ಶನಿವಾರ, ಮಾರ್ಚ್ 2ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ವಿರುದ್ಧ ಮುಂಬೈ ಇಂಡಿಯನ್ಸ್ (ಎಂಐ) ಒತ್ತಡವನ್ನು ಎದುರಿಸಲಿದೆ ಎಂದು ಭಾರತೀಯ ಮಾಜಿ ಮಹಿಳಾ ಕ್ರಿಕೆಟರ್ ರೀಮಾ ಮಲ್ಹೋತ್ರಾ ಹೇಳಿದ್ದಾರೆ.
ಈ ಟೂರ್ನಿಯಲ್ಲಿ ಉಭಯ ತಂಡಗಳು ಆಡಿದ ಮೂರು ಪಂದ್ಯಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಸತತ ಎರಡು ಪಂದ್ಯಗಳನ್ನು ಗೆದ್ದ ಬಳಿಕ ತಮ್ಮ ಕೊನೆಯ ಪಂದ್ಯವನ್ನು ಸೋತಿವೆ.

ಎರಡೂ ತಂಡಗಳು ಕ್ರಮವಾಗಿ ಯುಪಿ ವಾರಿಯರ್ಜ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮಹಿಳಾ ತಂಡಗಳ ವಿರುದ್ಧ ಸೋತ ನಂತರ ತಮ್ಮ ಈ ಪಂದ್ಯಕ್ಕೆ ಬರುತ್ತಿವೆ.
ಇದಕ್ಕೂ ಮೊದಲು, ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಬೆಂಗಳೂರಿನಲ್ಲಿ ತಮ್ಮ ತಂಡವನ್ನು ಹುರಿದುಂಬಿಸುವ ಸಾಮರ್ಥ್ಯದ ಪ್ರೇಕ್ಷಕರಿಂದಾಗಿ ತಮ್ಮ ತಂಡಕ್ಕೆ ಹೆಚ್ಚಿನ ಉತ್ತೇಜನವನ್ನು ಪಡೆಯುತ್ತಾರೆ ಎಂದು ರೀಮಾ ಮಲ್ಹೋತ್ರಾ ಹೇಳಿದರು.
ಈ ಪಂದ್ಯದಲ್ಲಿ ಆರ್ಸಿಬಿ ಮೇಲುಗೈ ಸಾಧಿಸುತ್ತದೆ. ಆದರೆ ಹರ್ಮನ್ಪ್ರೀತ್ ಕೌರ್ ಮತ್ತು ಮುಂಬೈ ಇಂಡಿಯನ್ಸ್ ಒತ್ತಡದಲ್ಲಿ ಪುಟಿದೇಳುವ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ರೀಮಾ ಮಲ್ಹೋತ್ರಾ ಉಲ್ಲೇಖಿಸಿದ್ದಾರೆ.
"ಇದು ಎರಡು ಕ್ರಿಕೆಟ್ ಮೈಂಡ್ಸ್ಗಳ ನಡುವಿನ ಯುದ್ಧವಾಗಿದೆ, ಅದು ಸ್ಮೃತಿ ಮಂಧಾನ ಮತ್ತು ಹರ್ಮನ್ಪ್ರೀತ್ ಕೌರ್. ಇಬ್ಬರೂ ಒಬ್ಬರನ್ನೊಬ್ಬರು ಚೆನ್ನಾಗಿ ತಿಳಿದಿದ್ದಾರೆ ಮತ್ತು ಪರಸ್ಪರರ ಆಟವನ್ನು ಬಲ್ಲವರಾಗಿದ್ದಾರೆ. ತಂಡವಾಗಿ ಉತ್ತಮ ಪ್ರದರ್ಶನ ನೀಡುವವರು ಗೆಲ್ಲುತ್ತಾರೆ," ಎಂದು ರೀಮಾ ಮಲ್ಹೋತ್ರಾ ತಿಳಿಸಿದರು.

"ಆದಾಗ್ಯೂ, ಮುಂಬೈ ಇಂಡಿಯನ್ಸ್ ವಿರುದ್ಧ ಆರ್ಸಿಬಿ ತಂಡ ಏಕಾಂಗಿಯಾಗಿರುವುದಿಲ್ಲ. ಅವರು ತಮ್ಮ ತವರಿನ ಅಭಿಮಾನಿಗಳೊಂದಿಗೆ ದಾಳಿ ಮಾಡುತ್ತಾರೆ ಎಂಬುದನ್ನು ಮರೆಯಬಾರದು. ಚಿನ್ನಸ್ವಾಮಿ ಮೈದಾನವು ತುಂಬಲಿದೆ. ಫ್ಯಾನ್ಸ್ ಸ್ಮೃತಿ ಮಂಧಾನ ಅವರಿಗೆ ಮಾತನಾಡಲು ಅವಕಾಶ ನೀಡುವುದಿಲ್ಲ," ಎಂದು ಮಾಜಿ ಕ್ರಿಕೆಟರ್ ಹೇಳಿದರು.
"ಹುರಿದುಂಬಿಸುವ ಅಭಿಮಾನಿಗಳಿಂದಾಗಿ 10 ಹೆಚ್ಚುವರಿ ರನ್ಗಳು ಸೇರಿಸಬೇಕು ಎಂದು ಸ್ವತಃ ಸ್ಮೃತಿ ಮಂಧಾನ ಹೇಳಿದ್ದಾರೆ. ಆದ್ದರಿಂದ ಒತ್ತಡವು ಮುಂಬೈ ಇಂಡಿಯನ್ಸ್ನ ಮೇಲೆ ಖಂಡಿತವಾಗಿಯೂ ಇರುತ್ತದೆ. ಆದರೆ ಹರ್ಮನ್ಪ್ರೀತ್ ಕೌರ್ ನಾಯಕತ್ವದ ಮುಂಬೈ ತಂಡವು ಒತ್ತಡದಲ್ಲಿ ಹೇಗೆ ಪ್ರದರ್ಶನ ನೀಡಬೇಕೆಂದು ಚೆನ್ನಾಗಿ ತಿಳಿದಿದೆ," ಎಂದು ರೀಮಾ ಮಲ್ಹೋತ್ರಾ ಸೇರಿಸಿದರು.
ಕಳೆದ ಋತುವಿನಲ್ಲಿ ಹರ್ಮನ್ಪ್ರೀತ್ ಅವರ ಮುಂಬೈ ಇಂಡಿಯನ್ಸ್ ಕ್ರಮವಾಗಿ 9 ಮತ್ತು 4 ವಿಕೆಟ್ಗಳಿಂದ ಸ್ಮೃತಿ ಮಂಧಾನ ಅವರ ಆರ್ಸಿಬಿ ತಂಡವನ್ನು ಎರಡೂ ಬಾರಿ ಸೋಲಿಸಿತು.
ಆದರೆ 2023ರಲ್ಲಿ ರಾಯಲ್ ಚಾಲೆಂಜರ್ಸ್ ಕಳಪೆ ಋತುವನ್ನು ಹೊಂದಿದ್ದರು. ಟೂರ್ನಿಯಿಂದ ಹೊರಬೀಳುವ ಮೊದಲು ಸತತ 5 ಸೋಲುಗಳೊಂದಿಗೆ ಪ್ರಾರಂಭಿಸಿದರು. ಈ ವರ್ಷ ಆರ್ಸಿಬಿ ತಮ್ಮ ತವರಿನ ಪ್ರೇಕ್ಷಕರ ಮುಂದೆ ಅದ್ಭುತವಾಗಿ ಅಭಿಯಾನ ಆರಂಭಿಸಿದರು.