ಜೂನ್ನಲ್ಲಿ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ಸಹ-ಆತಿಥ್ಯದಲ್ಲಿ ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಭಾರತ ತಂಡವನ್ನು ಹೆಸರಿಸಲು ಕೇವಲ ಒಂದು ವಾರ ಮಾತ್ರ ಉಳಿದಿದೆ.
ಮೇ 1ರಂದು ಟಿ20 ವಿಶ್ವಕಪ್ ತಂಡವನ್ನು ಪ್ರಕಟಿಸಲು ಗಡುವು ನೀಡಲಾಗಿದ್ದು, ಈ ತಿಂಗಳ ಅಂತ್ಯದ ವೇಳೆಗೆ ತಾತ್ಕಾಲಿಕ ಭಾರತ ತಂಡವನ್ನು ಪ್ರಕಟಿಸಲಾಗುತ್ತಿದೆ. ಸದ್ಯ ನಡೆಯುತ್ತಿರುವ ಐಪಿಎಲ್ 2024ರಲ್ಲಿನ ಆಟಗಾರರ ಪ್ರದರ್ಶನದ ಮೇಲೆ ಬಿಸಿಸಿಐ ಆಯ್ಕೆ ಸಮಿತಿ ಕಣ್ಣಿಟ್ಟಿದೆ.

ಎಂಎಸ್ ಧೋನಿ ನಾಯಕತ್ವದ ಭಾರತ ತಂಡ 2013ರ ಚಾಂಪಿಯನ್ಸ್ ಟ್ರೋಫಿ ಗೆದ್ದ ನಂತರ, ಐಸಿಸಿ ಪಂದ್ಯಾವಳಿಗಳಲ್ಲಿ ಭಾರತದ ಟ್ರೋಫಿ ಬರ ಮುಂದುವರೆದಿದೆ.
2023ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನ ಆಘಾತಕಾರಿ ಸೋಲು ಭಾರತೀಯ ಅಭಿಮಾನಿಗಳ ಮನಸ್ಸಿನಲ್ಲಿ ಇನ್ನೂ ಹಾಗೆ ಉಳಿದಿದೆ ಮತ್ತು 2024ರ ಟಿ20 ವಿಶ್ವಕಪ್ ಆ ವಿಮೋಚನೆಯನ್ನು ಸಾಧಿಸಲು ಒಂದು ಅದ್ಭುತ ಅವಕಾಶವಾಗಿದೆ.

ರೋಹಿತ್ ಶರ್ಮಾ, ಜಸ್ಪ್ರೀತ್ ಬುಮ್ರಾ ಮತ್ತು ವಿರಾಟ್ ಕೊಹ್ಲಿಯಂತಹ ಕೆಲವು ಆಟಗಾರರು ಸ್ವಯಂಚಾಲಿತ ಆಯ್ಕೆಗಳಂತೆ ಕಂಡುಬಂದರೆ, ಸೀಮಿತ ಸಂಖ್ಯೆಯ ಸ್ಥಾನಗಳಿಂದಾಗಿ ಕೆಲವು ಆಟಗಾರರು ಆಯ್ಕೆಯಾಗಬಹುದು ಅಥವಾ ಆಯ್ಕೆಯಾಗದಿರಬಹುದು.
ಬಿಸಿಸಿಐ ಆಯ್ಕೆಗಾರರ ತಲೆನೋವು ಹೆಚ್ಚಿಸಲು, ಐಪಿಎಲ್ 2024ರಲ್ಲಿ ಹಲವು ಯುವ ಭಾರತೀಯ ಆಟಗಾರರು ಅದ್ಭುತ ಫಾರ್ಮ್ನಲ್ಲಿದ್ದಾರೆ. ಅಂತವರಲ್ಲಿ ಶಿವಂ ದುಬೆ ಕೂಡ ಒಬ್ಬರು.
ಎಡಗೈ ಬ್ಯಾಟರ್ ಶಿವಂ ದುಬೆ ಐಪಿಎಲ್ 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಅದ್ಭುತ ಫಾರ್ಮ್ನಲ್ಲಿದ್ದಾರೆ. ಆಡಿದ ಎಂಟು ಪಂದ್ಯಗಳಲ್ಲಿ 169.95ರ ಸ್ಟ್ರೈಕ್ ರೇಟ್ನಲ್ಲಿ 311 ರನ್ ಗಳಿಸಿದ್ದಾರೆ. ಇದರಲ್ಲಿ ಅವರು ಮೂರು ಅರ್ಧ ಶತಕಗಳನ್ನು ಗಳಿಸಿದ್ದಾರೆ.

ಮಂಗಳವಾರ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಶಿವಂ ದುಬೆ ಅವರ ಇತ್ತೀಚಿನ ಸ್ಫೋಟಕ ಅರ್ಧಶತಕದ ನಂತರ, ಅವರನ್ನು ಟಿ20 ವಿಶ್ವಕಪ್ ಭಾರತ ತಂಡಕ್ಕೆ ಆಯ್ಕೆ ಮಾಡುವಂತೆ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ಸುರೇಶ್ ರೈನಾ ಅವರಿಂದ ಸಾರ್ವಜನಿಕ ಮನವಿಯನ್ನು ಸ್ವೀಕರಿಸಿದರು.
"ಶಿವಂ ದುಬೆಗಾಗಿ ವಿಶ್ವಕಪ್ ಲೋಡ್ ಆಗುತ್ತಿದೆ! ಅಜಿತ್ ಆಗರ್ಕರ್ ಭಾಯ್ ಆಯ್ಕೆ ಕರೋ ಪ್ಲೀಸ್," ಎಂದು ಸುರೇಶ್ ರೈನಾ ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
"ಶಿವಂ ದುಬೆ ಅವರು ಅಗ್ರ ಕ್ರಮಾಂಕದ ನಂತರ ಮತ್ತು ಬಿಗ್-ಹಿಟ್ಟರ್ಗಳ ಮೊದಲು ಬ್ಯಾಟಿಂಗ್ ಮಾಡಲು ಪರಿಪೂರ್ಣರಾಗಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ 4 ಅಥವಾ 5ನೇ ಕ್ರಮಾಂಕದಲ್ಲಿ ಆಡಬೇಕು," ಎಂದು ಭಾರತದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಹೇಳಿದ್ದಾರೆ.
ಈ ಪರಿಕಲ್ಪನೆಯು ಆಲ್ರೌಂಡರ್ ಪಾತ್ರವನ್ನು ನಿರಾಕರಿಸುತ್ತದೆ ಎಂದು ಕ್ರಿಕೆಟ್ ತಜ್ಞರು ವಾದಿಸಿದ್ದಾರೆ. ಆಲ್ರೌಂಡರ್ ಶಿವಂ ದುಬೆಯಂತ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಪವರ್-ಹಿಟ್ಟರ್ ಆಗಿ ಮಾತ್ರ ಬಳಸಿಕೊಂಡಿದೆ.
ಮಧ್ಯಮ ವೇಗಿಯೂ ಆಗಿರುವ ಶಿವಂ ದುಬೆ ಅವರು ಟಿ20 ವಿಶ್ವಕಪ್ಗಾಗಿ ಭಾರತದ ತಂಡದಲ್ಲಿ ವೇಗದ ಬೌಲಿಂಗ್ ಆಲ್ರೌಂಡರ್ನ ಆಯ್ಕೆಗಾಗಿ ಸ್ಪರ್ಧೆಯಲ್ಲಿದ್ದಾರೆ. ಆದರೆ ಚೆಂಡಿನೊಂದಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ದುಬೆಗೆ ಅಷ್ಟೇನೂ ಅವಕಾಶ ಸಿಕ್ಕಿಲ್ಲ.
"ಇದು ಚರ್ಚಾಸ್ಪದವಾಗಿದೆ ಎಂದು ನಾನು ಸಂಪೂರ್ಣವಾಗಿ ಒಪ್ಪುತ್ತೇನೆ. ಖಚಿತವಾಗಿ ಸ್ವಲ್ಪ ಸಮಸ್ಯೆ ಇದೆ. ಆದರೆ ಅದನ್ನು ಹೇಗೆ ಎದುರಿಸಬೇಕೆಂದು ನಾವು ಒಂದು ಮಾರ್ಗವನ್ನು ಕಂಡುಕೊಳ್ಳಬೇಕಿದೆ. ಇಂಪ್ಯಾಕ್ಟ್ ಪ್ಲೇಯರ್ ನಿಯಮದಲ್ಲಿ ನೀವು ಅರ್ಧದಷ್ಟು ಆಲ್ರೌಂಡರ್ಗಳನ್ನು ಕಾಣಬಹುದು. ಆದರೆ ಸಂಪೂರ್ಣ ಒಬ್ಬರಾಗಿ ಆಡಿಲ್ಲ," ಎಂದು ಮಾಜಿ ವೇಗಿ ಜಹೀರ್ ಖಾನ್ ಜಿಯೋಸಿನಿಮಾ ಮೂಲಕ ಆನ್ಲೈನ್ ಸಂವಾದದಲ್ಲಿ ಹೇಳಿದರು.