For Quick Alerts
ALLOW NOTIFICATIONS  
For Daily Alerts
 

ಪ್ರಧಾನಿ ಮೋದಿ ಟಿ20 ವಿಶ್ವಕಪ್ ಟ್ರೋಫಿ ಮುಟ್ಟದೆ, ರೋಹಿತ್-ದ್ರಾವಿಡ್ ಕೈ ಹಿಡಿದಿದ್ದೇಕೆ?; ಭಾರೀ ಶ್ಲಾಘನೆ

ಇತ್ತೀಚಿಗೆ ಯುಎಸ್ಎ ಮತ್ತು ವೆಸ್ಟ್ ಇಂಡೀಸ್‌ನಲ್ಲಿ ಮುಕ್ತಾಯಗೊಂಡ 2024ರ ಐಸಿಸಿ ಟಿ20 ವಿಶ್ವಕಪ್ ಅಭಿಯಾನದಿಂದ ಹಿಂದಿರುಗಿದ ನಂತರ, ಭಾರತ ಕ್ರಿಕೆಟ್ ತಂಡವು ಗುರುವಾರ, ಜುಲೈ 4ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿತು.

ಫೈನಲ್‌ ಪಂದ್ಯದ ನಂತರ ಬೆರಿಲ್ ಚಂಡಮಾರುತದ ಕಾರಣ, ಮೂರು ದಿನಗಳ ಕಾಲ ಬಾರ್ಬಡೋಸ್‌ನಲ್ಲೇ ಸಿಲುಕಿಕೊಂಡಿದ್ದ ಭಾರತ ತಂಡವು, ಗುರುವಾರ ಬೆಳಿಗ್ಗೆ 6:05 ಕ್ಕೆ ನವದೆಹಲಿಗೆ ಬಂದಿಳಿಯಿತು. ನಂತರ ಭಾರತ ಕ್ರಿಕೆಟ್ ತಂಡವು ನಂ. 7, ಲೋಕ ಕಲ್ಯಾಣ ಮಾರ್ಗದಲ್ಲಿ ಪ್ರಧಾನಮಂತ್ರಿ ನಿವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬೆಳಿಗ್ಗೆ 11 ಗಂಟೆಗೆ ಭೇಟಿಯಾಯಿತು.

Why Did PM Narendra Modi Not Touch the T20 World Cup Trophy But Holds Rohit-Dravid Hands

ಭಾರತ ಕ್ರಿಕೆಟ್ ತಂಡವು ಪ್ರಧಾನಿ ನರೇಂದ್ರ ಮೋದಿ ಮತ್ತು ಟಿ20 ವಿಶ್ವಕಪ್ ಟ್ರೋಫಿಯೊಂದಿಗೆ ಫೋಟೋಗೆ ಪೋಸ್ ನೀಡುತ್ತಿದ್ದಾಗ, ನಂಬಲಾಗದ ದೃಶ್ಯವೊಂದು ತೆರೆದುಕೊಂಡಿತು.

ಪ್ರಧಾನಿ ನರೇಂದ್ರ ಮೋದಿ ಅವರು ಟಿ20 ವಿಶ್ವಕಪ್ ಟ್ರೋಫಿಯನ್ನು ತಮ್ಮ ಕೈಯಿಂದ ಮುಟ್ಟಲಿಲ್ಲ ಮತ್ತು ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಕೈಗಳನ್ನು ಮಾತ್ರ ಹಿಡಿದಿದ್ದರು.

ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ತಲಾ ಒಂದು ಕೈ ಬಳಸಿ ಟ್ರೋಫಿ ಹಿಡಿದರೆ, ಪ್ರಧಾನಿ ಮೋದಿ ಚಿತ್ರಗಳಿಗೆ ಪೋಸ್ ನೀಡುವಾಗ ಅವರ ಕೈ ಹಿಡಿದುಕೊಂಡಿದ್ದರು. ಪ್ರಧಾನಿ ಮೋದಿಯವರ ಈ ಅದ್ಭುತ ಗೆಸ್ಚರ್ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

ಹೇಳದ ನಿಯಮದಂತೆ, ತಂಡಗಳು ಅಥವಾ ವ್ಯಕ್ತಿಗಳು ಗೆದ್ದ ಟ್ರೋಫಿಗಳು ಅಥವಾ ಪದಕಗಳನ್ನು ತಂಡಗಳನ್ನು ಹೊಂದಿರುವವರು ಅಥವಾ ಅವುಗಳನ್ನು ಗೆದ್ದ ಕ್ರೀಡಾಪಟುಗಳು ಮಾತ್ರ ಮುಟ್ಟಬೇಕು ಎಂದಿದೆ.

Why Did PM Narendra Modi Not Touch the T20 World Cup Trophy But Holds Rohit-Dravid Hands

ಪ್ರಧಾನಿ ನರೇಂದ್ರ ಮೋದಿಯವರ ಈ ಕಾರ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಲವರು ಶ್ಲಾಘಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿಗೆ ಭಾರತ ತಂಡದಿಂದ 'ನಂ.1 ನಮೋ' ಜೆರ್ಸಿಯನ್ನು ರೋಜರ್ ಬಿನ್ನಿ ಮತ್ತು ಜಯ್ ಶಾ ಅವರು ಉಡುಗೊರೆಯಾಗಿ ನೀಡಿದರು.

ಸಭೆಯ ನಂತರ, ಟಿ20 ವಿಶ್ವಕಪ್ ವಿಜೇತ ಭಾರತೀಯ ಕ್ರಿಕೆಟಿಗರು ಮುಂಬೈಗೆ ವಿಮಾನದಲ್ಲಿ ತೆರಳಲು ದೆಹಲಿ ವಿಮಾನ ನಿಲ್ದಾಣಕ್ಕೆ ತೆರಳಿದರು. ಮುಂಬೈನಲ್ಲಿ ಅವರಿಗೆ ಮೆರೈನ್ ಡ್ರೈವ್ ಮತ್ತು ವಾಂಖೆಡೆ ಸ್ಟೇಡಿಯಂನಲ್ಲಿ ಭವ್ಯವಾದ ವಿಜಯೋತ್ಸವದ ಮೆರವಣಿಗೆಯನ್ನು ಸಿದ್ಧಪಡಿಸಲಾಗಿದೆ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಅವರು ಶುಕ್ರವಾರ ವಿಧಾನಸಭೆಯಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಭೇಟಿಯಾಗಲಿದ್ದಾರೆ ಎಂದು ಶಿವಸೇನೆ ನಾಯಕ ಪ್ರತಾಪ್ ಸರ್ನಾಯಕ್ ಎಎನ್‌ಐಗೆ ತಿಳಿಸಿದ್ದಾರೆ.

"ಮುಂಬೈನಲ್ಲಿ ಇಂದಿನ ಕಾರ್ಯಕ್ರಮವನ್ನು ಬಿಸಿಸಿಐ ಆಯೋಜಿಸಿದೆ. ಮುಂಬೈನ ಆಟಗಾರರಾದ ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ಶಿವಂ ದುಬೆ ಮತ್ತು ಯಶಸ್ವಿ ಜೈಸ್ವಾಲ್ ಸೇರಿದಂತೆ ಟೀಂ ಇಂಡಿಯಾ ಆಟಗಾರರು ಸಿಎಂ ಏಕನಾಥ್ ಶಿಂಧೆ ಅವರನ್ನು ಭೇಟಿ ಮಾಡಲು ನಾಳೆ ಮಹಾರಾಷ್ಟ್ರ ವಿಧಾನಸಭೆಗೆ ಬರಲಿದ್ದಾರೆ. ಎಂಸಿಎ ಸದಸ್ಯನಾಗಿ ನಾನು ಆಟಗಾರರನ್ನು ಆಹ್ವಾನಿಸಿದ್ದೇನೆ ಮತ್ತು ಅವರು ನನ್ನ ಆಹ್ವಾನವನ್ನು ಸ್ವೀಕರಿಸಿದ್ದಾರೆ," ಎಂದು ಪ್ರತಾಪ್ ಸರ್‌ನಾಯಕ್ ಹೇಳಿದರು.

ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​(ಎಂಸಿಎ) ಕಾರ್ಯದರ್ಶಿ ಅಜಿಂಕ್ಯ ನಾಯಕ್ ಅವರು ತಮ್ಮ ಗೆಲುವನ್ನು ಆಚರಿಸುವ ಭಾರತೀಯ ತಂಡದ ಮಹಾ ವಿಜಯೋತ್ಸವದ ಮೆರವಣಿಗೆಗೆ ಸಾರ್ವಜನಿಕರಿಗೆ ಉಚಿತ ಪ್ರವೇಶವನ್ನು ನೀಡಲಾಗುವುದು ಎಂದು ಹೇಳಿದ್ದಾರೆ.

Story first published: Thursday, July 4, 2024, 17:20 [IST]
Other articles published on Jul 4, 2024
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+