
ಧೋನಿ-ಶ್ರೀನಿವಾಸನ್ ಭೇಟಿ
ಈ ನಡುವೆ ಎಂಎಸ್ ಧೋನಿ ಮತ್ತು ಸುಪ್ರೀಂ ಕೋರ್ಟ್ ನಿಂದ ಛಿಮಾರಿಗೆ ಗುರಿಯಾಗಿರುವ ಎನ್ ಶ್ರೀನಿವಾಸನ್ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಈ ಭೇಟಿ ಬಗ್ಗೆ ವಲಯದಲ್ಲಿ ಟೀಕೆಗಳು ಕೇಳಿ ಬಂದಿವೆ.

ಚೆನ್ನೈ ತಂಡದ ಪ್ರಮುಖರು
ಸೂಪರ್ ಕಿಂಗ್ಸ್ ತಂಡದಲ್ಲಿದ್ದ ಎಂಎಸ್ ಧೋನಿ, ಸುರೇಶ್ ರೈನಾ, ರವೀಂದ್ರ ಜಡೇಜಾ, ಮೆಕಲಮ್, ಸ್ಮಿತ್ ಈ ಬಾರಿ ಬೇರೆ ಬೇರೆ ತಂಡದ ಪಾಲಾಗಲಿದ್ದಾರೆ. ಆರಂಭದಿಂದಲೂ ಚೆನ್ನೈ ನ್ನು ಮುನ್ನಡೆಸಿಕೊಂಡು ಬಂದಿದ್ದ ಧೋನಿಗೆ ಈ ಬಾರಿ ಹೊಸ ತಂಡ ಸೇರುವುದು ಅನಿವಾರ್ಯ.

ರಾಜಸ್ಥಾನದಲ್ಲಿ ಯಾರ್ಯಾರು?
ಶೇನ್ ವಾಟ್ಸನ್, ಅಜಿಂಕ್ಯ ರಹಾನೆ, ಸ್ಟುವರ್ಟ್ ಬಿನ್ನಿ , ರಜತ್ ಭಾಟಿಯಾ ಸಹ ಹೊಸ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಒಡತಿ ಶಿಲ್ಪಾ ಶೇಟ್ಟಿಯ ಗ್ಲಾಮರ್ ಸಹ ಈ ಬಾರಿಯ ಐಪಿಎಲ್ ನಲ್ಲಿ ಕಾಣಸಿಗುವುದು ಅನುಮಾನ.

ಯಾಕೆ ಹೀಗಾಯ್ತು?
ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ನ ಆರನೇ ಆವೃತ್ತಿಯಲ್ಲಿ ನಡೆದಿದೆ ಎನ್ನಲಾದ ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನೇಮಿಸಿದ್ದ ನಿವೃತ್ತ ನ್ಯಾ. ಲೋಧಾ ನೇತೃತ್ವದ ಸಮಿತಿ ತನ್ನ ಅಂತಿಮ ತೀರ್ಪು ನೀಡಿ ಎರಡು ತಂಡಗಳಿಗೆ ಕಳೆದ ಜುಲೈ ತಿಂಗಳಲ್ಲಿ ಐಪಿಎಲ್ ನಿಂದ ನಿಷೇಧ ಹೇರಿತ್ತು.


Click it and Unblock the Notifications











