
ಒತ್ತಡದ ಅನುಭವವಾಗದಂತೆ ಮಾಡುವುದು ಉದ್ದೇಶ
ಸ್ಟಾರ್ಸ್ಟಪೋರ್ಟ್ಸ್ನ ಕಾರ್ಯಕ್ರಮದಲ್ಲಿ ಭಾಗಿಯಾದ ರೋಹಿತ್ ಶರ್ಮಾ 'ನಾಯಕನಾಗಿ ನನಗೆ ತಂಡದ ಆಟಗಾರರು ದೊಡ್ಡ ಟೂರ್ನಿಗಳಲ್ಲಿ ಒತ್ತಡದ ಅನುಭವವಾಗದಂತಾ ವಾತಾವರಣವನ್ನು ನಿರ್ಮಿಸುವುದು ಬಹಳ ಮುಖ್ಯತವಾಗಿದೆ. ಆಟಗಾರರು ತಾವು ಮುಂದೆ ಬಂದು ತಮ್ಮ ಅತ್ಯುತ್ತಮ ಪ್ರದರ್ಶನ ಹೊರಬರುವಂತೆ ಮಾಡುವುದು ಪ್ರಮುಖ ಉದ್ದೇಶ. ಎಲ್ಲರೂ ಪ್ರತಿಯೊಬ್ಬರೊಂದಿಗೆ ಉತ್ತಮ ಬಾಂಧವ್ಯವನ್ನು ಹೊಂದಿರಬೇಕಾಗುತ್ತದೆ ಹಾಗೂ ಆನಂದಿಸಬೇಕು. ಯಾಕೆಂದರೆ ಒತ್ತಡಗಳು ಹೆಚ್ಚಾಗದಂತೆ ಮಾಡುವುದು ನನ್ನ ಉದ್ದೇಶ" ಎಂದಿದ್ದಾರೆ ರೋಹಿತ್ ಶರ್ಮಾ.

ಒತ್ತಡಗಳು ಸಾಮಾನ್ಯ
ಮುಂದುವರಿದು ಮಾತನಾಡಿದ ರೋಹಿತ್ ಶರ್ಮಾ 'ಆಟದಲ್ಲಿ ಒತ್ತಡಗಳು ಸಾಮಾನ್ಯ. ಯಾಕೆಂದರೆ ನೀವು ಬೌಲರ್ ಆಗಿದ್ದರೆ ಚೆಂಡನ್ನು ಹಿಡಿದುಕೊಂಡಾಗ ಒಂದು ಒತ್ತಡವಿರುತ್ತದೆ. ಬ್ಯಾಟರ್ ಆಗಿದ್ದರೆ ಬ್ಯಾಟ್ಅನ್ನು ಹಿಡಿದಿದ್ದರೆ ಆ ಒತ್ತಡ ನಿಮಗೆ ಅನುಭವವಾಗುತ್ತದೆ. ಅದನ್ನು ನಾವು ನಮ್ಮದೇ ರೀತಿಯಲ್ಲಿ ಎದುರಿಸಬೇಕು. ಆ ಒತ್ತಡಕ್ಕೆ ನಾಯಕನಾಗಲಿ ಕೋಚ್ ಆಗಲಿ ಏನೂ ಮಾಡಲಕು ಸಾಧ್ಯವಿಲ್ಲ. ಆಯಾಯ ಆಟಗಾರರೇ ಅದನ್ನು ನಿಭಾಯಿಸಬೇಕಾಗುತ್ತದೆ' ಎಂದಿದ್ದಾರೆ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ.

ನಾಯಕನ ಹೊಣೆಗಾರಿಕೆಯನ್ನು ಹೇಳಿದ ರೋಹಿತ್
ಈ ಸಂದರ್ಭದಲ್ಲಿ ನಾಯಕನಾಗಿ ಜವಾಬ್ಧಾರಿ ಏನು ಎಂಬ ಅಂಶವನ್ನು ಹಂಚಿಕೊಂಡಿದ್ದಾರೆ. ತಂಡದ ಪ್ರತಿಯೊಬ್ಬ ಆಟಗಾರನೊಂದಿಗೆ ಉತ್ತಮವಾದ ಬಾಂಧವ್ಯ ಇರಬೇಕು ಎಂದ ಅವರು ಆಟಗಾರರು ಪ್ರದರ್ಶನ ಮತ್ತಷ್ಟು ಉತ್ತಮಗೊಳ್ಳಲು ಸಹಾಯ ಮಾಡಬೇಕಾಗುತ್ತದೆ. ವಿಶೇಷವಾಗಿ ಆಟಗಾರರು ಕಠಿಣ ಸಂದರ್ಭವನ್ನು ಎದುರಿಸುತ್ತಿದ್ದಾಗ ನಾಯಕನ ಜವಾಬ್ಧಾರಿ ಪ್ರಮುಖವಾಗಿರುತ್ತದೆ ಎಂದಿದ್ದಾರೆ ರೋಹಿತ್ ಶರ್ಮಾ. "ಕೆಲ ಆಟಗಾರರು ಕಠಿಣ ಸಂದರ್ಭವನ್ನು ಎದುರಿಸುತ್ತಿರುತ್ತಾರೆ. ಆ ಸಂದರ್ಭದಲ್ಲಿ ಏನಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಅರ್ಥೈಸಬೇಕಾಗುತ್ತದೆ. ಜೊತೆಗೆ ತಂಡ ಆತನಿಂದ ಏನನ್ನು ನಿರೀಕ್ಷಿಸುತ್ತಿದೆ ಹಾಗೂ ತಂಡದಲ್ಲಿ ಯಾವ ಪಾತ್ರವನ್ನು ನಿರ್ವಹಿಸಬೇಕು ಎಂಬುದನ್ನು ಸ್ಪಷ್ಟಪಡಿಸಬೇಲಾಗುತ್ತದೆ" ಎಂದಿದ್ದಾರೆ ರೋಹಿತ್ ಶರ್ಮಾ.

ಏಷ್ಯಾ ಕಪ್ಗೆ ಆಯ್ಕೆಯಾಗಿರುವ ಭಾರತ ತಂಡ
ರೋಹಿತ್ ಶರ್ಮಾ (ನಾಯಕ), ಕೆಎಲ್ ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ದೀಪಕ್ ಹೂಡಾ, ದಿನೇಶ್ ಕಾರ್ತಿಕ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ರವಿ ಬಿಷ್ಣೋಯ್, ಭುವನೇಶ್ವರ್ ಕುಮಾರ್, ಅರ್ಶ್ದೀಪ್ ಸಿಂಗ್, ಆವೇಶ್ ಖಾನ್.
ಸ್ಟ್ಯಾಂಡ್ಬೈ: ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ದೀಪಕ್ ಚಹಾರ್.


Click it and Unblock the Notifications












