|
ತುಂಬಾ ಬೇಸರವೆನಿಸಿದೆ
'ತಂಡ ಸಮಿತಿ ಭುವನೇಶ್ವರ್ ಅವರನ್ನು ಈಗಲೂ 'ಷರತ್ತು ಅನ್ವಯ'ದ ಬೌಲರ್ ಅಡಿಯಲ್ಲಿ ನೋಡುತ್ತಿರುವುದು ಬೇಸರವುಂಟು ಮಾಡುತ್ತಿದೆ. ಇಂಗ್ಲೆಂಡ್ ಸರಣಿಯಲ್ಲೂ ಭುವಿ ಮಿಸ್ ಆಗಿದ್ದರು. ಈಗ ಅವರು ಲಭ್ಯರಿದ್ದರೂ ತಂಡದಲ್ಲಿ ಸ್ಥಾನ ನೀಡಿಲ್ಲ' ಎಂದು ಇಲ್ಲೊಬ್ಬರು ಬೇಸರ ತೋರಿಕೊಂಡಿದ್ದಾರೆ.
|
ರಾಹುಲ್ ನನ್ನು ಆರಿಸಿದ್ದೀರಿ!
ಅಂತಾರಾಷ್ಟ್ರೀಯ ಸರಣಿಗಳಲ್ಲಿ ಭುವನೇಶ್ವರ್ ಕುಮಾರ್ ಉತ್ತಮ ಪ್ರದರ್ಶನ ನೀಡಿದ್ದು ಗೊತ್ತಿದ್ದರೂ ನೀವು (ಆಯ್ಕೆ ಸಮಿತಿ) ಭುವಿಯನ್ನು ಬದಿಗಿಟ್ಟಿದ್ದೀರಿ. ಕೆಎಲ್ ರಾಹುಲ್ ಎಷ್ಟುಸಾರಿ ವೈಫಲ್ಯ ತೋರಿಕೊಂಡರೂ ಅವರನ್ನೇ ಆರಿಸಿದ್ದೀರಿ. ನಾಳೆ ಸೋತರೂ ಅದಕ್ಕೆ ನೀವೇ ಹೊಣೆಗಾರರು ಎಂಬರ್ಥದಲ್ಲಿ ಧೃವಿನ್ ಶಾ ಟ್ವೀಟ್ ಮಾಡಿದ್ದಾರೆ.
|
ಬ್ಯಾಟಿಂಗ್ಗೆ ಪ್ರಾಶಸ್ತ್ಯ
ಆಸೀಸ್-ಭಾರತ ಸರಣಿಗೆ ಪ್ರಕಟಿಸಲಾಗಿರುವ ಎರಡೂ ತಂಡಗಳನ್ನು ಗಮನಿಸಿದರೆ ಕುತೂಹಲಕಾರಿ ಅಂಶವೊಂದು ಕಾಣಸಿಗುತ್ತದೆ. ಅದೇನೆಂದರೆ ಇಲ್ಲಿ ಬೌಲರ್ಗಳಿಗಿಂತ ಬ್ಯಾಟ್ಸ್ಮನ್ ಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿರುವುದು ಕಾಣಿಸುತ್ತಿದೆ. ಅದರಲ್ಲೂ ವೇಗಿಗಳ ದೃಷ್ಟಿಯಿಂದ ಭಾರತ ತಂಡ ಸಂಪೂರ್ಣ ಎಡವಿದೆ ಎಂದು ಡೇವಿಡ್ ಇಂಗ್ರಮ್ ಪ್ರತಿಕ್ರಿಯಿಸಿದ್ದಾರೆ.
|
ಭಾರತ ಬಹುಶಃ ಸೋಲಬಹುದು
ತಂಡದಲ್ಲಿ ಭುವನೇಶ್ವರ್ ಕುಮಾರ್ ಇಲ್ಲ, ಉಮೇಶ್ ಯಾದವ್ ಇಲ್ಲ, ಕುಲದೀಪ್ ಯಾದವ್ ಇಲ್ಲ. ಈ ಸಂಯೋಜನೆಯಲ್ಲಿ ಭಾರತ ಸೋಲುವ ಸಾಧ್ಯತೆಯಿದೆ. ಆಸ್ಟ್ರೇಲಿಯಾ ಪರಿಸ್ಥಿತಿಗೆ ಅಶ್ವಿನ್ ಬದಲು ಜಡೇಜಾ ಸೂಕ್ತರಿದ್ದರು ಎಂಬುದಾಗಿ ಸಚಿನ್ ಸೂರ್ಯವಂಶಿ ಅವರ ವಿಶ್ಲೇಷಣೆ.
|
ಕುಲದೀಪ್ಗಾಗಿ ಎದುರು ನೋಡುತ್ತಿದ್ದೇನೆ
ಆಸ್ಟ್ರೇಲಿಯಾ ಪರಿಸ್ಥಿತಿಯ ಬಗ್ಗೆ ಹೆಚ್ಚು ಗೊತ್ತಿಲ್ಲ. ಆದರೆ ಆಡುವ 11 ಮಂದಿಯ ತಂಡದಲ್ಲಿ ನಾನು ಕುಲದೀಪ್ ಯಾದವ್ ಇರುವುದನ್ನು ನೋಡಲು ಕಾತರನಾಗಿದ್ದೇನೆ ಎಂದು ಮಿಖೇಲ್ ಟ್ವೀಟ್ ಮಾಡಿದ್ದಾರೆ.