For Quick Alerts
ALLOW NOTIFICATIONS  
For Daily Alerts
 

Asia Cup 2023: ಭಾರತ ತಂಡದ ಸಮಸ್ಯೆ ನಾಲ್ಕನೇ ಕ್ರಮಾಂಕವಲ್ಲ! ಸುನಿಲ್ ಗವಾಸ್ಕರ್ ಹೇಳಿದ್ದೇನು?

ರೋಹಿತ್ ಶರ್ಮಾ ನಾಯಕತ್ವದ ಬಗ್ಗೆ ಅಗ್ನಿಪರೀಕ್ಷೆ ಎದುರಾಗಿದೆ. ಅವರ ನಾಯಕತ್ವದಲ್ಲಿ ಕಳೆದ ಬಾರಿಯ ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ಕಪ್ ಗೆಲ್ಲುವಲ್ಲಿ ವಿಫಲವಾಗಿದೆ. ಈ ಬಾರಿ ಏಷ್ಯಾಕಪ್ ಮತ್ತು ಏಕದಿನ ವಿಶ್ವಕಪ್‌ ಗೆಲ್ಲುವ ವಿಶ್ವಾಸದಲ್ಲಿರುವ ಭಾರತಕ್ಕೆ ರೋಹಿತ್ ಶರ್ಮಾ ನಾಯಕತ್ವ ಮುಖ್ಯವಾಗಲಿದೆ.

ಕಳೆದ ದಶಕದಲ್ಲಿ ಭಾರತವು ಐಸಿಸಿ ಪ್ರಶಸ್ತಿಯನ್ನು ಗೆಲ್ಲುವಲ್ಲಿ ವಿಫಲವಾಗಿದ್ದು, ನಾಯಕತ್ವದ ಪಾತ್ರದಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದೆ. ವಿರಾಟ್ ಕೊಹ್ಲಿ ಭಾರತ ತಂಡವನ್ನು ಹೊಸ ಎತ್ತರಕ್ಕೆ ಕೊಂಡೊಯ್ದರು ಆದರೆ ನಾಯಕನಾಗಿ ಐಸಿಸಿ ಪ್ರಶಸ್ತಿಯನ್ನು ಗಳಿಸಲು ಸಾಧ್ಯವಾಗಲಿಲ್ಲ.

 Sunil Gavaskar Offers Candid Perspective on Rohit Sharmas Leadership

ನಾಯಕನಾಗಿ ರೋಹಿತ್ ಅವರ ಬಗ್ಗೆ ಭಾರತದ ದಂತಕಥೆ ಸುನಿಲ್ ಗವಾಸ್ಕರ್ ಅವರನ್ನು ಕೇಳಿದಾಗ, ಅವರು ಗೆಲ್ಲುವ ಟ್ರೋಫಿಗಳ ಸಂಖ್ಯೆಯಿಂದ ರೋಹಿತ್ ಶರ್ಮಾರ ನಾಯಕತ್ವವನ್ನು ನಿರ್ಣಯಿಸಲಾಗುತ್ತದೆ ಎಂದು ಹೇಳಿದರು.

ಆಲ್‌ರೌಂಡರ್ ಗಳ ಕೊರತೆ!

"ಅಂತಿಮವಾಗಿ ನೀವು ಗೆದ್ದಿರುವ ಟ್ರೋಫಿಗಳ ಸಂಖ್ಯೆ, ನೀವು ಗಳಿಸಿದ ಗೆಲುವುಗಳ ಸಂಖ್ಯೆಯಿಂದ ನಿಮ್ಮನ್ನು ನಿರ್ಣಯಿಸಲಾಗುತ್ತದೆ. ಈ ಎರಡು ಪಂದ್ಯಾವಳಿಗಳನ್ನು ಗೆಲ್ಲುವುದು ಅವರನ್ನು ಭಾರತದ ಶ್ರೇಷ್ಠ ನಾಯಕರಲ್ಲಿ ಒಬ್ಬರನ್ನಾಗಿ ಮಾಡುತ್ತದೆ" ಎಂದು ಸುನಿಲ್ ಗವಾಸ್ಕರ್ ಹೇಳಿದ್ದಾರೆ ಎಂದು ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.

ವಿಶ್ವಕಪ್‌ಗೆ ಭಾರತ ತಂಡದ ಸನ್ನದ್ಧತೆಯ ಬಗ್ಗೆ ಗವಾಸ್ಕರ್ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಏಕದಿನ ಸ್ವರೂಪದಲ್ಲಿ ನಾಲ್ಕನೇ ಕ್ರಮಾಂಕ ತಂಡದ ದೊಡ್ಡ ಸಮಸ್ಯೆಗಳಲ್ಲಿ ಒಂದಾಗಿದೆ ಎಂದು ಅನೇಕ ತಜ್ಞರು ಭಾವಿಸಿದರೆ, ಗವಾಸ್ಕರ್ ಅವರು ಆಲ್ ರೌಂಡರ್‌ಗಳ ಕೊರತೆ ಕಾಡುತ್ತಿದೆ ಎಂದು ಹೇಳಿದ್ದಾರೆ.

"ಎಲ್ಲಕ್ಕಿಂತ ಹೆಚ್ಚಾಗಿ, ಅದೃಷ್ಟ ಬಹಳ ಮುಖ್ಯವಾಗಿದೆ ಮತ್ತು 1983, 1985 ಮತ್ತು 2011 ರಲ್ಲಿ ನೀವು ತಂಡಗಳನ್ನು ನೋಡಿದರೆ, ಉನ್ನತ ದರ್ಜೆಯ ಆಲ್‌ರೌಂಡರ್‌ಗಳನ್ನು ಹೊಂದಿದ್ದರು. ನೀವು 7-8-9 ಓವರ್‌ಗಳನ್ನು ಬೌಲ್ ಮಾಡುವ ಬ್ಯಾಟರ್‌ಗಳನ್ನು ಹೊಂದಿದ್ದೀರಿ. ಕೆಳ ಕ್ರಮಾಂಕದಲ್ಲಿ ಬ್ಯಾಟ್ ಮಾಡಬಲ್ಲ ಬೌಲರ್‌ಗಳು ಇದ್ದರು. ಅದು ಆ ತಂಡಗಳಿಗೆ ಪ್ಲಸ್ ಆಗಿತ್ತು. ಧೋನಿ ತಂಡವನ್ನು ಸಹ ನೋಡುತ್ತೀರಿ, ಸುರೇಶ್ ರೈನಾ, ಯುವರಾಜ್ ಸಿಂಗ್, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್ ಎಲ್ಲರೂ ಬೌಲ್ ಮಾಡಬಲ್ಲರು. ಇದು ದೊಡ್ಡ ಪ್ಲಸ್ ಆಗಿತ್ತು. ಆದ್ದರಿಂದ, ಯಾವುದೇ ತಂಡ ಆಲ್ ರೌಂಡರ್‌ಗಳನ್ನು ಹೊಂದಿದ್ದರೆ" ಹೆಚ್ಚು ಅನುಕೂಲ ಎಂದು ಹೇಳಿದರು.

"2022ರಲ್ಲಿ ಟಿ20 ವಿಶ್ವಕಪ್ ಗೆದ್ದ ಇಂಗ್ಲೆಂಡ್ ತಂಡವನ್ನು ನೋಡಿದರೆ, ಅಲ್ಲಿ ಆಲ್‌ರೌಂಡರ್‌ಗಳ ಪಾತ್ರ ಮುಖ್ಯವಾಗುತ್ತದೆ. ಆದ್ದರಿಂದ, ಯಾವುದೇ ತಂಡದ ಗೆಲುವಿಗೆ ಆಲ್ ರೌಂಡರ್‌ಗಳು ಪ್ರಮುಖ ಅಂಶ" ಎಂದು ಗವಾಸ್ಕರ್ ಹೇಳಿದರು.

ಪಂದ್ಯಾವಳಿ ಗೆಲ್ಲಲು ಅದೃಷ್ಟ ಕೂಡ ಮುಖ್ಯವಾಗುತ್ತದೆ ಎಂದು ಗವಾಸ್ಕರ್ ಹೇಳಿದರು. . ನ್ಯೂಜಿಲೆಂಡ್ ವಿರುದ್ಧದ 2019 ರ ಸೆಮಿಫೈನಲ್ ಪಂದ್ಯವನ್ನು ಉಲ್ಲೇಖಿಸಿದ ಅವರು, ಸೆಮಿಫೈನಲ್‌ನಲ್ಲಿ ಗೆದ್ದಿದ್ದರೆ ಭಾರತ ತಂಡ ಕಪ್ ಗೆಲ್ಲುವ ಅವಕಾಶ ಇತ್ತು ಎಂದು ಹೇಳಿದರು.

ನಾವು ಅಪಾರ ಪ್ರತಿಭೆಯನ್ನು ಹೊಂದಿದ್ದೇವೆ, ನಾಕೌಟ್ ಹಂತದಲ್ಲಿ ನಿಮಗೆ ದಿನದಲ್ಲಿ ಸ್ವಲ್ಪ ಅದೃಷ್ಟ ಬೇಕು. ನಾವು ಸೋತಿರುವ ನಾಕೌಟ್ ಹಂತಗಳಲ್ಲಿ ನಮ್ಮ ಪರಿಸ್ಥಿತಿಯನ್ನು ನೀವು ನೋಡಿದರೆ, ಪ್ರತಿ ಬಾರಿಯೂ ನಾವು ದುರದೃಷ್ಟವನ್ನು ಹೊಂದಿದ್ದೇವೆ ಎಂದು ಹೇಳಿದರು.

Story first published: Tuesday, August 29, 2023, 13:36 [IST]
Other articles published on Aug 29, 2023
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+