For Quick Alerts
ALLOW NOTIFICATIONS  
For Daily Alerts
 

ಹಾರ್ದಿಕ್, ರಾಹುಲ್‌ಗೆ ಸ್ಥಾನವಿಲ್ಲ?; ಟಿ20 ವಿಶ್ವಕಪ್‌ಗಾಗಿ ಭಾರತ ತಂಡಕ್ಕೆ ದೊಡ್ಡ ಸಂದೇಶ ನೀಡಿದ ವೆಂಕಟೇಶ್ ಪ್ರಸಾದ್

2024ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಾವಳಿಗೆ ಮೇ 26ರಂದು ತೆರೆಬೀಳಲಿದ್ದು, ಆ ಬಳಿಕ 2024ರ ಐಸಿಸಿ ಟಿ20 ವಿಶ್ವಕಪ್ ಪಂದ್ಯವಾಳಿಯು ಜೂನ್ 2ರಂದು ಆರಂಭವಾಗಲಿದೆ.

ಆದ್ದರಿಂದ, ಏಪ್ರಿಲ್ 30 ಅಥವಾ ಮೇ 1ರಂದು ಭಾರತೀಯ ಕ್ರಿಕೆಟ್ ತಂಡದ ಆಯ್ಕೆ ನಡೆಯಲಿದ್ದು, ಅಭಿಮಾನಿಗಳು ಟೀಮ್ ಇಂಡಿಯಾ ಆಯ್ಕೆಯ ಬಗ್ಗೆ ಕುತೂಹಲದಿಂದ ಕಾಯುತ್ತಿದ್ದಾರೆ.

Venkatesh Prasad Gave A Big Message to Indian Team For the T20 World Cup No place for Hardik Rahul

ಇದೇ ವೇಳೆ ಯುಎಸ್‌ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ನಡೆಯುವ 2024ರ ಐಸಿಸಿ ಟಿ20 ವಿಶ್ವಕಪ್‌ಗಾಗಿ ಭಾರತ ತಂಡದ ಆಯ್ಕೆಯ ಕುರಿತು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ದೊಡ್ಡ ಸಂದೇಶ ರವಾನಿಸಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) 2024ರ ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಅಂತಿಮಗೊಳಿಸುವ ಕೇವಲ 20 ದಿನಗಳು ಮಾತ್ರ ಬಾಕಿ ಉಳಿದಿವೆ.

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಭಾರತ ತಂಡದಲ್ಲಿನ ಹಲವಾರು ಆಟಗಾರರ ಬಗ್ಗೆ ಚರ್ಚೆ ನಡೆಯುತ್ತಿದೆ. ಅಲ್ಲದೆ, ವಿಕೆಟ್-ಕೀಪರ್‌ನ ಸ್ಥಾನವೂ ಖಾಲಿಯಾಗಿ ಉಳಿದಿದ್ದು, ಹಲವು ಆಟಗಾರರು ಪ್ರಮುಖ ಸ್ಥಾನಕ್ಕಾಗಿ ರೇಸ್‌ನಲ್ಲಿದ್ದಾರೆ.

Venkatesh Prasad Gave A Big Message to Indian Team For the T20 World Cup No place for Hardik Rahul

ಇನ್ನು ಭಾರತದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಅವರು ಭಾರತ ತಂಡದಲ್ಲಿ ನೋಡಲು ಬಯಸುವ ಬ್ಯಾಟಿಂಗ್ ವಿಭಾಗದ ಬಗ್ಗೆ ಗಟ್ಟಿಯಾದ ಕಲ್ಪನೆಯನ್ನು ಹೊರಹಾಕಿದ್ದಾರೆ.

ವೆಂಕಟೇಶ್ ಪ್ರಸಾದ್ ಅವರು ತಮ್ಮ ಎಕ್ಸ್ (ಟ್ವಿಟ್ಟರ್) ಖಾತೆಯ ಪೋಸ್ಟ್‌ನಲ್ಲಿ, ಶಿವಂ ದುಬೆ, ರಿಂಕು ಸಿಂಗ್ ಮತ್ತು ಸೂರ್ಯಕುಮಾರ್ ಯಾದವ್ ಅವರಂತಹ ಕಡಿಮೆ-ಅನುಭವಿ ಆಟಗಾರರನ್ನು ಸೇರಿಸಿಕೊಳ್ಳುವುದನ್ನು ಪ್ರತಿಪಾದಿಸಿದ್ದಾರೆ.

ಅಲ್ಲದೆ ತಂಡದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಪ್ರಾಮುಖ್ಯತೆಯನ್ನು ಒತ್ತಿಹೇಳಿದರು. ಆದರೆ, ವಿಕೆಟ್-ಕೀಪರ್ ಸ್ಥಾನದ ಬಗ್ಗೆ ವೆಂಕಟೇಶ್ ಪ್ರಸಾದ್‌ ಹೆಚ್ಚು ಸ್ಪಷ್ಟವಾಗಿಲ್ಲ ಎನ್ನುವುದನ್ನು ಕಾಣಬಹುದು.

"ಸ್ಪಿನ್ನರ್‌ಗಳ ವಿರುದ್ಧ ಶಿವಂ ದುಬೆ ಅವರ ಅದ್ಭುತ ಸಾಮರ್ಥ್ಯಕ್ಕಾಗಿ, ಸೂರ್ಯಕುಮಾರ್ ಅತ್ಯುತ್ತಮ ಟಿ20 ಅಂತಾರಾಷ್ಟ್ರೀಯ ಬ್ಯಾಟರ್ ಮತ್ತು ರಿಂಕು ಸಿಂಗ್ ಅವರ ಅಸಾಧಾರಣ ಫಿನಿಶಿಂಗ್ ಸಾಮರ್ಥ್ಯಕ್ಕಾಗಿ ಭಾರತ ತಂಡವು ಟಿ20 ವಿಶ್ವಕಪ್‌ನ ಆಡುವ 11ರ ಬಳಗದಲ್ಲಿ ಈ ಮೂವರನ್ನು ಹೊಂದಲು ಒಂದು ಮಾರ್ಗವನ್ನು ಕಂಡುಕೊಂಡರೆ ಉತ್ತಮವಾಗಿರುತ್ತದೆ".

"ಉಳಿದಂತೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಜೊತೆಗೆ, ಕೇವಲ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್‌ಗೆ ಒಂದು ಸ್ಥಾನವನ್ನು ನೀಡುತ್ತದೆ. ಇದು ಹೇಗೆ ಹೊರಹೊಮ್ಮುತ್ತದೆ ಎಂಬುದನ್ನು ನೋಡಲು ಆಸಕ್ತಿದಾಯಕವಾಗಿದೆ," ಎಂದು ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್‌ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಬರೆದುಕೊಂಡಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರ ಹೆಸರನ್ನು ವೆಂಕಟೇಶ್ ಪ್ರಸಾದ್‌ ಉಲ್ಲೇಖಿಸದಿರುವುದು ಬಹುದೊಡ್ಡ ಕುತೂಹಲಕಾರಿ ವಿಷಯವಾಗಿದೆ.

ಸದ್ಯ ನಡೆಯುತ್ತಿರುವ ಐಪಿಎಲ್ 2024ರಲ್ಲಿ ಈ ಮೂವರು ಅನುಭವಿಗಳು ಬ್ಯಾಟ್‌ನೊಂದಿಗೆ ಪ್ರಭಾವ ಬೀರಲು ಸಾಕಷ್ಟು ಯಶಸ್ವಿಯಾಗಿಲ್ಲ. ಬ್ಯಾಟ್‌ನೊಂದಿಗೆ ಅವರ ಕಳಪೆ ಫಾರ್ಮ್ ವೆಂಕಟೇಶ್ ಪ್ರಸಾದ್‌ಗೆ ನಂಬಿಕೆಯ ಕೊರತೆಗೆ ಕಾರಣವಾಗಿದೆ ಎನ್ನಬಹುದು.

ಶಿವಂ ದುಬೆ, ಸೂರ್ಯಕುಮಾರ್ ಯಾದವ್ ಮತ್ತು ರಿಂಕು ಸಿಂಗ್ ವಿಷಯಕ್ಕೆ ಬಂದರೆ, ಈ ಮೂವರ ಪರಿಣತಿಯು ಟಿ20 ಕ್ರಿಕೆಟ್‌ನಲ್ಲಿ ಅತ್ಯುತ್ತಮವಾಗಿದೆ ಎಂದು ವೆಂಕಟೇಶ್ ಪ್ರಸಾದ್‌ ಹೇಳಿದ್ದಾರೆ.

ಕ್ರಿಕೆಟ್‌ನ ಟಿ20 ಸ್ವರೂಪದಲ್ಲಿ ಈ ಮೂವರು ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಆಯ್ಕೆಗಾರರನ್ನು ಮತ್ತು ಕ್ರಿಕೆಟ್ ತಜ್ಞರನ್ನು ಆಕರ್ಷಿಸಿದ್ದಾರೆ. ಅವರ ಫಾರ್ಮ್ ಮತ್ತು ಸಾಮರ್ಥ್ಯವು ಈ ವರ್ಷದ ಟಿ20 ವಿಶ್ವಕಪ್‌ನಲ್ಲಿ ಭಾರತದ ಟ್ರೋಫಿ ಗೆಲ್ಲುವ ಭರವಸೆಗೆ ಪ್ರಮುಖವಾಗಿದೆ.

Story first published: Wednesday, April 10, 2024, 9:40 [IST]
Other articles published on Apr 10, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+