ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಕೆಆರ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ಟಿ20 ವಿಶ್ವಕಪ್ ಸ್ಕ್ವಾಡ್ಗೆ ಆಯ್ಕೆಯಾಗಿದ್ದಾರೆ. ವರುಣ್ ಚಕ್ರವರ್ತಿ ಐಪಿಎಲ್ನಲ್ಲಿ ನೀಡುತ್ತಿರುವ ಪ್ರದರ್ಶನ ಅದ್ಭುತವಾಗಿದ್ದು ಟಿ20 ವಿಶ್ವಕಪ್ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಆದರೆ ವರುಣ್ ಚಕ್ರವರ್ತಿಗೆ ಗಾಯದ ಆತಂಕ ಕಾಡುತ್ತಿದೆ ಎನ್ನಲಾಗಿದೆ. ಪೂರ್ಣ ಇದು ಬಿಸಿಸಿಐಗೆ ತಲೆ ನೋವು ತಂದಿಟ್ಟಿದೆ.
ವರುಣ್ ಚಕ್ರವರ್ತಿ ಈಗಾಗಲೇ ಸಾಕಷ್ಟು ಬಾರಿ ಮೊಣ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಈಗಲೂ ಕೂಡ ತಮಿಳುನಾಡು ಮೂಲದ ಸ್ಪಿನ್ನರ್ನ ಮೊಣಕಾಲಿನ ಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಬಿಸಿಸಿಐನ ವೈದ್ಯಕೀಯ ತಂಡ ವರುಣ್ ಮೊಣಕಾಲಿನ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ.
ಐಪಿಎಲ್ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಕೆಆರ್ ತಂಡದ ಸ್ಪಿನ್ನರ್ ವರುಣ್ ಚಕ್ರವರ್ತಿ ಈ ಬಾರಿ ಟಿ20 ವಿಶ್ವಕಪ್ ಸ್ಕ್ವಾಡ್ಗೆ ಆಯ್ಕೆಯಾಗಿದ್ದಾರೆ. ವರುಣ್ ಚಕ್ರವರ್ತಿ ಐಪಿಎಲ್ನಲ್ಲಿ ನೀಡುತ್ತಿರುವ ಪ್ರದರ್ಶನ ಅದ್ಭುತವಾಗಿದ್ದು ಟಿ20 ವಿಶ್ವಕಪ್ನಲ್ಲಿ ಸಾಕಷ್ಟು ನಿರೀಕ್ಷೆ ಮೂಡಿಸಿದ್ದಾರೆ. ಆದರೆ ವರುಣ್ ಚಕ್ರವರ್ತಿಗೆ ಗಾಯದ ಆತಂಕ ಕಾಡುತ್ತಿದೆ ಎನ್ನಲಾಗಿದೆ. ಪೂರ್ಣ ಇದು ಬಿಸಿಸಿಐಗೆ ತಲೆ ನೋವು ತಂದಿಟ್ಟಿದೆ.
ವರುಣ್ ಚಕ್ರವರ್ತಿ ಈಗಾಗಲೇ ಸಾಕಷ್ಟು ಬಾರಿ ಮೊಣ ಕಾಲಿನ ಗಾಯಕ್ಕೆ ತುತ್ತಾಗಿದ್ದಾರೆ. ಈಗಲೂ ಕೂಡ ತಮಿಳುನಾಡು ಮೂಲದ ಸ್ಪಿನ್ನರ್ನ ಮೊಣಕಾಲಿನ ಸ್ಥಿತಿ ಉತ್ತಮವಾಗಿಲ್ಲ. ಹೀಗಾಗಿ ಬಿಸಿಸಿಐನ ವೈದ್ಯಕೀಯ ತಂಡ ವರುಣ್ ಮೊಣಕಾಲಿನ ಪರಿಸ್ಥಿತಿಯ ಬಗ್ಗೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ವರುಣ್ ಚಕ್ರವರ್ತಿಗೆ ಈ ಗಾಯ ಪೂರ್ಣ ಪ್ರಮಾಣದಲ್ಲಿ ಕಾಡುತ್ತಿಲ್ಲವಾದರೂ ಆಗಾಗ ಸಮಸ್ಯೆ ತಂದೊಡ್ಡುತ್ತಿರುವು ಚಿಂತೆಗೆ ಕಾರಣವಾಗಿದೆ.
ವರುಣಮ್ ಚಕ್ರವರ್ತಿಯ ಮೊಣ ಕಾಲಿನ ನೋವಿನ ತೀವ್ರತೆಯನ್ನು ಸೂಕ್ಷ್ಮವಾಗಿ ಗಮನಿಸಿದ ಬಳಿಕ ಬಿಸಿಸಿಐ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ. ವಿಶ್ವಕಪ್ನಲ್ಲಿ ಆಡಲು ವರುನ್ ಸಮರ್ಥರಿದ್ದರೆ ಟೀಮ್ ಇಂಡಿಯಾ ಜೊತೆಗೆ ಮುಂದುವರಿಯಲಿದ್ದಾರೆ. ಇಲ್ಲವಾದಲ್ಲಿ ಅಕ್ಟೋಬರ್ 10ರವರೆಗೆ ತಂಡದಲ್ಲಿ ಬದಲಾವಣೆ ಮಾಡಿಕೊಳ್ಳಲು ಅವಕಾಶವಿದ್ದು ಅಷ್ಟರಲ್ಲಿ ಅಂತಿಮ ನಿಲುವು ತೆಗೆದುಕೊಳ್ಳಲಿದೆ.
"ವರುಣ್ ಮೊಣ ಕಾಲಿನ ಪರಿಸ್ಥಿತಿ ಉತ್ತಮ ಮಟ್ಟದಲ್ಲಿಲ್ಲ. ಹೀಗೆ ಮೂಂದುವರಿದರೆ ಟಿ20 ವಿಶ್ವಕಪ್ನ ತಂಡದಲ್ಲಿ ಮುಂದುವರಿಯಲು ಸಾಧ್ಯತೆಯಿಲ್ಲ. ಭಾರತ ತಂಡದ ಮ್ಯಾನೇಜ್ಮೆಂಟ್ ಕೂಡ ಅವರನ್ನು ತಂಡದಲ್ಲಿರಿಸಿ ಆಡಿಸುವ ಅಪಾಯಕ್ಕೆ ಒಳಗಾಗಲು ಬಯಸುವುದಿಲ್ಲ" ಎಂದು ಬಿಸಿಸಿಐನ ಅಧಿಕಾರಿಯೊಬ್ಬರ ಹೇಳಿಕೆಯನ್ನು ಉಲ್ಲೇಖಿಸಿ ಪಿಟಿಐ ವರದಿ ಮಾಡಿದೆ. "ಅವರು ನೂರು ಪ್ರತಿಶತ ಸಮರ್ಥರಾಗಿರಬೇಕು. ಟಿ20 ವಿಶ್ವಕಪ್ನ ಸಂದರ್ಭದಲ್ಲಿ ಅವರ ನೋವಿ ನಿರ್ವಹಣೆಯತ್ತ ಈಗ ಚಿತ್ತ ನೆಡಲಾಗಿದೆ.
ವರುಣ್ ಚಕ್ರವರ್ತಿ ಈ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತವಾದ ಪ್ರದರ್ಶನ ನೀಡಿದ್ದಾರೆ. ಆಡಿರುವ 13 ಪಂದ್ಯಗಳಲ್ಲಿ ವರುಣ್ 15 ವಿಕೆಟ್ ಪಡೆದುಕೊಂಡಿದ್ದಾರೆ. 6.73ರಷ್ಟು ಎಕಾನಮಿಯಲ್ಲಿ ಬೌಲಿಂಗ್ ನಡೆಸಿದ್ದಾರೆ. ಎಲ್ಲಾ ಎದುರಾಳಿ ತಮಡಗಳ ವಿರುದ್ಧವೂ ಅದ್ಭುತವಾದ ಯಶಸ್ಸು ಸಾಧಿಸಿರುವುದು ವರುಣ್ ಟಿ20 ವಿಶ್ವಕಪ್ನಲ್ಲಿ ನಿರ್ಣಾಯಕ ಪಾತ್ರವಹಿಸುವ ವಿಶ್ವಾಸ ಮೂಡಿಸಿದೆ