ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಮರ್ಥ್, ಪಡಿಕ್ಕಲ್ ಆಕರ್ಷಕ ಶತಕ: ಕೇರಳಕ್ಕೆ ಸೋಲುಣಿಸಿದ ಕರ್ನಾಟಕ

Vijay Hazare Trophy 2020-21: Karnataka beat Kerala by 80 runs

ನವದೆಹಲಿ: ದೆಹಲಿಯ ಪಾಲಂ ಎ ಸ್ಟೇಡಿಯಂನಲ್ಲಿ ಸೋಮವಾರ (ಮಾರ್ಚ್ 8) ನಡೆದ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಕೇರಳ ವಿರುದ್ಧ ಕರ್ನಾಟಕ ತಂಡ ಭರ್ಜರಿ 80 ರನ್‌ಗಳ ಗೆಲುವು ಕಂಡಿದೆ. ದೇವದತ್ ಪಡಿಕ್ಕಲ್, ನಾಯಕ ಸಮರ್ಥ್ ಆರ್‌ ಶತಕ, ರೋನಿತ್ ಮೋರೆ ಮಾರಕ ಬೌಲಿಂಗ್‌ನೊಂದಿಗೆ ಕರ್ನಾಟಕ ತಂಡ ಟೂರ್ನಿಯಲ್ಲಿ 4ನೇ ಗೆಲುವು ದಾಖಲಿಸಿದೆ.

 ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ! ವಿಜಯ್ ಹಜಾರೆ: ಪಡಿಕ್ಕಲ್ ಬ್ಯಾಟಿಂಗ್ ಅಬ್ಬರ, ಮತ್ತೊಂದು ದಾಖಲೆ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಕರ್ನಾಟಕ, ನಾಯಕ ರವಿಕುಮಾರ್ ಸಮರ್ಥ್ 192 (158 ಎಸೆತ), ದೇವದತ್ ಪಡಿಕ್ಕಲ್ 101, ಮನೀಶ್ ಪಾಂಡೆ ಅಜೇಯ 34, ಕೆ ಸಿದ್ಧಾರ್ಥ್ 4 ರನ್‌ ಸೇರ್ಪಡೆಯೊಂದಿಗೆ 50 ಓವರ್‌ಗೆ 3 ವಿಕೆಟ್ ಕಳೆದು 338 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ಕೇರಳದಿಂದ, ವಿಷ್ಣು ವಿನೋದ್ 28, ವತ್ಸಲ್ ಗೋವಿಂದ್ 92, ಸಚಿನ್ ಬೇಬಿ 27, ಮೊಹಮ್ಮದ್ ಅಜರುದ್ದೀನ್ 52, ಜಲಜ್ ಸಕ್ಸೇನ 24, ಎನ್‌ಪಿ ಬಸಿಲ್ 10 ರನ್‌ ಕೊಡುಗೆಯಿತ್ತರು. ಕೇರಳ 43.4 ಓವರ್‌ಗೆ 10 ವಿಕೆಟ್ ಕಳೆದು 258 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗಸಂಜನಾ ಗಣೇಶನ್ ವರಿಸಲಿರುವ ಟೀಮ್ ಇಂಡಿಯಾ ವೇಗಿ ಬೂಮ್ರಾ: ಮದುವೆ ದಿನಾಂಕವೂ ಬಹಿರಂಗ

ಕರ್ನಾಟಕದ ಇನ್ನಿಂಗ್ಸ್‌ನಲ್ಲಿ ಕೇರಳದ ಎನ್‌ಪಿ ಬಸಿಲ್ ಮೂರೂ ವಿಕೆಟ್ ಪಡೆದಿದ್ದು ವಿಶೇಷವೆನಿಸಿತು. ಕೇರಳ ಇನ್ನಿಂಗ್ಸ್‌ನಲ್ಲಿ ಕರ್ನಾಟಕದ ರೋನಿತ್ ಮೋರೆ 9 ಓವರ್‌ ಎಸೆದು 36 ರನ್‌ ನೀಡಿ 5 ವಿಕೆಟ್‌ ಪಡೆದು ಮೈಲಿಗಲ್ಲು ಸ್ಥಾಪಿಸಿದರು. ಇನ್ನು ಪ್ರಸಿದ್ಧ್ ಕೃಷ್ಣ 1, ಶ್ರೇಯಸ್ ಗೋಪಾಲ್ 2, ಕೃಷ್ಣಪ್ಪ ಗೌತಮ್ 2 ವಿಕೆಟ್‌ನೊಂದಿಗೆ ಮಿನುಗಿದರು. ರವಿಕುಮಾರ್ ಸಮರ್ಥ್ ಪಂದ್ಯಶ್ರೇಷ್ಠರೆನಿಸಿದರು.

Story first published: Monday, March 8, 2021, 18:20 [IST]
Other articles published on Mar 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X