
ಯಾರಿಗೂ ವಿಶ್ರಾಂತಿ ಇಲ್ಲ ಎಂದ ಬೌಲಿಂಗ್ ಕೋಚ್
ಇನ್ನು ಈ ಸಂದರ್ಭದಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಪರಾಸ್ ಮ್ಹಾಂಬ್ರೆ ಹಾರ್ದಿಕ್ ಪಾಂಡ್ಯ ಫಿಟ್ನೆಸ್ ಬಗ್ಗೆ ಮಾಹಿತಿ ನೀಡುವ ಜೊತೆಗೆ ಯಾರಿಗೂ ವಿಶ್ರಾಂತಿಯನ್ನು ನೀಡಲಾಗುವುದಿಲ್ಲ ಎಂಬ ಸಂಗತಿಯನ್ನು ಕೂಡ ಹಂಚಿಕೊಂಡಿದ್ದಾರೆ. "ನಾವು ಯಾರಿಗೂ ವಿಶ್ರಾಂತಿ ನೀಡಲು ಬಯಸುವುದಿಲ್ಲ. ಟೂರ್ನಮೆಂಟ್ನಲ್ಲಿ ಮುಂದುವರಿಯಲು ಬೇಕಾದ ಸಕಾರಾತ್ಮಕ ಸಂಗತಿಗಳನ್ನು ನಾವು ಹೊಂದಿದ್ದೇವೆ. ಎಲ್ಲಾ ಆಟಗಾರರು ಕೂಡ ಫಾರ್ಮ್ನಲ್ಲಿ ಇರಬೇಕಾದ ಅಗತ್ಯವಿದೆ" ಎಂದಿದ್ದಾರೆ ಟೀಮ್ ಇಂಡಿಯಾ ಬೌಲಿಂಗ್ ಕೋಚ್ ಪರಾಸ್.

ಹಾರ್ದಿಕ್ ಬಗ್ಗೆ ಪ್ರಶಂಸೆಯ ಮಾತು
"ಹಾರ್ದಿಕ್ ಪಾಂಡ್ಯ ಎಲ್ಲಾ ಪಂದ್ಯಗಳಲ್ಲಿಯೂ ಆಡುವುದನ್ನು ಬಯಸುತ್ತಿದ್ದಾರೆ. ನಾವು ಯಾರಿಗೂ ವಿಶ್ರಾಂತಿ ನೀಡಲು ಬಯಸುತ್ತಿಲ್ಲ. ಹಾರ್ದಿಕ್ ನಮಗೆ ಪ್ರಮುಖವಾದ ಆಟಗಾರನಾಗಿದ್ದಾರೆ. ಯಾಕೆಂದರೆ ಆತ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡನ್ನೂ ಮಾಡುವ ಆಟಗಾರನಾಗಿದ್ದಾರೆ. ಅಷ್ಟು ಮಾತ್ರವಲ್ಲದೆ ಮೈದಾನದಲ್ಲಿ ಅವರ ಪಾತ್ರ ತಂಡಕ್ಕೆ ಬಹಳ ದೊಡ್ಡ ಬಲ ನೀಡುತ್ತದೆ" ಎಂದು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಪರಾಸ್ ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದ ವಿರುದ್ಧ ಹಾರ್ದಿಕ್ ಮ್ಯಾಚ್ ವಿನ್ನಿಂಗ್ ಪ್ರದರ್ಶನ
ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಆಲ್ರೌಂಡರ್ ಪ್ರದರ್ಶನ ನೀಡಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದರು. ಮೊದಲಿಗೆ ಬೌಲಿಂಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ಹಾರ್ದಿಕ್ ಪಾಂಡ್ಯ ಪಾಕಿಸ್ತಾನದ ಮಧ್ಯಮ ಕ್ರಮಾಂಕಕ್ಕೆ ಆಘಾತ ನೀಡಿದ್ದರು. ಪಾಕಿಸ್ತಾನದ ಮಧ್ಯಮ ಕ್ರಮಾಂಖದ ಮೂರು ವಿಕೆಟ್ ಕಿತ್ತು ಹಾರ್ದಿಕ್ ಪಾಕ್ ತಂಡಕ್ಕೆ ಹಿನ್ನಡೆಯುಂಟು ಮಾಡಿದ್ದರು. ಅದಾದ ಬಳಿಕ ಬ್ಯಾಟಿಂಗ್ನಲ್ಲಿ ತಂಡ ಕನಿಷ್ಠ ಮೊತ್ತಕ್ಕೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖಮಾಡಿದ್ದಾಗ ಮಾಜಿ ನಾಯಕ ವಿರಾಟ್ ಕೊಹ್ಲಿ ಜೊತೆಗೆ ಸೇರಿಕೊಂಡು ಅಮೋಘ ಶತಕದ ಜೊತೆಯಾಟದಲ್ಲಿ ಭಾಗಿಯಾದರು. ಈ ಮೂಲಕ ಭಾರತದ ಗೆಲುವಿನಲ್ಲಿ ನಿರ್ಣಾಯಕ ಪಾತ್ರವಹಿಸಿದ್ದಾರೆ ಹಾರ್ದಿಕ್ ಪಾಂಡ್ಯ.


Click it and Unblock the Notifications
