ಶನಿವಾರ, ಜೂನ್ 29ರಂದು ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ನಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ 2024ರ ಐಸಿಸಿ ಟಿ20 ವಿಶ್ವಕಪ್ ಟ್ರೋಫಿಯನ್ನು ಗೆದ್ದ ನಂತರ ಆಟಗಾರರ ತಮ್ಮ ರೋಮಾಂಚಕ ಭಾವನೆಗಳನ್ನು ಹೊರಹಾಕಿದರು.
ಸಂತೋಷ, ಕಣ್ಣೀರು ಮತ್ತು ಸಂಭ್ರಮದ ಮೂಲಕ ಟೀಮ್ ಇಂಡಿಯಾ ಆಟಗಾರರು ತಮ್ಮ ಎರಡನೇ ಟಿ20 ವಿಶ್ವಕಪ್ ಗೆಲುವನ್ನು ಆಚರಿಸಿದರು. 11 ವರ್ಷಗಳ ಕಾಯುವಿಕೆಯ ನಂತರ ತಂಡವು ಐಸಿಸಿ ಟ್ರೋಫಿಯನ್ನು ಎತ್ತಿಹಿಡಿದ್ದರಿಂದ ಸಂಭ್ರಮಾಚರಣೆ ಮೈದಾನದ ತುಂಬೆಲ್ಲಾ ಹರಡಿತ್ತು.

ಇದೇ ವೇಳೆ ಟೀಮ್ ಇಂಡಿಯಾದ ದ್ರೋಣಾಚಾರ್ಯ ರಾಹುಲ್ ದ್ರಾವಿಡ್ ಅವರಿಗೆ ಭಾರತೀಯ ಆಟಗಾರರು ಟಿ20 ವಿಶ್ವಕಪ್ ಗೆಲುವಿನ ಗುರು ಕಾಣಿಕೆ ನೀಡಿದರು. ಕನ್ನಡಿಗ ರಾಹುಲ್ ದ್ರಾವಿಡ್ ತಮ್ಮ ಮುಖ್ಯ ಕೋಚ್ ಅವಧಿಯನ್ನು ಒಂದು ಕಾಲ್ಪನಿಕ ರೀತಿಯಲ್ಲಿ ಅಂತ್ಯಗೊಳಿಸಿದರು.
ತಮ್ಮ ಕ್ರಿಕೆಟ್ ಆಟದ ದಿನಗಳಲ್ಲಿ ಒಂದೇ ಒಂದು ವಿಶ್ವಕಪ್ ಟ್ರೋಫಿ ಇಲ್ಲದೆ ವೃತ್ತಿಜೀವನ ಕೊನೆಗೊಳಿಸಿದ್ದ ರಾಹುಲ್ ದ್ರಾವಿಡ್, ಇದೀಗ ಭಾರತ ತಂಡದ ಕೋಚ್ ಆಗಿ ಟಿ20 ವಿಶ್ವಕಪ್ ಗೆದ್ದರು. ವಿರಾಟ್ ಕೊಹ್ಲಿ ಅವರು ವೇದಿಕೆಯ ಮೇಲೆ ಟಿ20 ವಿಶ್ವಕಪ್ ಟ್ರೋಫಿಯನ್ನು ನೀಡಿದಾಗ ರಾಹುಲ್ ದ್ರಾವಿಡ್ ಅದನ್ನು ಹಿಡಿದು ಭಾವೋದ್ರಿಕ್ತರಾಗಿ ಸಂಭ್ರಮಿಸಿದರು.
ನಂತರ ಖುದ್ದು ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಭಾರತ ತಂಡದ ಆಟಗಾರರು ಕೋಚ್ ರಾಹುಲ್ ದ್ರಾವಿಡ್ ಅವರನ್ನು ಹಲವು ಬಾರಿ ಗಾಳಿಯಲ್ಲಿ ತೂರಿ ಸಂಭ್ರಮಿಸಿದರು.

ಐಸಿಸಿ ತಮ್ಮ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ ವಿಡಿಯೋದಲ್ಲಿ, ರಾಹುಲ್ ದ್ರಾವಿಡ್ ಅವರು ನಿವೃತ್ತಿ ಘೋಷಿಸಿದ ವಿರಾಟ್ ಕೊಹ್ಲಿಯನ್ನು ತಬ್ಬಿಕೊಂಡಾಗ ನಿಜವಾಗಿಯೂ ಭಾವುಕರಾಗಿದ್ದಾರೆ.
ರಾಹುಲ್ ದ್ರಾವಿಡ್ ತಮ್ಮ ಸಾಧನೆಗೆ ಚಾಂಪಿಯನ್ಸ್ ಪದಕದೊಂದಿಗೆ ಪರಿಪೂರ್ಣ ವಿದಾಯ ಹೇಳಲು ಸಂಭ್ರಮಾಚರಣೆಗಳು ನಡೆದವು. ರಾಹುಲ್ ದ್ರಾವಿಡ್ ಅವರು ಟಿ20 ವಿಶ್ವಕಪ್ 2024ರ ಟ್ರೋಫಿಯನ್ನು ಕೈಗೆತ್ತಿಕೊಂಡಾಗ ಅವರ ಅನಿಮೇಟೆಡ್ ನೋಡಲು ಎರಡು ಕಣ್ಣುಗಳು ಸಾಲದಾಗಿದ್ದವು.
ಐತಿಹಾಸಿಕ ಟಿ20 ವಿಶ್ವಕಪ್ 2024ರ ಗೆಲುವಿನ ನಂತರ, ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಕೂಡ ಭಾರತದ ಟಿ20 ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದರು. ಕ್ರಿಕೆಟ್ನ ಮೂರು ಲೆಜೆಂಡ್ಗಳು ಹಲವು ವರ್ಷಗಳಿಂದ ಭಾರತೀಯ ತಂಡಕ್ಕಾಗಿ ಮಾಡಿದ ಎಲ್ಲದಕ್ಕೂ ಪರಿಪೂರ್ಣ ಅಂತ್ಯವನ್ನು ಪಡೆದರು.

ಮಾಧ್ಯಮಗಳೊಂದಿಗೆ ಮಾತನಾಡುವಾಗ ರಾಹುಲ್ ದ್ರಾವಿಡ್ ತಮ್ಮ ಭಾವನೆಗಳನ್ನು ವಿವರಿಸಿದರು ಮತ್ತು ಈ ಗೆಲುವು ತನಗೆ ಮತ್ತು ಇಡೀ ತಂಡಕ್ಕೆ ಅರ್ಥ ತಂದುಕೊಟ್ಟಿದೆ ಎಂದರು.
"ಈ ಟಿ20 ವಿಶ್ವಕಪ್ಗಾಗಿ ಕಳೆದ 2 ವರ್ಷಗಳ ಪ್ರಯಾಣ. ಈ ತಂಡದ ನಿರ್ಮಾಣ ಮತ್ತು ನಾವು ಬಯಸಿದ ರೀತಿಯ ಕೌಶಲ್ಯಗಳು, ನಾವು ಬಯಸಿದ ಆಟಗಾರರಿದ್ದರು. ನಾನು 2021ರಲ್ಲಿ ಕೋಚ್ ಹುದ್ದೆ ಪ್ರಾರಂಭವಾದಾಗ ಚರ್ಚೆಗಳು ಪ್ರಾರಂಭವಾದವು. ಇದು ಕೇವಲ ಈ ವಿಶ್ವಕಪ್ನ ಕೆಲಸವಲ್ಲ, ಇದು 2 ವರ್ಷಗಳ ಪ್ರಯಾಣದಂತೆ ಭಾಸವಾಗುತ್ತಿದೆ," ಎಂದರು.
ಆಟಗಾರನಾಗಿ ಅಲ್ಲದಿದ್ದರೂ, ಮುಖ್ಯ ಕೋಚ್ ಆಗಿ ಐಸಿಸಿ ವಿಶ್ವಕಪ್ ಟ್ರೋಫಿಯನ್ನು ಗೆದ್ದಿದ್ದಕ್ಕಾಗಿ ರಾಹುಲ್ ದ್ರಾವಿಡ್ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ.
"ಆಟಗಾರನಾಗಿ ನಾನು ಟ್ರೋಫಿಯನ್ನು ಗೆಲ್ಲುವಷ್ಟು ಅದೃಷ್ಟಶಾಲಿಯಾಗಿರಲಿಲ್ಲ. ಆದರೆ ನಾನು ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ. ತಂಡಕ್ಕೆ ಕೋಚ್ ಆಗಿ ಅವಕಾಶವನ್ನು ಪಡೆಯುವಲ್ಲಿ ನಾನು ಅದೃಷ್ಟಶಾಲಿಯಾಗಿದ್ದೆ. ಈ ಟ್ರೋಫಿ ಗೆಲ್ಲಲು ಈ ಹುಡುಗರ ಗುಂಪೇ ನನಗೆ ಸಾಧ್ಯವಾಗುವಂತೆ ಮಾಡಿದ್ದು ನನ್ನ ಅದೃಷ್ಟ. ಇದು ಒಂದು ಅತ್ಯುತ್ತಮ ಭಾವನೆ, ನಾನು ಕೆಲವು ವಿಮೋಚನೆಗಾಗಿ ಗುರಿಯಿಟ್ಟುಕೊಂಡಿದ್ದಲ್ಲ. ಈ ಕೋಚ್ ಅವಧಿ ಉತ್ತಮ ಪ್ರಯಾಣವಾಗಿದೆ," ಎಂದು ರಾಹುಲ್ ದ್ರಾವಿಡ್ ಹೇಳಿದರು.