ಭಾನುವಾರ, ಸೆಪ್ಟೆಂಬರ್ 25ರಂದು ಇಂದೋರ್ನ ಹೋಳ್ಕರ್ ಸ್ಟೇಡಿಯಂನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ 99 ರನ್ಗಳ ಭರ್ಜರಿ ಗೆಲುವು ದಾಖಲಿಸುವ ಮೂಲಕ, ಇನ್ನೂ ಒಂದು ಪಂದ್ಯ ಬಕಿ ಇರುವಂತೆಯೇ 2-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡಿತು.
ಇದೇ ವೇಳೆ ಶುಭ್ಮನ್ ಗಿಲ್ ಮತ್ತು ಶ್ರೇಯಸ್ ಅಯ್ಯರ್ ಅವರ ಆಕರ್ಷಕ ಶತಕಗಳು ಏಕದಿನದಲ್ಲಿ ಉತ್ತಮ ಫಾರ್ಮ್ನಲ್ಲಿರುವುದಕ್ಕೆ ಸಾಕ್ಷಿಯಾಗಿತ್ತು.

ಆದಾಗ್ಯೂ, ಅವರ ಶತಕದ ಹೊರತಾಗಿಯೂ ಶುಭ್ಮನ್ ಗಿಲ್ ಅವರ ಪ್ರದರ್ಶನದ ಬಗ್ಗೆ ಭಾರತದ ಲೆಜೆಂಡ್ ಬ್ಯಾಟ್ಸ್ಮನ್ ವೀರೇಂದ್ರ ಸೆಹ್ವಾಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರ ಟೀಕೆಯು ಶುಭ್ಮನ್ ಗಿಲ್ ಶತಕವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ಅಸಮರ್ಥತೆಯ ಮೇಲೆ ಕೇಂದ್ರೀಕರಿಸಿದೆ. ಇದು ಯುವ ಬ್ಯಾಟರ್ ಸುವರ್ಣ ಅವಕಾಶವನ್ನು ಕಳೆದುಕೊಂಡರು ಎಂದು ತಿಳಿಸಿದ್ದಾರೆ.
ಪ್ರತಿಭಾನ್ವಿತ ಯುವ ಆರಂಭಿಕ ಶುಭ್ಮನ್ ಗಿಲ್ ಮೊದಲ ಏಕದಿನ ಪಂದ್ಯದಲ್ಲಿ 74 ರನ್ ಗಳಿಸಿ ಶತಕದಿಂದ ವಂಚಿತರಾದರು. ಆ ನಿರಾಸೆಯನ್ನು ಪುನರಾವರ್ತಿಸದೇ, ಇಂದೋರ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಶತಕ ಬಾರಿಸಿದರು.

ಶುಭ್ಮನ್ ಗಿಲ್ ಅವರ ಶತಕವು 97 ಎಸೆತಗಳಲ್ಲಿ ಬಂದಿತು ಮತ್ತು ಇದರಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ಗಳನ್ನು ಒಳಗೊಂಡಿದ್ದವು. ಇನ್ನು 90 ಎಸೆತಗಳಲ್ಲಿ 105 ರನ್ಗಳೊಂದಿಗೆ ಶತಕ ಗಳಿಸಿದ ಶ್ರೇಯಸ್ ಅಯ್ಯರ್ ಅವರ ಜೊತೆಗೆ ಎರಡನೇ ವಿಕೆಟ್ಗೆ 200 ರನ್ಗಳ ಜೊತೆಯಾಟ ನಿರ್ಮಿಸಿತು.
ಆ ಬಳಿಕ ಸೂರ್ಯಕುಮಾರ್ ಯಾದವ್ ಅವರ ಸ್ಫೋಟಕ ಅರ್ಧಶತಕವು ಭಾರತದ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿತು. ಅಂತಿಮವಾಗಿ 50 ಓವರ್ಗಳಲ್ಲಿ 5 ವಿಕೆಟ್ಗೆ 399 ರನ್ ಗಳಿಸಲು ಸಾಧ್ಯವಾಯಿತು.
ಸೂರ್ಯಕುಮಾರ್ ಯಾದವ್ ಕೇವಲ 37 ಎಸೆತಗಳಲ್ಲಿ 6 ಬೌಂಡರಿ ಮತ್ತು 6 ಸಿಕ್ಸರ್ಗಳನ್ನು ಒಳಗೊಂಡ ಅಜೇಯ 72 ರನ್ ಗಳಿಸಿದರು. ಇದಕ್ಕೆ ಉತ್ತರವಾಗಿ ಆಸ್ಟ್ರೇಲಿಯಾ ತಂಡ 33 ಓವರ್ಗಳಲ್ಲಿ 317 ರನ್ಗಳ ಪರಿಷ್ಕೃತ ಗುರಿಯನ್ನು ಬೆನ್ನಟ್ಟುವಾಗ ಅಂತಿಮವಾಗಿ 217 ರನ್ಗಳಿಗೆ ಆಲೌಟ್ ಆಯಿತು.
ಶುಭ್ಮನ್ ಗಿಲ್ ಅವರ ಶತಕ ಮತ್ತು ಅವರ ಅತ್ಯುತ್ತಮ ಕೊಡುಗೆಗಳ ಹೊರತಾಗಿಯೂ, ವೀರೇಂದ್ರ ಸೆಹ್ವಾಗ್ ಅವರು ಯುವ ಬ್ಯಾಟ್ಸ್ಮನ್ನ ಪ್ರದರ್ಶನದ ಬಗ್ಗೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು.
ವೀರೇಂದ್ರ ಸೆಹ್ವಾಗ್ ಅವರ ಪ್ರಾಥಮಿಕ ಕಾಳಜಿಯು ಶುಭ್ಮನ್ ಗಿಲ್ ಅವರು ಇರುವ ಫಾರ್ಮ್ ಅನ್ನು ಪರಿಗಣಿಸಿ, ಶತಕವನ್ನು ದೊಡ್ಡ ಸ್ಕೋರ್ ಆಗಿ ಪರಿವರ್ತಿಸಲು ವಿಫಲವಾಗಿದ್ದಾರೆ ಎನ್ನುವುದಾಗಿದೆ. 25 ವರ್ಷದ ಶುಭ್ಮನ್ ಗಿಲ್ ಆ ಪಂದ್ಯದಲ್ಲಿ 160 ಅಥವಾ 180 ರನ್ ಗಳಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟರು.
ಕಿರಿಯ ವಯಸ್ಸಿನಲ್ಲಿ ಶುಭ್ಮನ್ ಗಿಲ್ ದೊಡ್ಡ ಇನ್ನಿಂಗ್ಸ್ನ ನಂತರ, ದೈಹಿಕವಾಗಿ ಮತ್ತು ಮಾನಸಿಕವಾಗಿ ಹೆಚ್ಚು ಪರಿಣಾಮಕಾರಿಯಾಗಿ ಚೇತರಿಸಿಕೊಳ್ಳಬಹುದು ಎಂಬುದು ವೀರೇಂದ್ರ ಸೆಹ್ವಾಗ್ ಅವರ ವಾದವಾಗಿತ್ತು.
ವೀರೇಂದ್ರ ಸೆಹ್ವಾಗ್ ಪ್ರಕಾರ, ದ್ವಿಶತಕ ಗಳಿಸುವುದು ಶುಭ್ಮನ್ ಗಿಲ್ಗೆ ವಾಸ್ತವಿಕ ಸಾಧ್ಯತೆಯಾಗಿತ್ತು. ಏಕೆಂದರೆ ಗಿಲ್ ಔಟಾದಾಗ ಇನ್ನೂ 15 ಓವರ್ಗಳಿಗಿಂತ ಹೆಚ್ಚು ಬಾಕಿ ಉಳಿದಿದ್ದವು.
ಶುಭ್ಮನ್ ಗಿಲ್ ತಪ್ಪಿಸಿಕೊಂಡ ಅವಕಾಶವನ್ನು ಎತ್ತಿ ತೋರಿಸಲು ವೀರೇಂದ್ರ ಸೆಹ್ವಾಗ್ ತಮ್ಮದೇ ಆದ ಉದಾಹರಣೆಯನ್ನು ಉಲ್ಲೇಖಿಸಿದರು, ಇದೇ ಪಿಚ್ನಲ್ಲಿ ದ್ವಿಶತಕ ಗಳಿಸಿದ್ದರು.
"ನೀವು ಫಾರ್ಮ್ನಲ್ಲಿರುವಾಗ ಮತ್ತು ನೀವು ರನ್ ಗಳಿಸುತ್ತಿರುವಾಗ, ನಿಮ್ಮ ವಿಕೆಟ್ ಅನ್ನು ಕೈಚೆಲ್ಲಬೇಡಿ," ಎಂದು ವೀರೇಂದ್ರ ಸೆಹ್ವಾಗ್ ಒತ್ತಿ ಹೇಳಿದರು.
"ಮೂರು ದ್ವಿಶತಕಗಳನ್ನು ಗಳಿಸಿದ ರೋಹಿತ್ ಶರ್ಮಾ ಅವರಂತೆಯೇ, ಶುಭ್ಮನ್ ಗಿಲ್ ಅವರು ಏಕದಿನ ಮಾದರಿಯಲ್ಲಿ ತಮ್ಮ ಎರಡನೇ ದ್ವಿಶತಕವನ್ನು ಬಾರಿಸುವ ಅವಕಾಶವನ್ನು ಹೊಂದಿದ್ದಾರೆ," ಎಂದು ವೀರೇಂದ್ರ ಸೆಹ್ವಾಗ್ ಗಮನಸೆಳೆದರು.
ರಾಜ್ಕೋಟ್ ಸ್ಟೇಡಿಯಂನಲ್ಲಿ ಬುಧವಾರ, ಸೆಪ್ಟೆಂಬರ್ 27ರಂದು ನಡೆಯಲಿರುವ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯ ಸಮೀಪಿಸುತ್ತಿರುವಾಗ, ಶುಭ್ಮನ್ ಗಿಲ್ ಅವರು ವೀರೇಂದ್ರ ಸೆಹ್ವಾಗ್ ಅವರ ಸಲಹೆಯನ್ನು ಮನಸ್ಸಿಗೆ ತೆಗೆದುಕೊಂಡು ಉತ್ತಮ ಆರಂಭವನ್ನು ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುವ ಅವಕಾಶವನ್ನು ಬಳಸಿಕೊಳ್ಳುತ್ತಾರೆಯೇ ಎಂದು ಕಾದು ನೋಡಬೇಕಿದೆ.