For Quick Alerts
ALLOW NOTIFICATIONS  
For Daily Alerts
 

IPL 2025: ಗುಜರಾತ್ ಟೈಟನ್ಸ್ ಪರ ಕಣಕ್ಕಿಳಿರುವ ಸಿರಾಜ್; ವಿರಾಟ್ ಕೊಹ್ಲಿ ಬಗ್ಗೆ ಹೇಳಿದ್ದೇನು?

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹಲವು ಆಟಗಾರರ ವೃತ್ತಿಜೀವನದ ಅಂತ್ಯ ಎನ್ನಲಾಗುತ್ತದೆ. ಭಾರತ ತಂಡದಲ್ಲಿ ಐಪಿಎಲ್‌ನಿಂದ ಖ್ಯಾತಿ ಗಳಿಸಿ ಇಂದು ಹೀರೋಗಳಾಗಿ ಮಾರ್ಪಟ್ಟಿರುವ ಅನೇಕ ಆಟಗಾರರಿದ್ದಾರೆ. ಈ ಹೆಸರುಗಳಲ್ಲಿ ಟೀಮ್ ಇಂಡಿಯಾದ ಸ್ಟಾರ್ ಬೌಲರ್ ಮೊಹಮ್ಮದ್ ಸಿರಾಜ್ ಅವರ ಹೆಸರೂ ಒಂದು, ವಿರಾಟ್ ಕೊಹ್ಲಿ ತಮ್ಮ ಪ್ರಯಾಣದಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಅವರು ಬಹಿರಂಗಪಡಿಸಿದ್ದಾರೆ. ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಒಂದೇ ತಂಡದಲ್ಲಿ ಹಲವು ವರ್ಷ ಕಾಲ ಆಡಿದ್ದರು. ಆದರೆ ಇಬ್ಬರೂ ಐಪಿಎಲ್ 2025 ರಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳಲಿದ್ದಾರೆ.

ಐಪಿಎಲ್ 2025 ರ ಮೆಗಾ ಹರಾಜಿನಲ್ಲಿ ಮೊಹಮ್ಮದ್ ಸಿರಾಜ್ ಅವರನ್ನು ಗುಜರಾತ್ ಟೈಟಾನ್ಸ್ 12.25 ಕೋಟಿ ರೂ.ಗಳಿಗೆ ಖರೀದಿಸಿತು. ಆದರೆ ಇದರ ಹೊರತಾಗಿಯೂ, ಆರ್‌ಸಿಬಿಯಿಂದ ಬೇರ್ಪಡುವಿಕೆ ಸಿರಾಜ್‌ ಅವರಿಗೆ ಬಹಳ ಭಾವನಾತ್ಮಕ ಕ್ಷಣವಾಗಿತ್ತು. 2018 ಮತ್ತು 2019 ರಲ್ಲಿ ತನ್ನ ಕೆಟ್ಟ ಸಮಯದಲ್ಲಿ ವಿರಾಟ್ ಕೊಹ್ಲಿ ಬೆಂಬಲ ನೀಡಿದ್ದರು ಎಂದು ಸಿರಾಜ್ ಒಪ್ಪಿಕೊಂಡಿದ್ದಾರೆ. ಇದಾದ ನಂತರ ಸಿರಾಜ್ ಅವರ ವೃತ್ತಿಜೀವನದ ಗ್ರಾಫ್‌ನಲ್ಲಿ ಹಠಾತ್ ಜಿಗಿತ ಕಂಡುಬಂದಿತು.

What did Mohammad Siraj say about Virat Kohli before IPL 2025

ಮೊಹಮ್ಮದ್ ಸಿರಾಜ್ ಹೇಳಿದ್ದೇನು?

ಸಂದರ್ಶನವೊಂದರಲ್ಲಿ ಮಾತನಾಡಿರುವ ಗುಜರಾತ್ ಟೈಟನ್ಸ್ ಸ್ಟಾರ್ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರು ವಿರಾಟ್ ಕೊಹ್ಲಿ ಬಗ್ಗೆ ಗುಣಗಾನ ಮಾಡಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ, ವಿರಾಟ್ ಕೊಹ್ಲಿ ನನ್ನ ವೃತ್ತಿಜೀವನದಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. 2018 ಮತ್ತು 2019 ರಲ್ಲಿ ನನ್ನ ಕೆಟ್ಟ ಸಮಯದಲ್ಲಿ ಕೊಹ್ಲಿ ನನ್ನನ್ನು ಬೆಂಬಲಿಸಿದರು. ತಂಡದಲ್ಲಿ ಅವರು ನನ್ನನ್ನು ಉಳಿಸಿಕೊಂಡರು. ಇದಾದ ಬಳಿಕ ನನ್ನ ಪ್ರದರ್ಶನ ಮತ್ತು ಗ್ರಾಫ್ ಏರಿತು. ಅವರು ನನಗೆ ಎಲ್ಲಾ ಹಂತದಲ್ಲಿಯೂ ತುಂಬಾ ಬೆಂಬಲ ನೀಡಿದ್ದಾರೆ. ಆರ್‌ಸಿಬಿ ಬಿಡುವುದು ನನಗೆ ತುಂಬಾ ಭಾವನಾತ್ಮಕವಾಗಿದೆ ಎಂದು ಹೇಳಿದ್ದಾರೆ.

ಸಿರಾಜ್ ತರಬೇತಿ ಹೇಗಿದೆ?

ಐಪಿಎಲ್ 202ರಲ್ಲಿ ಗುಜರಾತ್ ಟೈಟನ್ಸ್ ಪರ ಆಡಲಿರುವ ಮೊಹಮ್ಮದ್ ಸಿರಾಜ್ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. "ನನ್ನ ತಂಡದ ಎಲ್ಲಾ ವೇಗದ ಬೌಲರ್‌ಗಳೊಂದಿಗೆ ನನ್ನ ತರಬೇತಿ ತುಂಬಾ ಚೆನ್ನಾಗಿ ನಡೆಯುತ್ತಿದೆ. ನಮ್ಮ ಬೌಲಿಂಗ್ ಕ್ರಮಾಂಕವನ್ನು ಹೇಗೆ ಯೋಜಿಸಬೇಕು? ಮತ್ತು ಹೇಗೆ ಕಾರ್ಯಗತಗೊಳಿಸಬೇಕು? ಎಂದು ತಿಳಿದಿದೆ. ತಂಡದ ಸದಸ್ಯರೊಂದಿಗೆ ಮತ್ತು ವಿಶೇಷವಾಗಿ ಗುಜರಾತ್ ಟೈಟಾನ್ಸ್‌ನೊಂದಿಗೆ ಅಭ್ಯಾಸ ಮಾಡುತ್ತಿರುವುದು ನನಗೆ ತುಂಬಾ ಚೆನ್ನಾಗಿ ಅನಿಸುತ್ತಿದೆ ಎಂದು

ಐಪಿಎಲ್ 2025ರಲ್ಲಿ ಏಪ್ರಿಲ್ 2 ರಂದು ನಡೆಯಲಿರುವ ಹೈವೋಲ್ಟೇಜ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಮುಖಾಮುಖಿಯಾಗಲಿದ್ದಾರೆ. ಏಪ್ರಿಲ್ 2 ರಂದು ರಜತ್ ಪಾಟಿದಾರ್ ನೇತೃತ್ವದ ಆರ್‍‌ಸಿಬಿ ತಂಡವನ್ನು ಶುಭಮನ್ ಗಿಲ್ ಮುನ್ನಡೆಸುತ್ತಿರುವ ಗುಜರಾತ್ ಎದುರಿಸಲಿದೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಗುರು ಮತ್ತು ಶಿಷ್ಯನ ನಡುವಿನ ಪೈಪೋಟಿಯಲ್ಲಿ ಗೆಲ್ಲುವುದು ಯಾರು ಎಂಬ ಪ್ರಶ್ನೆಗೆ ಏಪ್ರಿಲ್ 2 ರಂದು ಉತ್ತರ ಸಿಗಲಿದೆ.

Story first published: Friday, March 21, 2025, 16:25 [IST]
Other articles published on Mar 21, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+