ಸರ್ಫರಾಜ್ ಪರ ವೆಂಕಿ ಬ್ಯಾಟಿಂಗ್
ದೆಹಲಿ ವಿರುದ್ಧದ ರಣಜಿ ಪಂದ್ಯದಲ್ಲಿಯೂ ಸರ್ಫರಾಜ್ ಅಬ್ಬರದ ಶತಕ ಸಿಡಿಸಿದ ಬಳಿಕ ಬಿಸಿಸಿಐ ಯುವ ಆಟಗಾರನನ್ನು ಅಭಿನಂದಿಸಿ ಟ್ವೀಟ್ ಮಾಡಿದೆ. ಈ ಟ್ವೀಟ್ಗೆ ವೆಂಕಟೇಶ್ ಪ್ರಸಾದ್ ಕಟು ಶಬ್ದಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.
"ಮೂರು ಅತ್ಯದ್ಭುತ ದೇಶೀಯ ಆವೃತ್ತಿಗಳನ್ನು ಹೊಂದಿದ ಹೊರತಾಗಿಯೂ ಟೆಸ್ಟ್ ತಂಡದಲ್ಲಿ ಅವಕಾಶ ದೊರೆಯದಿರುವುದು ಸರ್ಫರಾಜ್ಗೆ ಅನ್ಯಾಯ ಮಾಡಿರುವುದು ಮಾತ್ರವಲ್ಲ, ಇದು ದೇಶೀಯ ಕ್ರಿಕೆಟ್ಗೆ ಮಾಡಿದ ನಿಂದನೆ. ಇದೊಂಥರಾ ಇಲ್ಲಿನ ಪ್ರದರ್ಶನ ಗಣನೆಗೆ ಇಲ್ಲದಂತೆ. ಆತ ಅಷ್ಟು ರನ್ಗಳನ್ನು ಗಳಿಸಲು ಸಮರ್ಥರಾಗಿದ್ದಾರೆ. ದೇಹದ ತೂಕವನ್ನು ಗಣನೆಗೆ ತೆಗೆದುಕೊಂಡರೆ ಹೆಚ್ಚು ತೂಕದ ಅನೇಕರಿದ್ದಾರೆ" ಎಂದು ಕನ್ನಡಿಗ ವೆಂಕಟೇಶ್ ಪ್ರಸಾದ್ ಕಟು ಶಬ್ದಗಳಲ್ಲಿ ಟ್ವೀಟ್ ಮಾಡಿದ್ದಾರೆ.

ಬೇಸರ ಹೊರಹಾಕಿರುವ ಸರ್ಫರಾಜ್
ಇನ್ನು ಆಸ್ಟ್ರೇಲಿಯಾ ವಿರುದ್ಧದ ಮೊದಲ ಎರಡು ಟೆಸ್ಟ್ ಪಂದ್ಯಗಳಿಗೆ ಆಯ್ಕೆಯಾಗದ ಬಗ್ಗೆ ಸರ್ಫರಾಜ್ ಖಾನ್ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡುವ ಸಂದರ್ಭದಲ್ಲಿ ಬೇಸರ ವ್ಯಕ್ತಪಡಿಸಿದ್ದರು. ತಾನು ರೋಬೋಟ್ ಅಲ್ಲ. ಯಾವುದೇ ಇತರ ಸಾಮಾನ್ಯ ಮನುಷ್ಯರಿಗೆ ಆಗುವಂತೆಯೇ ಬೇಸರದ ಭಾವನೆಗಳುಂಟಾಗುತ್ತದೆ ಎಂದಿದ್ದರು. ಸರ್ಫರಾಜ್ ಈ ಬಾರಿಯ ರಣಜಿ ಆವೃತ್ತಿಯಲ್ಲಿ ಈಗಾಗಲೇ ಮೂರನೇ ಶತಕ ಸಿಡಿಸಿದ್ದಾರೆ.

ಪೃಥ್ವಿ ಶಾಗೆ ಟಿ20 ತಂಡದಲ್ಲಿ ಸ್ಥಾನ
ಇನ್ನು ದೇಶೀಯ ಕ್ರಿಕೆಟ್ನಲ್ಲಿ ಅಬ್ಬರದ ಪ್ರದರ್ಶನ ನೀಡುತ್ತಿರುವ ಮತ್ತೋರ್ವ ಆಟಗಾರ ಪೃಥ್ವಿ ಶಾ. ಈಗಾಗಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದರೂ ಶಾ ಬಳಿಕ ತಂಡದಿಂದ ಹೊರಬಿದ್ದಿದ್ದರು. ಇದೀಗ ದೇಶೀಯ ಕ್ರಿಕೆಟ್ನಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ಪೃಥ್ವಿ ಶಾಗೆ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಅವಕಾಶ ದೊರೆತಿದೆ. ಈ ಮೂಲಕ ಮೂರು ವರ್ಷಗಳ ಬಳಿಕ ಪೃಥ್ವಿ ಶಾ ಟಿಂ್ ಇಂಡಿಯಾಗೆ ಕಮ್ಬ್ಯಾಕ್ ಮಾಡುವ ಅವಕಾಶ ದೊರೆತಿದೆ.


Click it and Unblock the Notifications












