ಶನಿವಾರ, ಜೂನ್ 15ರಂದು ನಡೆಯಲಿರುವ 2024ರ ಐಸಿಸಿ ಟಿ20 ವಿಶ್ವಕಪ್ನ 33ನೇ ಪಂದ್ಯದಲ್ಲಿ ಭಾರತ ತಂಡವು ಕೆನಡಾ ವಿರುದ್ಧ ಸೆಣಸಾಡಲಿದೆ. ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಉತ್ತಮ ಫಾರ್ಮ್ಗೆ ಮರಳಲಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಿರೀಕ್ಷಿಸಿದರು.
ಗಮನಾರ್ಹವಾಗಿ, ಪ್ರಸಕ್ತ ಟಿ20 ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತ ತಂಡದ ಇಬ್ಬರೂ ಇನ್ನಿಂಗ್ಸ್ ಆರಂಭಿಕ ಬ್ಯಾಟರ್ಗಳು ಉತ್ತಮ ಫಾರ್ಮ್ನಲ್ಲಿಲ್ಲ. ರೋಹಿತ್ ಶರ್ಮಾ ಇದುವರೆಗೆ ಆಡಿದ ಮೂರು ಇನ್ನಿಂಗ್ಸ್ಗಳಿಂದ 34ರ ಸರಾಸರಿ ಮತ್ತು 123.63ರ ಸ್ಟ್ರೈಕ್ ರೇಟ್ನಲ್ಲಿ 68 ರನ್ ಗಳಿಸಿದ್ದಾರೆ.

ಮತ್ತೊಂದೆಡೆ, ಈ ಪಂದ್ಯಾವಳಿಯಲ್ಲಿ ಆಡಿದ ಮೂರು ಇನ್ನಿಂಗ್ಸ್ಗಳಲ್ಲಿ ಕೇವಲ ಐದು ರನ್ ಗಳಿಸಿರುವ ಅನುಭವಿ ಬ್ಯಾಟರ್ ವಿರಾಟ್ ಕೊಹ್ಲಿ ಐಪಿಎಲ್ 2024ರ ಬ್ಯಾಟಿಂಗ್ ಫಾರ್ಮ್ನಿಂದ ಹಿಂದೆ ಸರಿದಿದ್ದಾರೆ.
ಕಳಪೆ ಪ್ರದರ್ಶನದ ಹಿನ್ನೆಲೆಯಲ್ಲಿ ಇಬ್ಬರೂ ಬ್ಯಾಟರ್ಗಳು ಕೆನಡಾ ವಿರುದ್ಧದ ಪಂದ್ಯಕ್ಕೆ ಬರುವುದರೊಂದಿಗೆ, ಹೆಚ್ಚಿನ ರನ್ ಗಳಿಸಲು ಟೀಮ್ ಇಂಡಿಯಾ ಆರಂಭಿಕ ಜೋಡಿಯನ್ನು ಆಕಾಶ್ ಚೋಪ್ರಾ ಬೆಂಬಲಿಸಿದ್ದಾರೆ.

"ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಆಟಗಾರನಾಗಬಹುದು ಎಂದು ನಾನು ಭಾವಿಸುತ್ತೇನೆ. ನಾನು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಬ್ಯಾಟ್ಗಳಿಂದ ರನ್ಗಳನ್ನು ನಿರೀಕ್ಷಿಸುತ್ತಿದ್ದೇನೆ," ಎಂದರು.
"ಬೌಲಿಂಗ್ನಲ್ಲಿ ಕುಲದೀಪ್ ಯಾದವ್ ಆಡಿದರೆ, ಅವರಿಂದ ಕನಿಷ್ಠ ಮೂರು ವಿಕೆಟ್ಗಳನ್ನು ನಿರೀಕ್ಷಿಸುತ್ತಿದ್ದೇನೆ. ರವೀಂದ್ರ ಜಡೇಜಾ ಅಂತಿಮವಾಗಿ ಮುಂಚೂಣಿಗೆ ಬಂದು ವಿಕೆಟ್ಗಳನ್ನು ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ," ಎಂದು ಆಕಾಶ್ ಚೋಪ್ರಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಹೇಳಿದರು.
ಮಾತು ಮುಂದುವರೆಸಿದ ಮಾಜಿ ಆರಂಭಿಕ ಬ್ಯಾಟರ್ ಆಕಾಶ್ ಚೋಪ್ರಾ, "ಭಾರತದ ಆಡುವ 11ರ ಬಳಗದಲ್ಲಿ ಒಂದು ಬದಲಾವಣೆಯನ್ನು ಸೂಚಿಸಿದರು. ಪಿಚ್ನ ತಿರುವಿನ ಸ್ವಭಾವದಿಂದಾಗಿ ಮೊಹಮ್ಮದ್ ಸಿರಾಜ್ ಬದಲಿಗೆ ಕುಲದೀಪ್ ಯಾದವ್ ಆಡಬೇಕು," ಎಂದರು.
"ಭಾರತ ತಂಡದಲ್ಲಿ ಒಂದು ಬದಲಾವಣೆ ಮಾಡಬಹುದು. ಒಬ್ಬ ವೇಗದ ಬೌಲರ್ ಬೆಂಚ್ ಕಾಯಿಸಬಹುದು ಮತ್ತು ಕುಲದೀಪ್ ಯಾದವ್ ಆಡಬಹುದು. ಏಕೆಂದರೆ ಫ್ಲೋರಿಡಾ ಪಿಚ್ ಸಾಂಪ್ರದಾಯಿಕವಾಗಿ ತಿರುಗುತ್ತದೆ ಮತ್ತು ಸ್ಪಿನ್ನರ್ಗಳಿಗೆ ಸಹಾಯ ಮಾಡುತ್ತದೆ. ಮೊಹಮ್ಮದ್ ಸಿರಾಜ್ ಬದಲಿಗೆ ಕುಲದೀಪ್ ಯಾದವ್ ಆಡುವುದನ್ನು ನಾನು ನೋಡುತ್ತೇನೆ," ಎಂದು ಆಕಾಶ್ ಚೋಪ್ರಾ ತಿಳಿಸಿದರು.
ಮೊಹಮ್ಮದ್ ಸಿರಾಜ್ ಇದುವರೆಗೆ 6.50ರ ಎಕಾನಮಿ ದರದೊಂದಿಗೆ ಪಂದ್ಯಾವಳಿಯಲ್ಲಿ ಮಿತವ್ಯಯ ಹೊಂದಿದ್ದಾರೆ. ಆದಾಗ್ಯೂ, ಬಲಗೈ ವೇಗಿ ಮೂರು ಇನ್ನಿಂಗ್ಸ್ಗಳಿಂದ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿದೆ.
ವೆಸ್ಟ್ ಇಂಡೀಸ್ನ ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ಭಾರತದ ಟ್ರಂಪ್ ಕಾರ್ಡ್ ಆಗುವ ನಿರೀಕ್ಷೆಯಿರುವ ಎಡಗೈ ಮಿಸ್ಟರಿ ಸ್ಪಿನ್ನರ್ ಕುಲದೀಪ್ ಯಾದವ್ಗೆ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ದಾರಿ ಮಾಡಿಕೊಡುವುದನ್ನು ಕಾಣಬಹುದು.
ಇದೇ ವೇಳೆ, ಟೀಮ್ ಇಂಡಿಯಾ ಈಗಾಗಲೇ ಪಂದ್ಯಾವಳಿಯ ಸೂಪರ್ 8ರ ಹಂತಕ್ಕೆ ಅರ್ಹತೆ ಪಡೆದಿದೆ ಮತ್ತು ಕೆನಡಾ ವಿರುದ್ಧ ಮತ್ತೊಂದು ಗೆಲುವಿನೊಂದಿಗೆ ಗುಂಪು ಹಂತವನ್ನು ಪೂರ್ಣಗೊಳಿಸಲು ಉತ್ಸುಕವಾಗಿದೆ.