
ಟೀಮ್ ಇಂಡಿಯಾ ನಾಯಿ ವಿರಾಟ್ ಕೊಹ್ಲಿ ಟಿ20 ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನು ಗುರುವಾರ ಪ್ರಕಟಿಸಿದ್ದಾರೆ. ಮುಂದಿನ ಟಿ20 ವಿಶ್ವಕಪ್ ಅಂತ್ಯವಾದ ಬಳಿಕ ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನ ಟಿ20 ನಾಯಕತ್ವವನ್ನು ತ್ಯಜಿಸುವುದಾಗಿ ತಿಳಿಸಿದ್ದಾರೆ. ವಿರಾಟ್ ಕೊಹ್ಲಿ ತೆಗೆದುಕೊಂಡ ಈ ನಿರ್ಧಾರದ ಬಗ್ಗೆ ಸಾಕಷ್ಟು ಮಾಜಿ ಕ್ರಿಕೆಟಿಗರು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಬ್ರಾಡ್ ಹಾಜ್ ಕೂಡ ಈ ಬಗ್ಗೆ ತಮ್ಮ ಪ್ರತಿಕ್ರಿಯೆ ನೀಡಿದ್ದು ವಿರಾಟ್ ಕೊಹ್ಲಿ ತೆಗೆದುಕೊಂಡಿರುವ ನಿರ್ಧಾರ ಸೂಕ್ತವಾಗಿದೆ ಎಂದಿದ್ದಾರೆ.
ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವಕ್ಕೆ ವಿದಾಯ ಹೇಳುವ ವಿರಾಟ್ ಕೊಹ್ಲಿ ನಿರ್ಧಾರ ಸೂಕ್ತವಾಗಿದೆ ಎಂದಿರುವ ಬ್ರಾಡ್ ಹಾಜ್ ಮೂರು ಮಾದರಿಯ ನಾಯಕನಾಗಿ ವಿರಾಟ್ ಕೊಹ್ಲಿ ಮೇಲೆ ಸಾಕಷ್ಟು ಒತ್ತಡ ಇದೆ ಎಂಬ ಮಾತನ್ನು ಕೂಡ ಅವರು ಹೇಳಿದ್ದಾರೆ. ಟಿ20 ನಾಯಕತ್ವವನ್ನು ತೊರೆಯುವ ಕಾರಣದಿಂದಾಗಿ ಅದು ಅವರು ಬ್ಯಾಟಿಂಗ್ನ ಮೇಲೆ ಖಂಡಿತವಾಗಿಯೂ ಸಕಾರಾತ್ಮಕವಾಗಿ ಪರಿಣಾಮ ಬೀರಲಿದೆ ಎಂದಿದ್ದಾರೆ ಬ್ರಾಡ್ ಹಾಜ್.
ಬುಧವಾರ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಟಿ20 ವಿಶ್ವಕಪ್ನ ಬಳಿಕ ಟಿ20 ನಾಯಕತ್ವ ತೊರೆಯುವ ನಿರ್ಧಾರವನ್ನು ಅಧಿಕೃತವಾಗಿ ಪ್ರಕಟಿಸಿದರು. ಈ ಸಂದರ್ಭದಲ್ಲಿ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿ ಟ್ರೋಫಿಯನ್ನು ಎತ್ತಿ ಹಿಡಿಯಲು ಮತ್ತೊಂದು ಅವಕಾಶ ದೊರೆತಿರುವುದು ಅತ್ಯಂತ ಸೂಕ್ತ ಎಂದಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಬ್ರಾಡ್ ಹಾಜ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
"ಟಿ20 ನಾಯಕತ್ವ ತೊರೆಯುವ ನಿರ್ಧಾರವನ್ನು ವಿರಾಟ್ ಕೊಹ್ಲಿ ತೆಗೆದುಕೊಂಡಿರುವುದು ಸೂಕ್ತವಾಗಿದೆ. ಮೂರು ಮಾದರಿಯಲ್ಲುಯೂ ನಾಯಕನಾಗಿರುವುದರಿಮದಾಗಿ ಆತನ ಮೇಲೆ ಸಾಕಷ್ಟು ಒತ್ತಡಗಳಿವೆ. ಇಂಥಾ ಸಂದರ್ಭದಲ್ಲಿ ಟಿ20 ವಿಶ್ವಕಪ್ನಲ್ಲಿ ನಾಯಕನಾಗಿ ಉತ್ತಮ ಪ್ರದರ್ಶನ ನೀಡಲು ಸಾಧ್ತವಾಗದಿದ್ದರೆ ಆತ ಅಪಹಾಸ್ಯಕ್ಕೂ ಗುರಿಯಾಗಬೇಕಿತ್ತು. ಈಗ ಆ ಒತ್ತಡವನ್ನು ವಿರಾಟ್ ಕಳೆದುಕೊಂಡಿದ್ದಾರೆ. ಟಿ20 ವಿಶ್ವಕಪ್ನಲ್ಲಿ ನಾಯಕನಾಗಿ ಕಣಕ್ಕಿಳಿಯುವ ಮೂಲಕ ಕಪ್ ಗೆಲ್ಲಲು ಮತ್ತೊಂದು ಅವಕಾಶ ಆತನಿಗೆ ದೊರೆತಿರುವುದು ಉತ್ತಮ ಸಂಗತಿ" ಎಂದು ಬ್ರಾಡ್ ಹಾಜ್ ವಿವರಿಸಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಬ್ರಾಡ್ ಹಾಜ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಅಂತಿಮ ಪಂದ್ಯವನ್ನು ಕೋವಿಡ್ ಭೀತಿಯಿಂದ ಆಡದಿರಲು ನಿರ್ಧರಿಸಿ ವಾಪಾಸಾಗಿದ್ದ ವಿಚಾರವಾಗಿಯೂ ಪ್ರತಿಕ್ರಿಯೆ ನೀಡಿದ್ದಾರೆ. ಈ ನಿರ್ಧಾರಕ್ಕೆ ಭಾರತೀಯ ಕ್ರಿಕೆಟ್ ತಂಡ ಹಾಗೂ ನಾಯಕ ವಿರಾಟ್ ಕೊಹ್ಲಿ ಸಾಕಷ್ಟು ಟೀಕೆಯನ್ನು ಎದುರಿಸಿತ್ತು. ಐಪಿಎಲ್ನ ಕಾರಣಕ್ಕಾಗಿ ಭಾರತ ಕ್ರಿಕೆಟ್ ತಂಡ ಈ ನಿರ್ಧಾರವನ್ನು ಮಾಡಿತ್ತು ಎಂದು ಟೀಕಿಸಲಾಯಿತು. ಆದರೆ ಇದನ್ನು ಬ್ರಾಡ್ ಹಾಜ್ ತಳ್ಳಿ ಹಾಕಿದ್ದಾರೆ. "ವಿರಾಟ್ ಕೊಹ್ಲಿಯ ಈ ನಿರ್ಧಾರ ಟೆಸ್ಟ್ ಕ್ರಿಕೆಟ್ನ ಮೇಲೆ ಗಮನ ಕೇಂದ್ರೀಕರಿಸಲು ಹಾಗೂ ಭಾರತ ಟೆಸ್ಟ್ ಕ್ರಿಕೆಟ್ನಲ್ಲಿ ಪ್ರಾಬಲ್ಯವನ್ನು ಸಾಧಿಸಲು ಬಯಸುವುದನ್ನು ಈ ನಿರ್ಧಾರ ವ್ಯಕ್ತಪಡಿಸುತ್ತದೆ" ಎಂದು ಬ್ರಾಡ್ ಹಾಜ್ ಹೇಳಿದ್ದಾರೆ.
".ಕಳೆದ ಐದು ಟೆಸ್ಟ್ ಸರಣಿಗಳಲ್ಲಿ ತಾನು ಹೆಣಗಾಡಿರುವುದನ್ನು ವಿರಾಟ್ ಕೊಹ್ಲಿ ಅರ್ಥ ಮಾಡಿಕೊಂಡಿದ್ದರು. ಹಿಂದಿನ ಐದು ಸರಣಿಗಳಲ್ಲಿ ವಿರಾಟ್ ಉತ್ತಮವಾಗಿ ಆಡಿರಲಿಲ್ಲ. ಇದೇ ಸಂದರ್ಭದಲ್ಲಿ ಜನರು ಐದನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲು ನಿರ್ಧರಿಸಿದ ಕಾರಣಕ್ಕೆ ಭಾರತ ತಂಡಕ್ಕೆ ಟೆಸ್ಟ್ ಕ್ರಿಕೆಟ್ನಲ್ಲಿ ಉತ್ಸಾಹವಿಲ್ಲ ಎಂದು ಟೀಕಿಸಿದ್ದರು. ಆದರೆ ಭಾರತದ ತಮಡದ ಈ ನಿರ್ಧಾರ ಟೆಸ್ಟ್ ಕ್ರಿಕೆಟ್ನ ಮೇಲೆ ಕಾಳಜಿಯನ್ನು ಹೊಂದಿದ್ದಾರೆ ಎಂಬುದನ್ನು ವ್ಯಕ್ತಪಡಿಸುತ್ತದೆ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಭಾರತ ಪ್ರಾಬಲ್ಯವನ್ನು ಸಾಧಿಸಲು ಬಯಸುವುದನ್ನು ತೋರಿಸುತ್ತದೆ" ಎಂದು ಬ್ರಾಡ್ ಹಾಜ್ ವಿವರಿಸಿದ್ದಾರೆ.