PM Modi-Team India interaction: ಪ್ರಧಾನಿ ಮೋದಿ ಜೊತೆಗಿನ ಭಾರತ ತಂಡದ ಸಂವಾದ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಜುಲೈ 5 ಶುಕ್ರವಾರ, ಬಾರ್ಬಡೋಸ್ನಲ್ಲಿ ಟಿ20 ವಿಶ್ವಕಪ್ ಗೆದ್ದ ಬಳಿಕ ಟೀಮ್ ಇಂಡಿಯಾ ಬೆರಿಲ್ ಚಂಡಮಾರುತದಿಂದ ಸಿಲುಕಿ ಹಾಕಿಕೊಂಡಿತ್ತು. ಇದಾದ ನಂತರ ರೋಹಿತ್ ಶರ್ಮಾ ಪಡೆ ಜುಲೈ 4 ರಂದು ಬೆಳಿಗ್ಗೆ 6 ಗಂಟೆಗೆ ಬಾರ್ಬಡೋಸ್ನಿಂದ ದೆಹಲಿಯ T3 ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು.
ಬಳಿಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯಕ್ಷ ರೋಜರ್ ಬಿನ್ನಿ ಮತ್ತು ಕಾರ್ಯದರ್ಶಿ ಜಯ ಶಾ ಅವರೊಂದಿಗೆ ಟೀಮ್ ಇಂಡಿಯಾ ಆಟಗಾರರು ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿದ್ದರು. ಭೇಟಿ ವೇಳೆ ಪ್ರಧಾನಿ ಮೋದಿ ಅವರೊಂದಿಗೆ ಟೀಮ್ ಇಂಡಿಯಾ ಆಟಗಾರರು ಸಂವಾದ ನಡಸಿದ್ದರು.

ಆದರೆ ಯಾವೆಲ್ಲಾ ವಿಚಾರದ ಬಗ್ಗೆ ಮಾತನಾಡಿದ್ದಾರೆ ಎಂಬುದು ತಿಳಿದಿರಲಿಲ್ಲ. ಇದೀಗ ಪ್ರಧಾನಿ ಮೋದಿ ಅವರನ್ನು ಟೀಮ್ ಇಂಡಿಯಾ ಭೇಟಿ ಮಾಡಿ ಸಂವಾದ ನಡೆಸಿದ್ದ ಸಂಪೂರ್ಣ ವಿಡಿಯೋ ಹೊರಬಿದ್ದಿದೆ. ಈ ವಿಡಿಯೋವನ್ನು ಪ್ರಧಾನಮಂತ್ರಿಗಳ ಅಧಿಕೃತ ಎಕ್ಸ್ (ಟ್ವೀಟರ್) ಹ್ಯಾಂಡಲ್ನಿಂದ ಪೋಸ್ಟ್ ಮಾಡಲಾಗಿದೆ.
ಕಠಿಣ ಪರಿಶ್ರಮಕ್ಕೆ ಫಲ ಸಿಕ್ಕಿದೆ
'ನಿಮ್ಮ ಶ್ರಮ ಸರಿಯಾದ ಸಮಯದಲ್ಲಿ ಫಲ ನೀಡಿತು' ಎಂದು ಟೀಮ್ ಇಂಡಿಯಾ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಗೆ ಪ್ರಧಾನಿ ಮೋದಿ ಹೇಳಿದ್ದಾರೆ. ರೋಚಕ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಭಾರತ 2024ರ ಟಿ 20 ವಿಶ್ವಕಪ್ ಗೆದ್ದಿತ್ತು. ಈ ಐತಿಹಾಸಿಕ ಗೆಲುವಿನ ಬಳಿಕ ಕೊಹ್ಲಿ ಟಿ20 ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಸಂವಾದದಲ್ಲಿ ಮಾತನಾಡಿದ ಕೊಹ್ಲಿ, ಇಡೀ ಟೂರ್ನಿಯಲ್ಲಿ ನಾನು ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಲಿಲ್ಲ ಎಂಬುದು ನನ್ನ ಮನಸ್ಸಿನಲ್ಲಿ ಯಾವಾಗಲೂ ಇರುತ್ತದೆ. ನಾನು ತಂಡಕ್ಕೆ ನ್ಯಾಯ ನೀಡಲಿಲ್ಲ.
ಆದರೆ ರಾಹುಲ್ ಭಾಯ್ (ಕೋಚ್ ರಾಹುಲ್ ದ್ರಾವಿಡ್) ನನಗೆ ಬೆಂಬಲ ನೀಡಿದ್ದರು. ನೀವು ಸರಿಯಾದ ಸಮಯದಲ್ಲಿ ಉತ್ತಮ ಪ್ರದರ್ಶನ ನೀಡುತ್ತೀರಿ ಎಂದು ನನಗೆ ಧೈರ್ಯ ಹೇಳಿದ್ದರು.
ಫೈನಲ್ನಲ್ಲಿ ನಾನು ಪರಿಸ್ಥಿತಿಗೆ ಹೆಚ್ಚು ಗಮನಹರಿಸಬೇಕು ಎಂದು ಭಾವಿಸಿದೆ. ನಾವು ಪ್ರತಿ ಕ್ಷಣವೂ ಬದುಕಿದ್ದೇವೆ. ನಮ್ಮೊಳಗೆ ಏನು ನಡೆಯುತ್ತಿದೆ ಎಂಬುದನ್ನು ನಾನು ವಿವರಿಸಲು ಸಾಧ್ಯವಿಲ್ಲ.
ಪರಿಸ್ಥಿತಿಯ ಕಾರಣಕ್ಕಾಗಿ ನಾನು ನನ್ನ ಅಹಂಕಾರವನ್ನು ಬಿಟ್ಟುಬಿಡಲು ಒತ್ತಾಯಿಸಲಾಯಿತು ಮತ್ತು ನಾನು ಆಟವನ್ನು ಗೌರವಿಸುತ್ತೇನೆ. ಇದು ನನಗೆ ಕೆಲಸ ಮಾಡಿದೆ ಎಂದು ಕೊಹ್ಲಿ ಹೇಳಿದ್ದಾರೆ.
ಅದೃಷ್ಟ ನನ್ನನ್ನು ಬೆಂಬಲಿಸಿತು
ಸಂವಾದದಲ್ಲಿ ಟೀಮ್ ಇಂಡಿಯಾ ಉಪನಾಯಕ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ವೃತ್ತಿಜೀವನದ ಕಠಿಣ ಹಂತದ ಬಗ್ಗೆ ಮಾತನಾಡಿದರು. ಕಳೆದ ಆರು ತಿಂಗಳಲ್ಲಿ ಅವರ ಟೀಕೆ ಮತ್ತು ಹೋರಾಟಗಳನ್ನು ನೆನಪಿಸಿಕೊಂಡರು.
'ಕಳೆದ ಆರು ತಿಂಗಳಲ್ಲಿ ಸಾಕಷ್ಟು ಕಷ್ಟಪಟ್ಟಿದ್ದೇನೆ. ಯಾವಾಗಲೂ ನನ್ನ ಟೀಕಾಕಾರರಿಗೆ ಪದಗಳಿಂದಲ್ಲ, ಆಟದ ಮೂಲಕ ಉತ್ತರಿಸುತ್ತೇನೆ ಎಂದು ನಿರ್ಧರಿಸಿದೆ. ಆಗ ಮೂಕನಾಗಿದ್ದ ನಾನು ಈಗ ಮೂಕನಾಗಿದ್ದೇನೆ. ನಾನು ತುಂಬಾ ಕಷ್ಟಪಟ್ಟೆ ಮತ್ತು ಅದೃಷ್ಟವೂ ನನ್ನನ್ನು ಬೆಂಬಲಿಸಿತು ಎಂದು ಹಾರ್ದಿಕ್ ತಿಳಿಸಿದ್ದಾರೆ.
ಪ್ರಧಾನಿಗೆ ಕ್ಯಾಚ್ ಬಗ್ಗೆ ತಿಳಿಸಿದ ಸೂರ್ಯ
ಟಿ20 ಸ್ಟಾರ್ ಬ್ಯಾಟರ್ ಸೂರ್ಯಕುಮಾರ್ ಯಾದವ್ ಭಾರತ ವಿಶ್ವಕಪ್ ಗೆಲ್ಲಲು ಪ್ರಮುಖ ಪಾತ್ರವಹಿಸಿದ್ದರು.
ಬೌಂಡರಿ ರೋಪ್ನಲ್ಲಿ ಅದ್ಭುತ ಕ್ಯಾಚ್ ಅನ್ನು ಸೂರ್ಯಕುಮಾರ್ ಯಾದವ್ ಹಿಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸೂರ್ಯ, 'ನಾನು ಅಂತಹ ಕ್ಯಾಚ್ಗಳನ್ನು ಅಭ್ಯಾಸ ಮಾಡಿದ್ದೆ ಮತ್ತು ಆ ಸಮಯದಲ್ಲಿ ನಾನು ಶಾಂತವಾಗಿದ್ದೆ ಎಂದು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಫೈನಲ್ನಲ್ಲಿ ತಮ್ಮ ಐಕಾನಿಕ್ ಕ್ಯಾಚ್ ಕುರಿತು ವಿವರಿಸಿದ್ದಾರೆ.
ಬುಮ್ರಾ ಅವರನ್ನು ಹೊಗಳಿದ ಅರ್ಷದೀಪ್
ಟೀಮ್ ಇಂಡಿಯಾ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅವರ ಸಹ ಆಟಗಾರರ ಜಸ್ಪ್ರೀತ್ ಬುಮ್ರಾ ಅವರನ್ನು ಹೊಗಳಿದ್ದಾರೆ. ಬುಮ್ರಾ ಅವರು ತಮ್ಮ ಬೌಲಿಂಗ್ ಮೂಲಕ ನಿಖರತೆ ಮತ್ತು ಎದುರಾಳಿಗಳನ್ನು ಒತ್ತಡದಲ್ಲಿ ಇರಿಸುವುದಕ್ಕಾಗಿ ಅರ್ಷದೀಪ್ ಗುಣಗಾನ ಮಾಡಿದ್ದಾರೆ.
ಒಂದು ತುದಿಯಲ್ಲಿ ಬ್ಯಾಟರ್ಗಳನ್ನು ಬುಮ್ರಾ ಅವರು ಒತ್ತಡದಲ್ಲಿಟ್ಟಿದ್ದರಿಂದ ಅವರು ನನ್ನ ಬೌಲಿಂಗ್ನಲ್ಲಿ ರನ್ ಗಳಿಸಲು ಮುಂದಾಗುತ್ತಿದ್ದರು. ಈ ಸಂದರ್ಭದಲ್ಲಿ ನನಗೆ ಅತಿಹೆಚ್ಚು ವಿಕೆಟ್ಗಳನ್ನು ಪಡೆಯಲು ಕಾರಣವಾಯಿತು.
ಈ ಎಲ್ಲಾ ಶ್ರೇಯಸ್ಸು ಇಡೀ ತಂಡಕ್ಕೆ ಸಲ್ಲುತ್ತದೆ ಎಂದು ಅರ್ಷದೀಪ್ ಸಿಂಗ್ ಹೇಳಿದ್ದಾರೆ. ಅರ್ಷದೀಪ್ ಸಿಂಗ್ ಒಂದು ಟಿ20 ವಿಶ್ವಕಪ್ ಆವೃತ್ತಿಯಲ್ಲಿ ಜಂಟಿ-ಅತಿ ಹೆಚ್ಚು ವಿಕೆಟ್ (17) ಪಡೆದ ಬೌಲರ್ ಆಗಿದ್ದಾರೆ.
ದೇಶದೀಪ್ ಎಂದು ಕರೆಯಬೇಕೇ
ಪ್ರಧಾನಿ ಮೋದಿ ಅವರು ಚೈನಾಮನ್ ಕುಲದೀಪ್ ಯಾದವ್ ಅವರನ್ನು 'ನಾವು ನಿಮ್ಮನ್ನು ಕುಲದೀಪ್ ಅಥವಾ ದೇಶದೀಪ್ ಎಂದು ಕರೆಯಬೇಕೇ' ಎಂದು ಕೇಳಿದರು. ಇದಕ್ಕೆ ಉತ್ತರ ಪ್ರದೇಶದ ಸ್ಪಿನ್ನರ್, 'ನಾನು ದೇಶದವನು' ಎಂದು ಉತ್ತರಿಸಿದರು.
ಕುಲದೀಪ್ ಯಾದವ್, 'ಮಧ್ಯಮ ಓವರ್ಗಳಲ್ಲಿ ವಿಕೆಟ್ಗಳನ್ನು ಪಡೆಯುವುದು ನನ್ನ ಪಾತ್ರವಾಗಿದೆ. ಅದನ್ನು ಮಾಡಲು ಬಯಸುತ್ತೇನೆ. ನಾನು ತುಂಬಾ ಸಂತೋಷವಾಗಿದ್ದೇನೆ. ಈವರೆಗೆ 3 ವಿಶ್ವಕಪ್ಗಳನ್ನು ಆಡಿದ್ದೇನೆ ಮತ್ತು ಟ್ರೋಫಿ ಗೆಲ್ಲುವುದು ನನಗೆ ಸಂತಸ ಕ್ಷಣವಾಗಿದೆ ಎಂದು ನುಡಿದ್ದಾರೆ
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications