
ಜೋಡಿ ಹಕ್ಕಿ
ವಿರಾಟ್-ಮತ್ತು ಅನುಷ್ಕಾ ಪ್ರಣಯದ ಹಕ್ಕಿಗಳಾಗಿ ವಿಹರಿಹಿಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದ್ದ ಸಂಗತಿಯೇ ಆಗಿತ್ತು. 2015ರ ಏಕದಿನ ವಿಶ್ವ ಕಪ್ ವೇಳೆ ಜತೆಯಾಗಿ ಕಾಣಿಸಿಕೊಂಡಿದ್ದು, ಭಾರತ ಸೋತು ಹಿಂದಿರುಗಿದ್ದು ಎಲ್ಲ ಘಟನೆಗಳ ನಂತರ ಸೋಲಿಗೆ ಅನುಷ್ಕಾನೇ ಕಾರಣ ಎಂದು ಜನರು ಮಾತನಾಡಿಕೊಂಡಿದ್ದರು.

ಬ್ರೇಕ್ ಅಪ್ ಗೆ ಕಾರಣವೇನಾಗಿತ್ತು?
ಅನುಷ್ಕಾ ಸಿನಿಮಾದಲ್ಲಿ ಬ್ಯುಸಿಯಾದರೆ ಕೊಹ್ಲಿಗೆ ಒಂದರ ಹಿಂದೆ ಒಂದು ಕ್ರಿಕೆಟ್ ಸರಣಿಗಳು ಎದುರಾದವು. ಚಿಕ್ಕ ಪುಟ್ಟ ಭಿನ್ನಾಭಿಪ್ರಾಯ ಮತ್ತು ಮಾತುಕತೆ ಕೊರತೆ ಇಬ್ಬರ ನಡುವೆ ಕಂದಕ ಸೃಷ್ಟಿಸಿತ್ತು. ಇದಕ್ಕೆ ಮಾಧ್ಯಮದವರು ವಿಶೇಷ ಒತ್ತು ನೀಡಿದ್ದು ಬ್ರೇಕ್ ಅಪ್ ಹಂತ ತಲುಪಿತು.

ಭಗ್ನ ಪ್ರೇಮಿ ಕೈಗೆ ಬ್ಯಾಟ್ ಕೊಡಬಾರದು
ಟಿ-20 ವಿಶ್ವಕಪ್ ನಲ್ಲಿ ವಿರಾಟ್ ಆಡಿದ ಇನಿಂಗ್ಸ್ ಗಳನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ "ಭಗ್ನ ಪ್ರೇಮಿ ಕೈಗೆ ಬ್ಯಾಟ್ ಕೊಡಬಾರದು" ಎಂದು ಕಮೆಂಟ್ ಮಾಡಿದ್ದರು.

ಪ್ಯಾಚ್ ಅಪ್ ಮಾಡಿದ್ದು ಯಾರು?
ಪ್ರೇಮಿಗಳನ್ನು ಒಂದು ಮಾಡಿದ್ದು ಯಾರು ಎಂಬುದಕ್ಕೂ ಉತ್ತರ ಸಿಕ್ಕಿತ್ತು. ಪಾಕ್ ವಿರುದ್ಧದ ವಿಶ್ವ ಕಪ್ ಟಿ-20 ಪ೦ದ್ಯದಲ್ಲಿ ಅಮೋಘ ನಿವ೯ಹಣೆ ನೀಡಿದ್ದಕ್ಕೆ ಅಭಿನ೦ದನೆ ಸಲ್ಲಿಸುವ ಸಲುವಾಗಿ ಅನುಷ್ಕಾ, ಕೊಹ್ಲಿಗೆ ದೂರವಾಣಿ ಕರೆ ಮಾಡಿ ಮಾತನಾಡಿದ್ದುರು. ಇನ್ನೊಂದು ಕಡೆ ಅನುಷ್ಕಾ ಸಹೋದರ ಕಣೀ೯ಶ್ ಶಮ೯ ಮೂಲಕವೂ ಕೊಹ್ಲಿ ಜತೆ ಮಾತನಾಡಿದ್ದರು.

ಅನ್ ಫ್ರೆಂಡ್ ಮಾಡಿಕೊಂಡಿದ್ದರು
ಸಾಮಾಜಿಕ ತಾಣಗಳಲ್ಲಿ ಕೊಹ್ಲಿ ಮತ್ತು ಅನುಷ್ಕಾ ಪರಸ್ಪರ ಅನ್ ಫ್ರೆಂಡ್ ಮಾಡಿಕೊಂಡಿದ್ದರು. ಅಲ್ಲದೇ ಇಬ್ಬರ ನಡುವೆ ಬ್ರೇಕ್ ಅಪ್ ಆಗಿದ್ದು ದೊಡ್ಡ ಕಂದಕ ಸೃಷ್ಟಿಯಾಗಿದೆ ಎಂಬ ಮಾತು ಕೇಳಿ ಬಂದಿತ್ತು.

ಸೀಕ್ರೆಟ್ ಡಿನ್ನರ್
ಏಪ್ರಿಲ್ ಮೊದಲ ವಾರದದಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಹಾಕ್ಸನ್ ಕ್ಲಬ್ ನಲ್ಲಿ ಕಷ್ಟ-ಸುಖಗಳನ್ನು ಮಾತನಾಡುತ್ತ ಕೊಹ್ಲಿ-ಅನುಷ್ಕಾ ಒಟ್ಟಿಗೆ ಡಿನ್ನರ್ ಮಾಡಿದ್ದರು. ಇಲ್ಲಿಗೆ ಪ್ರಣಯ ಪಕ್ಷಿಗಳು ಮತ್ತೆ ಒಂದಾಗುತ್ತಿವೆ ಎಂಬ ಸೂಚನೆಯೂ ಸಿಕ್ಕಿತ್ತು.

ಎಂದಿಗೂ ಅನುಷ್ಕಾ ಬೈಯದ ಕೊಹ್ಲಿ
ಇಷ್ಟೆಲ್ಲಾ ಗಾಸಿಪ್ ಮತ್ತು ಗೊಂದಲಗಳು ಉಂಟಾಗಿದ್ದರೂ ವಿರಾಟ್ ಎಂದಿಗೂ ಅನುಷ್ಕಾ ಅವರನ್ನು ಬೈದಿರಲಿಲ್ಲ. ಸದಾ ಅವರ ಪರವಾಗಿಯೇ ಮಾತನಾಡುತ್ತ ಬಂದಿದ್ದರು.

ಅಭಿಮಾನಿಗಳಿಗೆ ಇನ್ನೇನು ಬೇಕು?
ಹೌದು, ವಿರಾಟ್ ಮತ್ತು ಅನುಷ್ಕಾ ಅಭಿಮಾನಿಗಳಿಗೆ ಇನ್ನೇನು ಬೇಕು. ಜೋಡಿ ಒಂದಾಗಿ ಮತ್ತೆ ವಿಹರಿಸಿದರೆ ಅವರಿಗಿಂತ ಅವರ ಅಭಿಮಾನಿಗಳೇ ಹೆಚ್ಚಿನ ಸಂತಸ ಪಡುತ್ತಾರೆ.


Click it and Unblock the Notifications











