ತಂಡದ ಪರ ಅತ್ಯುತ್ತಮ ಆಟವನ್ನು ಅಡಿರುವ ಆಟಗಾರನನ್ನು ಗೌರವಿಸಿ ಎಂದ ಶಾನ್ ಪೊಲಾಕ್
ಇಶಾಂತ್ ಶರ್ಮಾ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿಯೂ ಕೂಡ ಅವಕಾಶ ಸಿಗದೇ ಇರುವುದರ ಕುರಿತು ಮಾತನಾಡಿರುವ ಶಾನ್ ಪೊಲಾಕ್ ಇಶಾಂತ್ ಶರ್ಮಾ ಈ ಹಿಂದೆ ಹಲವಾರು ಬಾರಿ ಟೀಮ್ ಇಂಡಿಯಾ ಪರ ಉತ್ತಮ ಪ್ರದರ್ಶನವನ್ನು ನೀಡಿರುವಂತಹ ಆಟಗಾರನಾಗಿದ್ದು ಬಿಸಿಸಿಐ ಆತ ನೀಡಿರುವ ಕೊಡುಗೆಗಳನ್ನು ಪರಿಗಣಿಸಿ ಗೌರವಿಸಬೇಕು ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹಾಗೂ ಆತನ ಜತೆ ಸಂಪರ್ಕಿಸಿ ಮಾತುಕತೆಯನ್ನು ನಡೆಸಿ ಆಯ್ಕೆ ಮಾಡದೇ ಇರುವುದಕ್ಕೆ ಸೂಕ್ತ ಕಾರಣಗಳನ್ನು ತಿಳಿಸುವುದು ಉತ್ತಮ ಎಂದು ಶಾನ್ ಪೊಲಾಕ್ ಅಭಿಪ್ರಾಯಪಟ್ಟಿದ್ದಾರೆ.
ಇಶಾಂತ್ ಶರ್ಮಾರಿಗೆ ತೃತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ನೀಡಬೇಕಿತ್ತು
ಇನ್ನೂ ಮುಂದುವರೆದು ಇಶಾಂತ್ ಶರ್ಮಾ ಕುರಿತಾಗಿ ಮಾತನಾಡಿರುವ ಶಾನ್ ಪೊಲಾಕ್ ಮೊದಲೆರಡು ಪಂದ್ಯಗಳಲ್ಲಿ ಪಿಚ್ ಸ್ಥಿತಿಯನ್ನು ನೋಡಿದ ಟೀಮ್ ಇಂಡಿಯಾ ಇಶಾಂತ್ ಶರ್ಮಾರಿಗೆ ತೃತೀಯ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿಯುವ ಅವಕಾಶವನ್ನು ನೀಡಬೇಕಿತ್ತು, ಈ ಹಿಂದೆ ಇಂತಹ ಪಿಚ್ಗಳಲ್ಲಿ ಉತ್ತಮ ಆಟವನ್ನು ಆಡಿರುವ ಅನುಭವ ಹೊಂದಿರುವ ಇಶಾಂತ್ ಶರ್ಮಾ ಈ ಪಂದ್ಯಕ್ಕೆ ಸೂಕ್ತ ಆಯ್ಕೆಯಾಗಿದ್ದರು ಎಂದು ಶಾನ್ ಪೊಲಾಕ್ ಇಶಾಂತ್ ಶರ್ಮಾ ಪರ ಬ್ಯಾಟ್ ಬೀಸಿದ್ದಾರೆ.
ಇಶಾಂತ್ ಶರ್ಮಾ ಬದಲು ಉಮೇಶ್ ಯಾದವ್ ಆಯ್ಕೆಯಾಗಿದ್ದೇಕೆ?
ಸಾಕಷ್ಟು ಅನುಭವವನ್ನು ಹೊಂದಿರುವ ಇಶಾಂತ್ ಶರ್ಮಾ ಬದಲು ಉಮೇಶ್ ಯಾದವ್ ಅವರಿಗೆ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶವನ್ನು ನೀಡಲು ಪ್ರಮುಖ ಕಾರಣ ಈ ಹಿಂದೆ ಇಂಗ್ಲೆಂಡ್ ನೆಲದಲ್ಲಿ ನಡೆದಿದ್ದ ಸರಣಿಯಲ್ಲಿ ಉಮೇಶ್ ಯಾದವ್ ನೀಡಿದ್ದ ಪ್ರದರ್ಶನ. ಹೌದು, ಇಂಗ್ಲೆಂಡ್ ನೆಲದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದ ಉಮೇಶ್ ಯಾದವ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ತೃತೀಯ ಟೆಸ್ಟ್ ಪಂದ್ಯದಲ್ಲಿ ಅವಕಾಶ ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.