ಯುಜುವೇಂದ್ರ ಚಾಹಲ್ ಫಾರ್ಮ್
ಇತ್ತೀಚೆಗಷ್ಟೇ ಅಂತ್ಯವಾಗಿರುವ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತದ ಅನುಭವಿ ಸ್ಪಿನ್ನರ್ ಯುಜುವೇಂದ್ರ ಚಾಹಲ್ ತಮ್ಮ ಎಂದಿನ ಲಯದಲ್ಲಿದ್ದಂತೆ ಕಂಡುಬರಲಿಲ್ಲ. ಬಹುತೇಕ ಪಂದ್ಯಗಳಲ್ಲಿ ಬ್ಯಾಟರ್ಗಳು ಚಾಹಲ್ ಅವರನ್ನು ಸುಲಭವಾಗಿ ಎದುರಿಸಿದ್ದರು. ಆಡಿರುವ ನಾಲ್ಕು ಪಂದ್ಯಗಳಲ್ಲಿ ಚಾಹಲ್ ನಾಲ್ಕು ವಿಕೆಟ್ ಮಾತ್ರವೇ ಪಡೆದಿದ್ದಾರೆ. 7.93 ಅವರ ಎಕಾನಮಿ. ರವಿ ಬಿಷ್ಣೋಯ್ ವಿಶ್ವಕಪ್ಗ ಆಯ್ಕೆಯಾಗದ ಕಾರಣದಿಂದಾಗಿ ವಿಶ್ವಕಪ್ನ ಬಹುತೇಕ ಪಂದ್ಯಗಳಲ್ಲಿ ಚಾಹಲ್ ಕಣಕ್ಕಿಳಿಯುವ ಸಾಧ್ಯತೆಯಿದೆ. ಮಧ್ಯಮ ಓವರ್ಗಳಲ್ಲಿ ಚಾಹಲ್ ಹಿನ್ನಡೆ ಅನುಭವಿಸುತ್ತಿದ್ದು ಈ ವಿಚಾರವಾಗಿ ವಿಶ್ವಕಪ್ಗೂ ಮುನ್ನ ಪರಿಹಾರವನ್ನು ಕಂಡುಕೊಳ್ಳಬೇಕಿದೆ.
ರಿಷಭ್ ಪಂತ್ ಅಥವಾ ದಿನೇಶ್ ಕಾರ್ತಿಕ್
ಇನ್ನು ವಿಶ್ವಕಪ್ಗೆ ಆಯ್ಕೆ ಮಾಡಿರುವ ತಂಡದಲ್ಲಿ ಅನುಭವಿ ದಿನೇಶ್ ಕಾರ್ತಿಕ್ ಹಾಗೂ ರಿಷಭ್ ಪಂತ್ ಇಬ್ಬರು ಕೂಡ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಇಬ್ಬರು ಆಟಗಾರರ ಪೈಕಿ ವಿಶ್ವಕಪ್ನಲ್ಲಿ ಯಾರನ್ನು ಕಣಕ್ಕಿಳಿಸುವುದು ಎಂಬ ವಿಚಾರವಾಗಿ ಸಾಕಷ್ಟ ಗೊಂದಲಗಳು ನಡೆಯಲಿದೆ. ರಿಷಭ್ ಪಂತ್ ಚುಟುಕು ಮಾದರಿಯಲ್ಲಿ ಸತತವಾಗಿ ವೈಫಲ್ಯ ಅನುಭವಿಸುತ್ತಿದ್ದರೂ ವಿಶ್ವಕಪ್ಗೆ ಮತ್ತೊಂದು ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇತ್ತ ಅದ್ಭುತ ಫಾರ್ಮ್ನಲ್ಲಿರುವ ದಿನೇಶ್ ಕಾರ್ತಿಕ್ ಡೆತ್ ಓವರ್ಗಳಲ್ಲಿ ತಂಡಕ್ಕೆ ರನ್ವೇಗವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಹೀಗಾಗಿ ಈ ಇಬ್ಬರು ಆಟಗಾರರ ಪೈಕಿ ಯಾರನ್ನು ಆಯ್ಕೆ ಮಾಡುವುದು ತಲೆನೋವಾಗಲಿದೆ.
ಜಸ್ಪ್ರೀತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಫಿಟ್ನೆಸ್
ಏಷ್ಯಾ ಕಪ್ನಲ್ಲಿ ಭಾರತದ ಅನನುಭವಿ ವೇಗದ ಬೌಲಿಂಗ್ ವಿಭಾಗ ಅನುಭವಿಸಿದ ಒತ್ತಡವನ್ನು ಗಮನಿಸಿದ ಬಳಿಕ ವಿಶ್ವಕಪ್ಗೆ ಜಸ್ಪ್ರೀತ್ ಬೂಮ್ರಾ ಹಾಗೂ ಹರ್ಷಲ್ ಪಟೇಲ್ ಆಯ್ಕೆಯಾಗಿರುವುದು ಅಭಿಮಾನಿಗಳಿಗೆ ಸ್ವಲ್ಪ ಸಮಾಧಾನ ತಂದಿದೆ. ಇಬ್ಬರು ಕೂಡ ಗಾಯದ ಕಾರಣದಿಂದಾಗಿ ತಂಡದಿಂದ ಹೊರಬಿದ್ದು ಕಮ್ಬ್ಯಾಕ್ ಮಾಡಿದ್ದಾರೆ. ಈ ಇಬ್ಬರು ಆಟಗಾರರ ಸೇರ್ಪಡೆಯಿಂದಾಗಿ ತಂಡದ ಬಲ ಹೆಚ್ಚಿದ್ದರೂ ಇವರ ಫಿಟ್ನೆಸ್ ಬಗ್ಗೆ ಕಳವಳ ಇದ್ದೇ ಇದೆ. ಈ ಮಹತ್ವದ ಟೂರ್ನಿಯುದ್ದಕ್ಕೂ ಇಬ್ಬರು ಆಟಗಾರರು ಕೂಡ ಫಿಟ್ನೆಸ್ ಕಾಪಾಡಿಕೊಳ್ಳಬೇಕಾದ ಅಗತ್ಯವಿದೆ.
ಟಿ20 ವಿಶ್ವಕಪ್ಗೆ ಆಯ್ಕೆಯಾದ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡಾ, ರಿಷಭ್ ಪಂತ್ (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಅಕ್ಸರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್ದೀಪ್ ಸಿಂಗ್
ಸ್ಟ್ಯಾಂಡ್ಬೈ ಆಟಗಾರರು: ಮೊಹಮ್ಮದ್. ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯ್, ದೀಪಕ್ ಚಹಾರ್