ಭಾನುವಾರ, ಮಾರ್ಚ್ 10ರಂದು ನವದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ 2024ರ ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್) 17ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡವು ಡೆಲ್ಲಿ ಕ್ಯಾಪಿಟಲ್ಸ್ (ಡಿಸಿ) ವಿರುದ್ಧ ರೋಚಕ 1 ರನ್ನಿಂದ ಸೋಲು ಕಂಡಿತು.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆಲುವಿನ ಅವಕಾಶವಿದ್ದರೂ, ಕೊನೆಯ ಎಸೆತದಲ್ಲಿ ರನೌಟ್ ಮೂಲಕ ಆದ ಸೋಲು ಕ್ರೀಸ್ನಲ್ಲಿದ್ದ ಶ್ರೇಯಾಂಕಾ ಪಾಟೀಲ್ ಮತ್ತು ರಿಚಾ ಘೋಷ್ ಅವರು ಕಣ್ಣೀರಿಡುವಂತೆ ಮಾಡಿತು.

ಕೊನೆಯ ಎಸೆತದಲ್ಲಿ ಗೆಲುವಿಗೆ 2 ರನ್ಗಳ ಅಗತ್ಯವಿದ್ದಾಗ, ಜೆಸ್ ಜೊನಾಸ್ಸೆನ್ ಆಫ್-ಸ್ಟಂಪ್ನ ಹೊರಗೆ ಬೌಲ್ ಮಾಡಿದರು. ಅದನ್ನು ರಿಚಾ ಘೋಷ್ ಬ್ಯಾಕ್ವರ್ಡ್ ಪಾಯಿಂಟ್ಗೆ ತಿರುಗಿಸಿ ತ್ವರಿತ ಸಿಂಗಲ್ ರನ್ಗೆ ಓಡಿದರು.
ಆದಾಗ್ಯೂ, ನಾನ್ ಸ್ಟ್ರೈಕರ್ ತುದಿಗೆ ನಿಖರವಾಗಿ ಶಫಾಲಿ ವರ್ಮಾ ಚೆಂಡು ಎಸೆದರು ಮತ್ತು ಜೆಸ್ ಜೊನಾಸೆನ್ ತ್ವರಿತವಾಗಿ ಬೇಲ್ಸ್ ಹಾರಿಸಿ ರನೌಟ್ ಮಾಡಿದರು. ರಿಚಾ ಘೋಷ್ ಬೇಗ ಕ್ರೀಸ್ ತಲುಪದ ಕಾರಣ, ಆರ್ಸಿಬಿ ತಂಡದ ಗೆಲುವನ್ನು ಕಸಿಯಿತು.
ಯುವ ಆಟಗಾರ್ತಿ ರಿಚಾ ಘೋಷ್ ಕೇವಲ 29 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ಗಳೊಂದಿಗೆ 51 ರನ್ ಗಳಿಸಿದರು. ಆದರೆ ಅವರ ಅಂತಿಮ ಹಂತದ ಪ್ರಯತ್ನಗಳು ವ್ಯರ್ಥವಾಯಿತು.

ಆರ್ಸಿಬಿ ತಂಡ ಸೋತ ಬಳಿಕ ರಿಚಾ ಘೋಷ್ ಮತ್ತು ಶ್ರೇಯಾಂಕಾ ಪಾಟೀಲ್ ಅವರು ಸಂಪೂರ್ಣವಾಗಿ ನೆಲದ ಮೇಲೆ ಕುಳಿತು ಕಣ್ಣೀರು ಹಾಕಿದರು. ಜೆಮಿಮಾ ರೋಡ್ರಿಗಸ್ ಮತ್ತು ಜೆಸ್ ಜೊನಾಸ್ಸೆನ್ ರಿಚಾ ಘೋಷ್ಗೆ ಸಾಂತ್ವನ ಹೇಳಿದರೆ, ಆಲಿಸ್ ಕ್ಯಾಪ್ಸಿ ಶ್ರೇಯಾಂಕಾ ಪಾಟೀಲ್ರನ್ನು ಸಮಾಧಾನಪಡಿಸಿದರು.
ಮತ್ತೊಂದೆಡೆ, ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ ಕೂಡ ಡಗೌಟ್ನಲ್ಲೂ ನಿರಾಸೆಯ ಮುಖ ಹೊತ್ತಿದ್ದರು. 182 ರನ್ಗಳ ಗುರಿ ಬೆನ್ನತ್ತಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗೆ 180 ರನ್ ಗಳಿಸಿತು.

ಬೌಲಿಂಗ್ನಲ್ಲಿ ಶ್ರೇಯಾಂಕಾ ಪಾಟೀಲ್ 4-0-26-4 ಅಂಕಿಅಂಶಗಳೊಂದಿಗೆ ಮುಗಿಸಿ ಸ್ಮರಣೀಯ ಸಮಯವನ್ನು ಹೊಂದಿದ್ದರು. ಆದರೆ ಸೋಲಿನ ಅಂತ್ಯವು ಅವರಿಗೆ ಸಂತೋಷ ನೀಡಲಿಲ್ಲ.
ಪಂದ್ಯದ ನಂತರ ಮಾತನಾಡಿದ ಆರ್ಸಿಬಿ ನಾಯಕಿ ಸ್ಮೃತಿ ಮಂಧಾನ, ಒತ್ತಡದಲ್ಲಿ ತಮ್ಮ ಆಟವನ್ನು ಪ್ರಯತ್ನಿಸಿದ್ದಕ್ಕಾಗಿ ರಿಚಾ ಘೋಷ್ ಮತ್ತು ಶ್ರೇಯಾಂಕಾ ಅವರನ್ನು ಶ್ಲಾಘಿಸಿದರು. ಆದರೂ ಅವರು ಸೋಲು ಸ್ವೀಕರಿಸುವುದು ಕಠಿಣ ಎಂದು ಒಪ್ಪಿಕೊಂಡರು.
"ಸೋಲು ತೆಗೆದುಕೊಳ್ಳಲು ಕಠಿಣವಾಗಿದೆ. ನಾವು ಬ್ಯಾಟಿಂಗ್ ಮಾಡಿದ ರೀತಿ, ರಿಚಾ ಘೋಷ್ ಸಾಗುತ್ತಿದ್ದ ರೀತಿ ಅದ್ಭುತ ಇನ್ನಿಂಗ್ಸ್ ಆಗಿತ್ತು. ಶ್ರೇಯಾಂಕಾ ಪಾಟೀಳ್ ಎಸೆದ ಕೊನೆಯ ಓವರ್ ಕೂಡ ಅದ್ಭುತವಾಗಿತ್ತು," ಎಂದು ಸ್ಮೃತಿ ಮಂಧಾನ ಹೇಳಿದರು.
"ರಿಚಾ ಘೋಷ್ ಬ್ಯಾಟಿಂಗ್ ಮಾಡುತ್ತಿರುವಾಗ, ತಮ್ಮ ನರವನ್ನು ಹಿಡಿದಿಟ್ಟುಕೊಂಡಿದ್ದರು. ಕೊನೆಯ ಎಸೆತದಲ್ಲಿ ಆಟವು ಯಾವ ಕಡೆಯಾದರೂ ಹೋಗಬಹುದು," ಎಂದು ತಿಳಿಸಿದರು.
2024ರ ಮಹಿಳಾ ಪ್ರೀಮಿಯರ್ ಲೀಗ್ನ ಅಂಕಪಟ್ಟಿಯಲ್ಲಿ 6 ಅಂಕಗಳು ಮತ್ತು 0.027 ನೆಟ್ ರನ್ ರೇಟ್ನೊಂದಿಗೆ ಮೂರನೇ ಸ್ಥಾನದಲ್ಲಿರುವ ಆರ್ಸಿಬಿ ತಂಡ ಪ್ಲೇಆಫ್ಸ್ಗೆ ಅರ್ಹತೆ ಪಡೆಯುವುದು ಇನ್ನೂ ಅನಿಶ್ಚಿತ ಸ್ಥಿತಿಯಲ್ಲಿದೆ.