ನವದೆಹಲಿ, ಏಪ್ರಿಲ್ 7: ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ಭಾರತದ ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ 59 ಲಕ್ಷ ರೂ. ದೇಣಿಗೆ ನೀಡಿದ್ದಾರೆ. ಟೆಸ್ಟ್ ಸ್ಪೆಷಾಲಿಸ್ಟ್ ಚೇತೇಶ್ವರ ಪೂಜಾರ ಕೂಡ ಪಿಎಂ ಕೇರ್ಸ್ಗೆ ಹಣ ದೇಣಿಗೆ ನೀಡಿದ್ದಾರೆ. ಆದರೆ ಎಷ್ಟು ಹಣ ನೀಡಿದ್ದೆಂದು ಪೂಜಾರ ಎಲ್ಲೂ ಹೇಳಿಕೊಂಡಿಲ್ಲ.
ಕೊರೊನಾ ವೈರಸ್ ಹಾವಳಿಗೆ ಬರೊಬ್ಬರಿ 8 ಕ್ರಿಕೆಟಿಗರ ಮದುವೆ ಮುಂದಕ್ಕೆ!
ಈಗ ಆಡುತ್ತಿರುವ ಆಟಗಾರರಲ್ಲಿ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ, ಚೇತೇಶ್ವರ ಪೂಜಾರ ಮತ್ತು ಇನ್ನೊಂದಿಷ್ಟು ಮಂದಿ ಕೊರೊನಾವೈರಸ್ ವಿರುದ್ಧದ ಹೋರಾಟಕ್ಕೆ ನೆರವು ನೀಡಿದ್ದಾರೆ. ಉಳಿದಂತೆ ಪಿವಿ ಸಿಂಧು, ಮೇರಿ ಕೋಮ್, ಬಿಸಿಸಿಐ, ಹಾಕಿ ಇಂಡಿಯಾ ಇಂಥ ಹಲವಾರು ಕ್ರೀಡಾಸಂಸ್ಥೆಗಳು ಮತ್ತು ಕ್ರೀಡಾಪಟುಗಳು ನೆರವಿನ ಹಸ್ತ ಚಾಚಿದ್ದಾರೆ.
ಗೆರೆ ದಾಟಬೇಡಿ: ಜಸ್ಪ್ರೀತ್ ಬೂಮ್ರಾ ಮುಂದಿಟ್ಟು ಪಾಕಿಸ್ತಾನ ಎಚ್ಚರಿಕೆ!
ಈಗ ಕಾಮೆಂಟೇಟರ್ ಆಗಿ, ಕ್ರಿಕೆಟ್ ವಿಶ್ಲೇಶಕರಾಗಿರುವ ಸುನಿಲ್ ಗವಾಸ್ಕರ್ ತಾನು ದೇಣಿಗೆ ನೀಡಿದ್ದು ಎಷ್ಟು ಹಣ ಎಂದು ಹೇಳಿಕೊಂಡಿಲ್ಲ. ಆದರೆ ಮುಂಬೈ ನಾಯಕ ಅಮೋಲ್ ಮುಜುಂದಾರ್ ಟ್ವೀಟ್ ಮಾಡಿದ ಬಳಿಕ ಗಾವಸ್ಕರ್ಗೆ ಹತ್ತಿರದವರೊಬ್ಬರು ದೇಣಿಗೆ ಹಣದ ಮೌಲ್ಯವನ್ನು ಖಾತರಿಪಡಿಸಿದ್ದಾರೆ.
ಭಾನುವಾರ 9pmಗೆ ಪಟಾಕಿ ಸಿಡಿಸಿದವರ ವಿರುದ್ಧ ಕ್ರಿಕೆಟಿಗರು ಕಿಡಿ
'ಕೊರೊನಾವೈರಸ್ ಪರಿಹಾರಾರ್ಥವಾಗಿ ಸುನಿಲ್ ಗವಾಸ್ಕರ್ 59 ಲಕ್ಷ ರೂ. ದೇಣಿಗೆ ನೀಡಿರುವುದಾಗಿ ಕೇಳಲ್ಪಟ್ಟೆ. ಇದರಲ್ಲಿ 35 ಲಕ್ಷ ರೂ. ಪಿಎಂ ಕೇರ್ಸ್ ಫಂಡ್ ಮತ್ತು 24 ಲಕ್ಷ ರೂ.ವನ್ನು ಸಿಎಂ ಮಹಾರಾಷ್ಟ್ರ ಫಂಡ್ಗೆ ಗವಾಸ್ಕರ್ ದೇಣಿಗೆ ನೀಡಿದ್ದಾರೆ. ಇವರ ಈ ನಡೆಗೆ ಮೆಚ್ಚುಗೆ ಸೂಚಿಸಬೇಕು,' ಎಂದು ಮಜುಂದಾರ್ ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.