ಟೀಮ್ ಇಂಡಿಯಾದ ಮಿಡ್ಲ್ ಆರ್ಡರ್ ಸಮಸ್ಯೆ ಏಕದಿನ ಹಾಗೂ ಟಿ20 ಕ್ರಿಕೆಟ್ನಲ್ಲಿ ಬಗೆ ಹರಿದಿದೆ. ಆದರೆ, ಈ ಸಮಸ್ಯೆ ಟೆಸ್ಟ್ನಲ್ಲಿ ಹಾಗೇ ಇದೆ. ಈ ಆರ್ಡರ್ನಲ್ಲಿ ಟೀಮ್ ಇಂಡಿಯಾ ಪರ ಆಡಿದ ಯುವ ಆಟಗಾರರು ವೈಫಲ್ಯ ಅನುಭವಿಸುತ್ತಿರುವುದು ಟೀಮ್ ಮ್ಯಾನೇಜ್ಮೆಂಟ್ ಚಿಂತೆ ಹೆಚ್ಚಿಸಿದೆ. ಟೆಸ್ಟ್ ಕ್ರಿಕೆಟ್ನಲ್ಲಿ ನಿಜಕ್ಕೂ ಈಗ ಮೂರನೇ ಸ್ಥಾನ ಖಾಲಿ ಇದೆ.
ಟೀಮ್ ಇಂಡಿಯಾದಲ್ಲಿ ನಿಜಕ್ಕೂ ಮೂರನೇ ಸ್ಥಾನದ ಭಾರ ಕಳೆದ ಎರಡು ದಶಕದಿಂದ ಕಾಡಲಿಲ್ಲ. ಕಾರಣ ಈ ಸ್ಥಾನದಲ್ಲಿ ಸದ್ಯ ಟೀಮ್ ಇಂಡಿಯಾದ ಕೋಚ್ ರಾಹುಲ್ ದ್ರಾವಿಡ್ ಹಾಗೂ ಅವರ ಶಿಷ್ಯ ಚೇತೇಶ್ವರ್ ಪೂಜಾರ ಸತತ ಆಡಿ ಸೈ ಎನಿಸಿಕೊಂಡಿದ್ದಾರೆ. ಆದರೆ ಪೂಜಾರ ಅವರ ಫಾರ್ಮ್ ಇಲ್ಲದೇ ಇರುವ ಕಾರಣ ಅವರಿಗೆ ತಂಡದಿಂದ ಕೈ ಬಿಡಲಾಗಿದ್ದು, ಈ ಸ್ಥಾನಕ್ಕೆ ಯುವ ಆಟಗಾರನಿಗೆ ಅವಕಾಶ ನೀಡಲಾಗಿದೆ.

70 ದಿನ 10 ಇನ್ನಿಂಗ್ಸ್ ಗಳಲ್ಲಿ 13.20 ಸರಾಸರಿಯಲ್ಲಿ 132 ರನ್ ಸಿಡಿಸಿ ಟೀಮ್ ಇಂಡಿಯಾದ ಟೆನ್ಷನ್ ಹೆಚ್ಚಿಸುವ ಕೆಲಸ ಮಾಡಿದ ಆಟಗಾರನೇ ಯಂಗ್ ಪ್ಲೇಯರ್ ಶುಭಮನ್ ಗಿಲ್.. ಇವರ ಫಾರ್ಮ್ ತಂಡಕ್ಕೆ ತಲೆ ನೋವು ತಂದಿದೆ. ಮೊದಲ ಟೆಸ್ಟ್ನಲ್ಲಿ ಟೀಮ್ ಇಂಡಿಯಾ ಸೋಲಿನತ್ತ ಮುಖಮಾಡಿದರಲ್ಲಿ ಈ ಪ್ಲೇಯರ್ ಪಾತ್ರವೂ ದೊಡ್ಡದರಿ.
ಶುಭಮನ್ ಗಿಲ್ ಅವರ ಈ ಪ್ರದರ್ಶನದ ನಂತರ ಅವರನ್ನು ತಂಡದಲ್ಲಿ ಮುಂದುವರೆಸುವುದು ರೋಹಿತ್ ಶರ್ಮಾ ಅವರಿಗೆ ಕಷ್ಟ. ಹೈದರಾಬಾದ್ ಟೆಸ್ಟ್ನಲ್ಲಿ ಇಂಗ್ಲೆಂಡ್ ಭಾರತದ ವಿರುದ್ಧ ಅಟ್ಯಾಕಿಂಗ್ ಕ್ರಿಕೆಟ್ ಆಡಿ ಸೋಲನ್ನು ಗೆಲುವನ್ನಾಗಿ ಪರಿವರ್ತಿಸಿದ ರೀತಿ ಅಮೋಘ. ಈ ಸೋಲಿನ ನಂತರ ಟೀಮ್ ಮ್ಯಾನೇಜ್ಮೆಂಟ್ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಗಿಲ್ ಬ್ಯಾಟಿಂಗ್ ಬಗ್ಗೆ ಟೀಕೆಗಳು ಆರಂಭವಾಗಿ ದಿನಗಳೇ ಕಳೆದಿವೆ. ಇಂಗ್ಲೆಂಡ್ ಮಾಜಿ ನಾಯಕ ಕೆವಿನ್ ಪೀಟರ್ಸನ್ ಅವರು ಶುಭಮನ್ ಗಿಲ್ ಕೋಚ್ ರಾಹುಲ್ ದ್ರಾವಿಡ್ ಅವರೊಂದಿಗೆ ನೆಟ್ಸ್ನಲ್ಲಿ ಸಮಯ ಕಳೆಯಬೇಕು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

ಫೆಬ್ರವರಿ 2 ರಿಂದ ವಿಶಾಖಪಟ್ಟಣದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ಮುಂದಿನ ಟೆಸ್ಟ್ ಪಂದ್ಯವನ್ನು ಆಡಬೇಕಾಗಿದೆ. ಹೈದರಾಬಾದ್ ಟೆಸ್ಟ್ನಲ್ಲಿ 28 ರನ್ಗಳ ಸೋಲಿನ ನಂತರ ಭಾರತ ತಂಡ ಟೆಸ್ಟ್ ಸರಣಿಯಲ್ಲಿ ಪುಟಿದೇಳುವ ಸೂಚನೆ ಹೊಂದಿದೆ. ಹೈದರಾಬಾದ್ ಟೆಸ್ಟ್ನಲ್ಲಿ ಕೆಲವು ಆಟಗಾರರ ಪ್ರದರ್ಶನ ಉತ್ತಮವಾಗಿತ್ತು. ಅವರಲ್ಲಿ ಹೆಚ್ಚಿನವರು ಸರಾಸರಿ ಮತ್ತು ಇಬ್ಬರು ಆಟಗಾರರು ಇಲ್ಲಿ ಸಂಪೂರ್ಣವಾಗಿ ವಿಫಲರಾದರು. ಮೊದಲ ಇನಿಂಗ್ಸ್ನಲ್ಲಿ 23 ರನ್ ಗಳಿಸಿದ್ದ ಶುಭಮನ್ ಗಿಲ್ ಎರಡನೇ ಇನ್ನಿಂಗ್ಸ್ನಲ್ಲಿ ಖಾತೆ ತೆರೆಯಲೂ ಸಹ ಸಾಧ್ಯವಾಗಲಿಲ್ಲ. ಆದರೆ ಈ ಪಂದ್ಯದಲ್ಲಿ ಮೊಹಮ್ಮದ್ ಸಿರಾಜ್ ಒಂದೇ ಒಂದು ವಿಕೆಟ್ ಪಡೆಯಲಿಲ್ಲ. ಭಾರತ ತಂಡ ವಿಶಾಖಪಟ್ಟಣಂ ಟೆಸ್ಟ್ ಪಂದ್ಯವನ್ನು ಪ್ರವೇಶಿಸುವಾಗ, ಈ ಇಬ್ಬರು ಆಟಗಾರರ ಪ್ರದರ್ಶನದ ಬಗ್ಗೆ ಖಂಡಿತವಾಗಿಯೂ ಯೋಚಿಸಬೇಕಾಗುತ್ತದೆ.
ಶುಭಮನ್ ಗಿಲ್ಗೆ ಟೆಸ್ಟ್, ಏಕದಿನ ಮತ್ತು ಟಿ20 - ಎಲ್ಲಾ ಮೂರು ಸ್ವರೂಪಗಳಲ್ಲಿ ಹೊಂದಿಕೊಳ್ಳುವ ಭಾರತದ ಆಯ್ದ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು. ಅಂತಹ ಪರಿಸ್ಥಿತಿಯಲ್ಲಿ, ತಂಡದಿಂದ ಕೈಬಿಡುವುದು ಗಿಲ್ನ ಮನೋಸ್ಥೈರ್ಯವನ್ನು ಕುಗ್ಗಿಸಬಹುದು. ರೋಹಿತ್ ಶರ್ಮಾ-ರಾಹುಲ್ ದ್ರಾವಿಡ್ ಜೋಡಿಯು ಕನಿಷ್ಠ ಇದನ್ನು ನಂಬುತ್ತದೆ. ರೋಹಿತ್-ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ-ರವಿ ಶಾಸ್ತ್ರಿ ಜೋಡಿಯ ನಡುವಿನ ದೊಡ್ಡ ವ್ಯತ್ಯಾಸವೆಂದರೆ ಮೊದಲು ಪ್ಲೇಯಿಂಗ್ ಇಲೆವೆನ್ನಲ್ಲಿ ಆಗಾಗ್ಗೆ ಬದಲಾವಣೆಗಳನ್ನು ಮಾಡಲಾಗುತ್ತಿತ್ತು. ಆದರೆ ರೋಹಿತ್-ದ್ರಾವಿಡ್ ಆಟಗಾರರಿಗೆ ಅವಕಾಶಗಳನ್ನು ನೀಡುವ ಪರವಾಗಿದ್ದಾರೆ.

ಹೆಚ್ಚು ಅವಕಾಶವು ಇತರ ಆಟಗಾರರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದಾರೆ. ಕೆಲವು ದಿನಗಳ ಹಿಂದೆ, ಇರ್ಫಾನ್ ಪಠಾಣ್ ಟ್ವೀಟ್ ಮಾಡಿ ಈ ಆಟಗಾರನಿಗೆ ಅವಕಾಶ ಸಿಗಬೇಕೇ ಎಂದು ಕೇಳಿದ್ದರು. ಇರ್ಫಾನ್ ಅವರ ಈ ಪೋಸ್ಟ್ನಲ್ಲಿ ಸರ್ಫರಾಜ್ ಖಾನ್ ಅವರ ಅಂಕಿಅಂಶಗಳನ್ನು ತೋರಿಸಲಾಗಿದೆ. ಪ್ರಸ್ತುತ ಟೀಂ ಇಂಡಿಯಾದಲ್ಲಿ ಸರ್ಫರಾಜ್ ಇಲ್ಲ. ರಜತ್ ಪಾಟಿದಾರ್ ಖಂಡಿತವಾಗಿಯೂ ತಂಡದಲ್ಲಿ ಸೇರ್ಪಡೆಗೊಂಡರೆ ಒಳ್ಳೆಯದು. ರಜತ್ ಪಾಟಿದಾರ್ ಜನವರಿಯಲ್ಲಿಯೇ ಇಂಗ್ಲೆಂಡ್ ಲಯನ್ಸ್ ವಿರುದ್ಧ ಎರಡು ಶತಕಗಳನ್ನು ಗಳಿಸಿದ್ದಾರೆ. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ, ಅವರು 151 ರನ್ಗಳ ಇನ್ನಿಂಗ್ಸ್ಗಳನ್ನು ಆಡಿದ್ದುರು ಮತ್ತು ಆರಂಭಿಕ ಸಮಯದಲ್ಲಿ ಅವರು 111 ರನ್ ಗಳಿಸಿದರು. ಅಂದರೆ ಹೊಸ ಚೆಂಡನ್ನು ಎದುರಿಸುವ ಕಲೆಯನ್ನು ಸಹ ಅವರ ಕರಗಿಸಿಕೊಂಡಿದ್ದಾರೆ.
ಗಿಲ್ ಈ 7 ಪಂದ್ಯಗಳ 10 ಇನ್ನಿಂಗ್ಸ್ಗಳಲ್ಲಿ ಕ್ರಮವಾಗಿ 4, 0, 8, 2, 26, 36, 10, 23, 23, 0 ರನ್ ಗಳಿಸಿದ್ದಾರೆ. ಈ ಪ್ರದರ್ಶನದ ನಂತರವೇ ಅವರನ್ನು ಪ್ಲೇಯಿಂಗ್ ಇಲೆವೆನ್ನಿಂದ ಕೈಬಿಡಬೇಕೆಂಬ ಬೇಡಿಕೆ ಇತ್ತು. ರೋಹಿತ್ ಬ್ರಿಗೇಡ್ ಶುಬ್ಮನ್ ಗಿಲ್ ಅವರನ್ನು ಕೈಬಿಟ್ಟರೆ, ಅವರ ಸ್ಥಾನದಲ್ಲಿ ರಜತ್ ಪಾಟಿದಾರ್ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚು.