ಕೆಎಲ್ ರಾಹುಲ್ ನೇತೃತ್ವದ ಪಂಜಾಬ್ ಕಿಂಗ್ಸ್ ಮತ್ತೊಂದು ಸೋಲು ಕಾಣುವ ಮೂಲಕ ಈ ಬಾರಿಯ ಆವೃತ್ತಿಯಲ್ಲಿಯೂ ನೀರಸ ಆರಂಭವನ್ನು ಪಡೆದುಕೊಂಡಿದೆ. ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಹುಲ್ ಬಳಗ 9 ರನ್ಗಳ ಅಂತರದಿಂದ ಸೋಲು ಕಂಡಿತು. ಈ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದೆ.
ಈ ಸೋಲಿನ ಬಳಿಕ ಪಂಜಾಬ್ ಕಿಂಗ್ಸ್ ತಂಡದ ನಾಯಕ ಕೆಎಲ್ ರಾಹುಲ್ ಮಾತನಾಡಿ ತಂಡದ ಸೋಲಿಗೆ ಬೇಸರವನ್ನು ಹೊರಹಾಕಿದ್ದಾರೆ. ಪರಿಸ್ಥಿತಿಗೆ ಹೊಂದಿಕೊಳ್ಳಲು ಇದು ಕಠಿಣವಾಗಿತ್ತು. ಆದ್ಷ್ಟು ಬೇಗನೆ ನಾವು ಪರಿಸ್ಥಿತಿಗೆ ಹೊಂದಿಕೊಳ್ಳುವುದನ್ನು ಬಯಸಿದ್ದೆವು. ಆದರೆ ನಾವು 10-15 ರನ್ಗಳ ಕೊರತೆಯನ್ನು ಅನುಭವಿಸಿದೆವು. ಕೆಲ ಬ್ಯಾಟ್ಸ್ಮನ್ಗಳು ಕ್ರೀಸ್ನಲ್ಲಿ ನೆಲೆಯೂರಿದರಾದರೂ 30-40 ರನ್ಗಳಿಸಲು ಸಾಧ್ಯವಾಗಲಿಲ್ಲ. ಇದು ಸೋಲಿನತ್ತ ತಳ್ಳಿತು" ಎಂದು ರಾಹುಲ್ ಹೇಳಿದ್ದಾರೆ.
ನಿಮ್ಮಂತೆ ಯಾರೂ ಇಲ್ಲ ; ಧೋನಿ ಕುರಿತು ಚೇತನ್ ಸಕಾರಿಯಾ ಮನದಾಳದ ಮಾತು
ಈ ಪಂದ್ಯದಲ್ಲಿ ಸ್ವತಃ ನಾಯಕ ರಾಹುಲ್ ಕೂಡ ಕಳಪೆ ಪ್ರದರ್ಶನವನ್ನು ನೀಡಿದರು. ರಾಹುಲ್ ಕೇವಲ 4 ರನ್ಗಳಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಪಂಜಾಬ್ ತಂಡದ ಬ್ಯಾಟಿಂಗ್ ಕುಸುತ ಆರಂಭವಾಯಿತು. ಯಾವ ಬ್ಯಾಟ್ಸ್ಮನ್ ಕೂಡ ದೊಡ್ಡ ಮೊತ್ತವನ್ನು ಗಳಿಸಲು ಸಾಧ್ಯವಾಗಲಿಲ್ಲ. ಇದು ತಂಡದ ಹಿನ್ನಡೆಗೆ ಪ್ರಮುಖ ಕಾರಣವಾಯಿತು.
ಇನ್ನು ಸೋಲಿನ ನಂತರ ಬೌಲಿಂಗ್ ವಿಭಾಗದ ಬಗ್ಗೆಯೂ ರಾಹುಲ್ ನಿರಾಶೆ ವ್ಯಕ್ತಪಡಿಸಿದರು. ಈ ದಿನವೂ ಕೂಡ ನಮ್ಮ ಬೌಲಿಂಗ್ ವಿಭಾಗದ ಪ್ರದರ್ಶನ ನೀರಸವಾಗಿತ್ತು. ಆರಂಭಿಕರಾದ ವಾರ್ನರ್ ಹಾಗೂ ಬೈರ್ಸ್ಟೋವ್ ಮೇಲೆ ಒತ್ತಡವನ್ನು ಹೇರಲು ನಮ್ಮ ಬೌಲರ್ಗಳಿಂದ ಸಾಧ್ಯವಾಗಲಿಲ್ಲ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.