ಮುಂಬೈ, ಆಗಸ್ಟ್ 21: ಭಾರತೀಯ ಸೇನೆಯಲ್ಲಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಸಹಾಯಕ ಸಚಿವ ರಾಮ್ ದಾಸ್ ಅಥವಾಲೆ ಅವರು ಕ್ರಿಕೆಟ್ ಆಟಗಾರರ ಪರ ಬ್ಯಾಟ್ ಬೀಸಿದ್ದು, ಕ್ರಿಕೆಟ್ ನಲ್ಲೂ ಮೀಸಲಾತಿ ಬೇಕು ಎಂದು ಕೇಳಿದ್ದಾರೆ.
ಬ್ರಾಹ್ಮಣ, ವೈಶ್ಯರೂ ಸೇರಿ ಎಲ್ಲ ಜಾತಿಗೂ ಸಿದ್ದು ಮೀಸಲಾತಿ ಭಾಗ್ಯ
ಭಾರತೀಯ ಸೇನೆಯಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಕ್ಕೆ ಮೀಸಲಾತಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದೇನೆ. ಜೊತೆಗೆ ಈ ಬಗ್ಗೆ ಪ್ರಧಾನಿ ಭೇಟಿಯಾಗಿ ಮಾತುಕತೆ ನಡೆಸುವುದಾಗಿ ಕೇಂದ್ರ ಸಚಿವ ರಾಮ್ದಾಸ್ ತಿಳಿಸಿದ್ದರು. ಇದಾದ ಬಳಿಕ ಕ್ರಿಕೆಟ್ ನಲ್ಲಿ ಮೀಸಲಾತಿ ಜಾರಿಗೆ ತರುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ ರಾಮ್ ದಾಸ್ ಕೇಳಿಕೊಂಡಿದ್ದಾರೆ.

ಜುಲೈ ತಿಂಗಳಿನಲ್ಲಿ ಮೊದಲ ಬಾರಿಗೆ ಕ್ರಿಕೆಟ್ ಹಾಗೂ ಕ್ರೀಡೆಯಲ್ಲಿ ಮೀಸಲಾತಿಗೆ ಆಗ್ರಹಿಸಿದ್ದ ರಾಮದಾಸ್ ಅವರು ಮತ್ತೊಮ್ಮೆ ಕ್ರಿಕೆಟ್ ನಲ್ಲಿ ಮೀಸಲಾತಿಗೆ ಆಗ್ರಹಿಸಿದ್ದಾರೆ. ಶೇ 25ರಷ್ಟು ಮೀಸಲಾತಿ ಕೋರಿರುವ ರಾಮದಾಸ್, ಹಾಲಿ ಮೀಸಲಾತಿ ಶೇಕಡಾವಾರು ಪದ್ಧತಿ ವ್ಯವಸ್ಥೆಗೆ ಲೋಪವಾಗದಂತೆ ವಾರ್ಷಿಕ 6 ಲಕ್ಷಕ್ಕೂ ಕಡಿಮೆ ಮೊತ್ತದ ಆದಾಯ ಹೊಂದಿರುವವರಿಗೆ ಹೊಸ ಮೀಸಲಾತಿ ಕಲ್ಪಿಸಬೇಕು ಎಂದಿದ್ದಾರೆ.