
ಸೂರತ್, ನವೆಂಬರ್ 29: ಸೂರತ್ನ ಲಾಲ್ ಭಾಯ್ ಕಾಂಟ್ರ್ಯಾಕ್ಟರ್ ಸ್ಟೇಡಿಯಂನಲ್ಲಿ ಶುಕ್ರವಾರ (ನವೆಂಬರ್ 29) ನಡೆದ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಸೆಮಿಫೈನಲ್ 2 ಪಂದ್ಯದಲ್ಲಿ ರಾಜಸ್ಥಾನ್ ತಂಡವನ್ನು 7 ವಿಕೆಟ್ನಿಂದ ಮಣಿಸಿರುವ ತಮುಳುನಾಡು ಫೈನಲ್ಗೆ ಪ್ರವೇಶಿಸಿದೆ. ಪ್ರಶಸ್ತಿ ಸುತ್ತಿನಲ್ಲಿ ಕರ್ನಾಟಕ ಮತ್ತು ತಮಿಳುನಾಡು ತಂಡಗಳು ಮುಖಾಮುಖಿಯಾಗಲಿವೆ.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ರಾಜಸ್ಥಾನ ತಂಡ ಬ್ಯಾಟಿಂಗ್ ವೈಫಲ್ಯ ತೋರಿಕೊಂಡಿತು. ಅಂಕಿತ್ ಲಾಂಬ 15, ರಾಜೇಶ್ ಬಿಷ್ಣೋಯ್ 23, ಚಂದ್ರಪಾಲ್ ಸಿಂಗ್ 15, ರವಿ ಬಿಷ್ಣೋಯ್ 22 ರನ್ ಕೊಡುಗೆಯೊಂದಿಗೆ 20 ಓವರ್ಗೆ 9 ವಿಕೆಟ್ ನಷ್ಟದಲ್ಲಿ 112 ರನ್ ಮಾಡಿತು.
ಚೇಸಿಂಗ್ಗೆ ಇಳಿದ ತಮಿಳುನಾಡು, ರವಿಚಂದ್ರನ್ ಅಶ್ವಿನ್ 31, ವಾಷಿಂಗ್ಟನ್ ಸುಂದರ್ 54, ದಿನೇಶ್ ಕಾರ್ತಿಕ್ 17, ಬಾಬಾ ಅಪರಾಜಿತ್ 9 ರನ್ನೊಂದಿಗೆ 17.5ನೇ ಓವರ್ಗೆ 3 ವಿಕೆಟ್ ನಷ್ಟದಲ್ಲಿ 116 ರನ್ ಪೇರಿಸಿತು. ರಾಜಸ್ಥಾನ ಇನ್ನಿಂಗ್ಸ್ನಲ್ಲಿ ತಮುಳುನಾಡಿನ ವಿಜಯ್ ಶಂಕರ್ 2 ವಿಕೆಟ್ಗಳೊಂದಿಗೆ ಗಮನ ಸೆಳೆದರು.
ಇಲ್ಲಿಗೆ ಗ್ರೂಪ್ 'ಎ'ಯಲ್ಲಿರುವ ಕರ್ನಾಟಕ 6ರಲ್ಲಿ 5 ಪಂದ್ಯಗಳನ್ನು ಗೆದ್ದು ಫೈನಲ್ಗೆ ಪ್ರವೇಶಿಸಿದ್ದರೆ, ತಮಿಳುನಾಡು ಕೂಡ 6ರಲ್ಲಿ 5 ಜಯದೊಂದಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿದೆ. ಫೈನಲ್ ಪಂದ್ಯ ಸೂರತ್ನ ಇದೇ ಸ್ಟೇಡಿಯಂನಲ್ಲಿ ಭಾನುವಾರ (ಡಿಸೆಂಬರ್ 1) 7 pmಗೆ ನಡೆಯಲಿದೆ.