ಶುಕ್ರವಾರ, ಸೆಪ್ಟೆಂಬರ್ 15ರಂದು ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ 2023ರ ಏಷ್ಯಾ ಕಪ್ ಪಂದ್ಯಾವಳಿಯ ಸೂಪರ್ 4 ಪಂದ್ಯದಲ್ಲಿ ಭಾರತ ಮತ್ತು ಬಾಂಗ್ಲಾದೇಶ ತಂಡಗಳು ಸೆಣಸಾಡಲಿವೆ. ಇದಕ್ಕೂ ಮುನ್ನ ಬಾಂಗ್ಲಾದೇಶ ತಂಡಕ್ಕೆ ಹಿನ್ನಡೆಯಾಗಿದ್ದು, ಸ್ಟಾರ್ ಬ್ಯಾಟರ್ ಆ ಪಂದ್ಯದಿಂದ ಹೊರಗುಳಿಯಲಿದ್ದಾರೆ.
ಏಷ್ಯಾ ಕಪ್ ಪಂದ್ಯಾವಳಿ ಮಧ್ಯೆಯೇ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿಕೆಟ್ ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಮ್ ಅವರ ಪತ್ನಿ ಜನ್ನತುಲ್ ಕಿಫಾಯತ್ ಅವರು ಹೆಣ್ಣುಮಗುವಿಗೆ ಜನ್ಮ ನೀಡಿರುವ ಹೃದಯಸ್ಪರ್ಶಿ ಸಂದರ್ಭವು ಸೋಮವಾರ ಸಂಭವಿಸಿದೆ.

ಆದರೆ, ಸದ್ಯ ತಾಯಿ ಮತ್ತು ಮಗು ಇಬ್ಬರೂ ತೀವ್ರ ನಿಗಾ ಘಟಕ (ಐಸಿಯು)ದಲ್ಲಿದ್ದಾರೆ ಮತ್ತು ಇದು ಮುಶ್ಫಿಕರ್ ರಹೀಮ್ ಕುಟುಂಬ ಹಾಗೂ ಕ್ರಿಕೆಟ್ ಸಮುದಾಯವು ಸಂತೋಷವಾಗಿರಲು ಸಾಧ್ಯವಿಲ್ಲ.
ಬಾಮಗ್ಲಾದೇಶ ತಂಡದ ಪ್ರಮುಖ ಆಟಗಾರ ಮುಶ್ಫಿಕರ್ ರಹೀಮ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹೆಣ್ಣುಮಗು ಜನಿಸಿದ ಸಂತೋಷಕರ ಸುದ್ದಿಯನ್ನು ಹಂಚಿಕೊಂಡರು. ಮುಶ್ಫಿಕರ್ ತಮ್ಮ ಮಗ ಶಹರೋಸ್ ರಹೀಮ್ 'ಇದು ಹೆಣ್ಣು ಮಗು' ಎಂಬ ಫಲಕವನ್ನು ಹಿಡಿದಿರುವ ಪ್ರೀತಿಯ ಚಿತ್ರವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕ್ರಿಕೆಟಿಗ ತಮ್ಮ ಕೃತಜ್ಞತೆ ವ್ಯಕ್ತಪಡಿಸುತ್ತಾ, "ಅಸ್ಸಲಾಮುಅಲೈಕುಮ್ ಆಲ್... ಅಲ್ಹಮ್ದುಲಿಲ್ಲಾಹ್ ಸರ್ವಶಕ್ತನಾದ ಅಲ್ಲಾಹನು ನಮಗೆ ಹೆಣ್ಣು ಮಗುವನ್ನು ಆಶೀರ್ವದಿಸಿದ್ದಾನೆ. ತಾಯಿ ಮತ್ತು ಮಗು ಇಬ್ಬರೂ ವೀಕ್ಷಣೆಯಲ್ಲಿದ್ದಾರೆ. ದಯವಿಟ್ಟು ನಮಗಾಗಿ ಪ್ರಾರ್ಥಿಸಿ," ಎಂದು ಬರೆದುಕೊಂಡಿದ್ದಾರೆ.
ಕೀಪರ್-ಬ್ಯಾಟರ್ ಮುಶ್ಫಿಕರ್ ರಹೀಮ್ ಅವರು ಕುಟುಂಬ ಸಮರ್ಪಿತ ವ್ಯಕ್ತಿಯಾಗಿದ್ದರಿಂದ, ಈ ಅಪರೂಪದ ಸಂದರ್ಭದಲ್ಲಿ ತನ್ನ ಹೆಂಡತಿ ಜೊತೆಗಿರಲು ತವರಿಗೆ ಹಿಂದಿರುಗಿದ್ದಾರೆ.
ಕೌಟುಂಬಿಕ ಮೌಲ್ಯಗಳಿಗೆ ಆದ್ಯತೆ ನೀಡುವ ಮತ್ತು ಮಗುವಿನ ಜನನದ ಸಮಯದಲ್ಲಿ ಕುಟುಂಬದ ಜೊತೆಗಿರುವ ಅವರ ನಿರ್ಧಾರವು ಕ್ರಿಕೆಟ್ಗೆ ಮಾತ್ರವಲ್ಲದೆ, ಅವರ ಪ್ರೀತಿಪಾತ್ರರ ಬಗ್ಗೆಯೂ ಅವರ ಬದ್ಧತೆಯನ್ನು ತೋರಿಸುತ್ತದೆ. ಈ ನಡೆಯಿಂದ ಮುಶ್ಫಿಕರ್ ರಹೀಮ್ ತಮ್ಮ ಅಭಿಮಾನಿಗಳು ಮತ್ತು ಸಹ ಆಟಗಾರರಿಂದ ಬೆಂಬಲ ಗಳಿಸಿದರು.
ಪ್ರಸ್ತುತ ಏಷ್ಯಾ ಕಪ್ ಪಂದ್ಯಾವಳಿಯಲ್ಲಿ ಬಾಂಗ್ಲಾದೇಶ ತಂಡದ ಸೂಪರ್ ಫೋರ್ ಹಂತದ ಒಂದು ಪಂದ್ಯ ಉಳಿದಿದ್ದು, ಶುಕ್ರವಾರದಂದು ಬಲಿಷ್ಠ ಭಾರತ ತಂಡವನ್ನು ಎದುರಿಸಲಿದೆ. ಆದರೆ, ಮುಶ್ಫಿಕರ್ ರಹೀಮ್ ಅವರು ಕುಟುಂಬದ ಬದ್ಧತೆಯಿಂದಾಗಿ ಈ ನಿರ್ಣಾಯಕ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ತಿಳಿದುಬಂದಿದೆ.
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು (ಬಿಸಿಬಿ) ಮುಶ್ಫಿಕರ್ ರಹೀಮ್ ಅವರ ಜೀವನದ ವಿಶೇಷ ಸಮಯದಲ್ಲಿ ಅವರ ಬೆಂಬಲಕ್ಕೆ ನಿಂತಿದೆ. ಬಿಸಿಬಿ ಕ್ರಿಕೆಟ್ ಕಾರ್ಯಾಚರಣೆ ಸಮಿತಿ ಅಧ್ಯಕ್ಷ ಜಲಾಲ್ ಯೂನಸ್, "ತನ್ನ ಹೆಂಡತಿ ಇನ್ನೂ ಚೇತರಿಸಿಕೊಳ್ಳುತ್ತಿದ್ದಾಳೆ, ಈಗ ತಾನು ತನ್ನ ಹೆಂಡತಿ ಮತ್ತು ಮಗುವಿನ ಬಳಿ ಇರಬೇಕು ಎಂದು ಮುಶ್ಫಿಕರ್ ನಮಗೆ ತಿಳಿಸಿದರು. ನಾವು ಅವರ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿದ್ದೇವೆ. ಆದ್ದರಿಂದ ನಾವು ಅವನನ್ನು ಈ ಪಂದ್ಯದಿಂದ ಹೊರಗುಳಿಯಲು ನಾವು ಅನುಮತಿ ನೀಡಿದ್ದೇವೆ," ಎಂದು ಹೇಳಿದ್ದಾರೆ.
ಮುಶ್ಫಿಕರ್ ರಹೀಮ್ ಅನುಪಸ್ಥಿತಿಯಲ್ಲಿ ಬಾಂಗ್ಲಾದೇಶ ತಂಡಕ್ಕೆ ಉಳಿದಿರುವ ಏಕೈಕ ವಿಕೆಟ್ ಕೀಪರ್ ಎಂದರೆ ಅನಾಮುಲ್ ಹಕ್ ಬಿಜೋಯ್. ಇದೀಗ ಅವರನ್ನು ಮುಂದಿನ ಪಂದ್ಯಕ್ಕೆ ಆಯ್ಕೆ ಮಾಡುವ ಸಾಧ್ಯತೆ ಇದೆ. ಸೂಪರ್ ಫೋರ್ ಹಂತದ ಕೊನೆಯ ಪಂದ್ಯದಲ್ಲಿ ಯುವ ಆಟಗಾರನ ಕೌಶಲ್ಯ ಮತ್ತು ಪ್ರದರ್ಶನವನ್ನು ಪರಿಶೀಲನೆಗೆ ಒಳಪಡಿಸಲಾಗುತ್ತದೆ.
ಮುಶ್ಫಿಕರ್ ರಹೀಮ್ ಈಗಾಗಲೇ ಢಾಕಾ ತಲುಪಿದ್ದು, ತನ್ನ ನವಜಾತ ಮಗು ಮತ್ತು ಹೆಂಡತಿಯೊಂದಿಗೆ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಸೆಪ್ಟೆಂಬರ್ 15ರಂದು ಭಾರತ ವಿರುದ್ಧದ ಪಂದ್ಯದ ನಂತರ, ಬಾಂಗ್ಲಾದೇಶ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ತಯಾರಿ ನಡೆಸಲು ತವರಿಗೆ ಮರಳಲಿದೆ. ಕೆಲವೇ ದಿನಗಳಲ್ಲಿ ವಿಶ್ವಕಪ್ ಪಂದ್ಯಾವಳಿ ನಡೆಯಲಿದ್ದು, ಇದು ಬಾಂಗ್ಲಾದೇಶ ತಂಡಕ್ಕೆ ನಿರ್ಣಾಯಕ ತಯಾರಿಯಾಗಿರಲಿದೆ.