ವಾರ್ನರ್ ಮರಳಿಕೆ ತಂಡದಲ್ಲಿ ವ್ಯತ್ಯಾಸ ತರಲಾರದು ಎಂದು ರೋಬರ್ಟ್ ಹೇಳಿದ್ದಾರಾದರೂ ಅಂತಿಮ ತಂಡದಲ್ಲಿ ಇಬ್ಬರೂ ಕಾಣಿಸಿಕೊಂಡರೂ ಅಚ್ಚರಿಯಿಲ್ಲ.
ವಿಶ್ವಕಪ್ ತಂಡ ಆಯ್ಕೆ ಕಠಿಣ
ನಿಷೇಧ ಮುಗಿಸಿ ಆಸ್ಟ್ರೇಲಿಯಾ ತಂಡಕ್ಕೆ ಹಿಂದಿರುಗಿರುವ ಬಗ್ಗೆ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ಮಾತನಾಡಿ, 'ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ತಂಡಕ್ಕೆ ಮರಳಿರುವುದರಿಂದ ವಿಶ್ವಕಪ್ಗೆ ತಂಡವನ್ನು ಆರಿಸುವುದು ಇನ್ನಷ್ಟು ಕ್ಲಿಷ್ಟವೆನಿಸಿದೆ' ಎಂದಿದ್ದಾರೆ.
ಕಳೆದ ವರ್ಷ ಐಪಿಎಲ್ನಿಂದ ಹೊರಗೆ
ಸ್ಮಿತ್-ವಾರ್ನರ್ ಇಬ್ಬರೂ ಸದ್ಯ ಐಪಿಎಲ್ನಲ್ಲಿ ಕ್ರಮವಾಗಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ನಿಷೇಧದ ಬಳಿಕವೂ ಕಳೆದ ವರ್ಷ ಇಬ್ಬರನ್ನು ಐಪಿಎಲ್ನಲ್ಲಿ ಆಡಿಸಲು ಅವಕಾಶವಿತ್ತು. ಯಾಕೆಂದರೆ ನಿಷೇಧವು ಕ್ಲಬ್ ಮಾದರಿಯ ಕ್ರಿಕೆಟ್ಗಳಿಗೆ ಅನ್ವಯಿಸುವುದಿಲ್ಲ, ಬದಲಿಗೆ ರಾಜ್ಯ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ಗಳಿಗೆ ಅನ್ವಯಿಸುತ್ತೆ.
ಇಬ್ಬರೂ ಐಪಿಎಲ್ನಲ್ಲಿ ಭಾಗಿ
ಕಳೆದ ವರ್ಷ ಬಿಸಿಸಿಐ ಮುನ್ನೆಚ್ಚರಿಕೆಯಾಗಿ ಇಬ್ಬರನ್ನು ಐಪಿಎಲ್ನಿಂದ ಹೊರಗಿಟ್ಟಿತ್ತು. ಈ ಬಾರಿ ಇಬ್ಬರೂ ನಿಷೇಧ ಅಂತ್ಯಕ್ಕೂ ಮುನ್ನವೇ ಐಪಿಎಲ್ನಲ್ಲಿ ಮೈದಾನಕ್ಕಿಳಿದಿದ್ದರು. ಮಾರ್ಚ್ 24ರಂದು ವಾರ್ನರ್ ಹೈದರಾಬಾದ್ ತಂಡವನ್ನು, ಮಾರ್ಚ್ 25ರಂದು ಸ್ಮಿತ್ ರಾಜಸ್ಥಾನ್ ತಂಡದ ಪರ ಆಡಿದ್ದರು.