ಇಂದೋರ್, ಜನವರಿ 15: ಚೊಚ್ಚಲ ರಣಜಿ ಗೆದ್ದ ಸಂಭ್ರಮದಲ್ಲಿರುವ ಗುಜರಾತ್ ತಂಡದ ಆಟಗಾರ ಆರ್ ಪಿ ಸಿಂಗ್ ಅವರು ಪಂದ್ಯದ ವೇಳೆ ಸೆಲ್ಫಿ ಫೋಟೋ ಕೇಳಿದ ಅಭಿಮಾನಿಯೊಬ್ಬರ ಮೊಬೈಲ್ ಫೋನ್ ಕಿತ್ತೆಸೆದ ಪ್ರಸಂಗದ ವಿಡಿಯೋ ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿದೆ. ಆರ್ ಪಿ ಸಿಂಗ್ ಅವರ ವರ್ತನೆಗೆ ಎಲ್ಲೆಡೆಯಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ಇಂದೋರಿನ ಹೋಲ್ಕರ್ ಕ್ರೀಡಾಂಗಣದಲ್ಲಿ ನಡೆದ ರಣಜಿ ಟ್ರೋಫಿ ಅಂತಿಮ ಹಣಾಹಣಿಯಲ್ಲಿ ಬಲಿಷ್ಠ ತಂಡ ಮುಂಬೈ ವಿರುದ್ಧ ಗುಜರಾತ್ ತಂಡದ ಪ್ರದರ್ಶನದ ಬಗ್ಗೆ ಅಪಾರ ಮೆಚ್ಚುಗೆ ಕೇಳಿ ಬಂದಿದೆ. ಆದರೆ, ಗುಜರಾತ್ ಪರ ಆಡುತ್ತಿರುವ ವೇಗಿ ರುದ್ರ ಪ್ರತಾಪ್ ಸಿಂಗ್ ಉಗ್ರಪ್ರತಾಪಕ್ಕೆ ವ್ಯಾಪಕ ಟೀಕೆಗಳು ಬಂದಿವೆ.[ಶೇಷ ಭಾರತ ತಂಡ ಪ್ರಕಟ, ಪೂಜಾರಾ ನಾಯಕ]
