
ಕಳೆದ ಸೀಸನ್ನಲ್ಲಿ ಅತ್ಯಧಿಕ ರನ್
2019ರಲ್ಲಿ ಕರ್ನಾಟಕ ತಂಡ ಇದೇ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಗೆದ್ದಿದ್ದಾಗ ಮನೀಶ್ ಪಾಂಡೆ ಅವರು ಮುಂಚೂಣಿ ರನ್ ಸರದಾರರ ಸಾಲಿನಲ್ಲಿ ಗುರುತಿಸಿಕೊಂಡಿದ್ದರು. ಆವತ್ತು ಟೂರ್ನಿಯಲ್ಲಿ ಮನೀಶ್ 314 ರನ್ ಬಾರಿಸಿದ್ದರು. ಇದರಲ್ಲಿ ಅಜೇಯ 129 ರನ್ ಅಲ್ಲದೆ ಎರಡು ಅರ್ಧ ಶತಕಗಳೂ ಸೇರಿತ್ತು.

ತಂಡದಲ್ಲಿ ಪ್ರಮುಖ ಆಟಗಾರರಿಲ್ಲ
ಮನೀಶ್ ಅಲಭ್ಯತೆ ಕರ್ನಾಟಕ ತಂಡಕ್ಕೆ ದೊಡ್ಡ ಹೊಡೆತ ನೀಡಲಿದೆ ಯಾಕೆಂದರೆ ನಾಯಕನಾಗಿರುವ ಮನೇಶ್ ಅವರೇ ಆಡುತ್ತಿಲ್ಲ. ಅಲ್ಲದೆ, ತಂಡದ ಪ್ರಮುಖ ಆಟಗಾರರಾದ ಕೆಎಲ್ ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಕೂಡ ತಂಡದಲ್ಲಿ ಆಡುತ್ತಿಲ್ಲ. ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಮನೀಶ್ ಮತ್ತು ರಾಹುಲ್ ಟೆಸ್ಟ್ ಸರಣಿಯೊಂದಿಗೆ ರಾಷ್ಟ್ರೀಯ ತಂಡದ ಜವಾಬ್ದಾರಿಯಲ್ಲಿ ಬ್ಯುಸಿಯಾಗಿದ್ದಾರೆ.

ಟೂರ್ನಿಯ ಪ್ರಮುಖ ಮಾಹಿತಿ
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗೆ ಸಂಬಂಧಿಸಿ 20 ಮಂದಿಯ ತಂಡಗಳು ಶೀಘ್ರ ಪ್ರಕಟವಾಗುವ ನಿರೀಕ್ಷೆಯಿದೆ. ಟೂರ್ನಿಯು ಜನವರಿ 10ರಿಂದ ಜನವರಿ 31ರ ವರೆಗೆ ನಡೆಯಲಿದೆ. ಕರ್ನಾಟಕ ತಂಡ ಗ್ರೂಪ್ 'ಎ'ಯಲ್ಲಿದ್ದು, ಜಮ್ಮು ಮತ್ತು ಕಾಶ್ಮೀರದ ವಿರುದ್ಧ ಜನವರಿ 10ರಂದು ಮೊದಲ ಪಂದ್ಯವನ್ನಾಡಲಿದೆ.ಲೀಗ್ ಹಂತದ ಎಲ್ಲಾ ಪಂದ್ಯಗಳು 3 ಓವಲ್, ಆಲೂರು ಮತ್ತು ಬೆಂಗಳೂರು ತಾಣಗಳಲ್ಲಿ ನಡೆಯಲಿದೆ.


Click it and Unblock the Notifications












