
ಮಹತ್ವದ ಪಂದ್ಯಗಳಲ್ಲಿ ರಾಹುಲ್ ಕಳಪೆ ಆಟ
ಭಾರತದ ಆಟಂಭಿಕ ಆಟಗಾರ ಕೆಎಲ್ ರಾಹುಲ್ ಮುಖ್ಯ ಪಂದ್ಯಗಳಲ್ಲಿ ತಮ್ಮ ಕಳಪೆ ಪ್ರದರ್ಶನ ನೀಡುವುದನ್ನು ಮುಂದುವರೆಸಿದ್ದಾರೆ. ಹೌದು, ಕೆಎಲ್ ರಾಹುಲ್ ಐಸಿಸಿ ಟೂರ್ನಿಗಳಲ್ಲಿ ಪ್ರಮುಖ ಪಂದ್ಯಗಳಲ್ಲಿ, ಬಲಿಷ್ಠ ತಂಡಗಳ ವಿರುದ್ಧ ಸತತವಾಗಿ ವೈಫಲ್ಯ ಅನುಭವಿಸಿದ್ದಾರೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲೂ ಕೂಡ ಅವರು ಅದನ್ನು ಮುಂದುವರೆಸಿದರು.
5 ಎಸೆತಗಳಲ್ಲಿ ಕೇವಲ 5 ರನ್ ಸಿಡಿಸಿ ಔಟಾಗುವ ಮೂಲಕ ಭಾರತ ತಂಡದ ಮೇಲೆ ಆರಂಭದಲ್ಲೇ ಒತ್ತಡ ಹೇರಿದರು. ಟಿ20 ವಿಶ್ವಕಪ್ 2022ರ ಪಾಕಿಸ್ತಾನದ ವಿರುದ್ದದ ಪಂದ್ಯದಲ್ಲೂ ರಾಹುಲ್ ಹೀಗೆ ಆರಂಭದಲ್ಲಿ ವಿಕೆಟ್ ಕೈಚೆಲ್ಲಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧ ಕೂಡ ಅವರು ವಿಫಲರಾಗಿದ್ದರು. ಜಿಂಬಾಬ್ವೆ ಮತ್ತು ಬಾಂಗ್ಲಾದೇಶದ ವಿರುದ್ಧದ ಪಂದ್ಯಗಳಲ್ಲಿ ಮಾತ್ರ ಅರ್ಧಶತಕ ಗಳಿಸಿದ್ದರು.
ಟಿ20 ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿ ವಿಶ್ವದಾಖಲೆ: 4000 ರನ್ ಪೂರೈಸಿದ ಮೊದಲ ಪ್ಲೇಯರ್

ಚಹಾಲ್ ಆಡಿಸದೇ ತಪ್ಪು ಮಾಡಿದ್ರಾ?
ಯುಜುವೇಂದ್ರ ಚಹಾಲ್ ಭಾರತದ ಪ್ರಮುಖ ಲೆಗ್ ಸ್ಪಿನ್ನರ್ ಆದರೆ ಈ ಬಾರಿ ವಿಶ್ವಕಪ್ನಲ್ಲಿ ಅವರು ಒಂದೇ ಒಂದು ಪಂದ್ಯವನ್ನು ಕೂಡ ಆಡಲಿಲ್ಲ. ಅದರಲ್ಲೂ ಇಂಗ್ಲೆಂಡ್ ವಿರುದ್ಧ ಚಹಾಲ್ ಉತ್ತಮ ದಾಖಲೆ ಹೊಂದಿದ್ದಾರೆ. ಪಂತ್, ದೀಪಕ್ ಹೂಡಾರನ್ನು ಆಡಿಸಿದ ಭಾರತ ತಂಡದ ಮ್ಯಾನೇಜ್ಮೆಂಟ್ ಚಹಾಲ್ ವಿಚಾರದಲ್ಲಿ ಮಾತ್ರ ಅಸಡ್ಡೆ ತೋರಿತು.
ಅಶ್ವಿನ್, ಅಕ್ಷರ್ ಪಟೇಲ್ ನಿರೀಕ್ಷಿತ ಪ್ರದರ್ಶನ ನೀಡದಿದ್ದರೂ, ಗೆಲುವಿನ ಅಲೆಯಲ್ಲಿದ್ದ ಭಾರತ ಚಹಾಲ್ರನ್ನು ಕಡೆಗಣಿಸಿದ್ದು, ಸೆಮಿಫೈನಲ್ನಲ್ಲಿ ತಂಡಕ್ಕೆ ಮುಳುವಾಗಿದೆ. ಹಲವು ಮಾಜಿ ಕ್ರಿಕೆಟಿಗರು ಕೂಡ ಇಂಗ್ಲೆಂಡ್ ವಿರುದ್ಧ ಚಹಾಲ್ರನ್ನು ಆಡಿಸುವಂತೆ ಕೇಳಿಕೊಂಡಿದ್ದರು.

ಬ್ಯಾಟಿಂಗ್ನಲ್ಲಿ ರೋಹಿತ್ ಶರ್ಮಾ ವೈಫಲ್ಯ
ಭಾರತದ ನಾಯಕ ರೋಹಿತ್ ಶರ್ಮಾ ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಕೆಟ್ಟ ಬ್ಯಾಟಿಂಗ್ ಪ್ರದರ್ಶಿಸಿದರು. ನಾಯಕನಾಗಿ ಒಂದೂ ಪಂದ್ಯಗಳಲ್ಲಿ ಕೂಡ ಅವರು ಜವಾಬ್ದಾರಿಯುತ ಬ್ಯಾಟಿಂಗ್ ಮಾಡಲಿಲ್ಲ. ಒಂದು ಕಡೆ ಕೆಎಲ್ ರಾಹುಲ್ ಸತತವಾಗಿ ವೈಫಲ್ಯ ಅನುಭವಿಸಿದರೆ, ರೋಹಿತ್ ಕೂಡ ಬೇಗನೆ ವಿಕೆಟ್ ಒಪ್ಪಿಸುವ ಮೂಲಕ ತಂಡದ ಮೇಲೆ ಒತ್ತಡ ಹೇರಿದರು.
ಸೆಮಿಫೈನಲ್ನಲ್ಲಿ ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ 28 ಎಸೆತಗಳಲ್ಲಿ 27 ರನ್ ಗಳಿಸಿ ಔಟಾಗುವ ಮೂಲಕ ಮಧ್ಯಮ ಕ್ರಮಾಂಕದ ಬ್ಯಾಟರ್ ಮೇಲೆ ಒತ್ತಡ ಹೇರಿದರು.


Click it and Unblock the Notifications
