ದೊಡ್ಡ ಮುನ್ನಡೆ ಪಡೆಯದಂತೆ ನೋಡಿಕೊಳ್ಳಬೇಕು
ರಮೀಜ್ ರಾಜಾ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮೂರನೇ ದಿನದ ಪ್ರದರ್ಶನದ ಬಗ್ಗೆ ವಿಮರ್ಶೆಯನ್ನು ಮಾಡುತ್ತಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. "ಭಾರತ ನ್ಯೂಜಿಲೆಂಡ್ ತಂಡಕ್ಕೆ ದೊಡ್ಡ ಮುನ್ನಡೆಯನ್ನು ಲಭಿಸದಂತೆ ನೋಡಿಕೊಳ್ಳಬೇಕಿದೆ. ನ್ಯೂಜಿಲೆಂಡ್ ಮೇಲೆ ನಿರಂತರವಾಗಿ ಒತ್ತಡವನ್ನು ಹೇರುತ್ತಾ ಸಾಗಬೇಕು ಹಾಗೂ ವಿಕೆಟ್ ಪಡೆಯುತ್ತಾ ಮುನ್ನಡೆಯಬೇಕು. ವಿರಾಟ್ ಕೊಹ್ಲಿ ನೇರ ಮತ್ತು ಸರಳವಾದ ಗೇಮ್ಪ್ಲಾನ್ ಹೊಂದುವ ಅಗತ್ಯವಿದೆ. ಜೊತೆಗೆ ಎಲ್ಲಾ ಆಟಗಾರರು ಕೂಡ ತಮ್ಮ ಕೊಡುಗೆಯನ್ನು ನೀಡಬೇಕು" ಎಂದು ರಮೀಜ್ ರಾಜಾ ಹೇಳಿದ್ದಾರೆ.
ಕಮ್ಬ್ಯಾಕ್ ಅಸಾಧ್ಯವಿಲ್ಲ
"ಭಾರತ ತಂಡ ಕಠಿಣ ಪರಿಸ್ಥಿತಿಯಲ್ಲಿದೆ ಹಾಗೂ ಒತ್ತಡದಲ್ಲಿದೆ. ಆದರೆ ಭಾರತ ತಂಡಕ್ಕೆ ಅಸಾಧ್ಯವಲ್ಲ. ಭಾರತ ತಂಡ ಭರ್ಜರಿ ಕಮ್ಬ್ಯಾಕ್ ಮಾಡುವ ಅವಕಾಶವನ್ನು ಹೊಂದಿದೆ. ಭಾರತ ತಂಡವಿನ್ನೂ ಎಲ್ಲವನ್ನೂ ಕಳೆದುಕೊಂಡಿಲ್ಲ. ಸ್ಪರ್ಧಾತ್ಯಕ ಪ್ರದರ್ಶನ ನೀಡುವ ಮೂಲಕ ಪಂದ್ಯಕ್ಕೆ ಅವರು ಮರಳಬಹುದು" ಎಂದು ರಮೀಜ್ ರಾಜಾ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಭಾರತೀಯ ಬೌಲಿಂಗ್ ಪಡೆಯ ಬಗ್ಗೆ ಪ್ರಶಂಸೆ
ಇನ್ನು ಇದೇ ಸಂದರ್ಭದಲ್ಲಿ ಭಾರತೀಯ ಬೌಲಿಂಗ್ ಪಡೆಯ ಬಗ್ಗೆಯೂ ರಮೀಜ್ ರಾಜಾ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ. ಭಾರತ ಅದ್ಭುತವಾದ ಬೌಲಿಂಗ್ ಪಡೆಯನ್ನು ಹೊಂದಿದ್ದು ಟೆಸ್ಟ್ ಕ್ರಿಕೆಟ್ನಲ್ಲಿ ಅವರು 20 ವಿಕೆಟ್ ಪಡೆಯುವ ಸಾಮರ್ಥ್ಯ ಅವರಲ್ಲಿದೆ ಎಂದಿದ್ದಾರೆ. ಜೊತೆಗೆ ಭಾರತೀಯ ಸ್ಪಿನ್ನರ್ಗಳಾದ ಆರ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕಿವೀಸ್ ಬ್ಯಾಟ್ಸ್ಮನ್ಗಳಿಗೆ ಕಂಟಕವಾಗಬಲ್ಲರು ಎಂದು ಹೇಳಿಕೆ ನೀಡಿದ್ದಾರೆ.
"ಸ್ಪಿನ್ನರ್ಗಳಿಂದಲೂ ಉತ್ತಮ ಪ್ರದರ್ಶನ"
"ಭಾರತ ಟೆಸ್ಟ್ ಮಾದರಿಯಲ್ಲಿ ಅತ್ಯಂತ ಯಶಸ್ಸನ್ನು ಪಡೆದುಕೊಂಡಿರುವುದು ಅದರ ಬೌಲಿಂಗ್ ದಾಳಿಯ ಕಾರಣದಿಂದಾಗಿ. 20 ವಿಕೆಟ್ ಪಡೆಯುವ ಸಾಮರ್ಥ್ಯವನ್ನು ಹೊಂದಿರುವ ಬೌಲರ್ಗಳು ಅವರಲ್ಲಿದ್ದಾರೆ. ಪಿಚ್ ಒಣಗಿದಲ್ಲಿ ಭಾರತೀಯ ಸ್ಪಿನ್ನರ್ಗಳಾದ ಆರ್ ಅಶ್ವಿನ್ ಹಾಗೂ ಜಡೇಜಾ ಅವರಿಂದ ಉತ್ತಮ ಪ್ರದರ್ಶನ ಬರುವ ನಿರೀಕ್ಷೆಯಿದೆ" ಎಂದಿದ್ದಾರೆ. ಇನ್ನು ನ್ಯೂಜಿಲೆಂಡ್ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡಿದ ರಾಜಾ "ನ್ಯೂಜಿಲೆಂಡ್ ಏಕಮುಖಿ ಬೌಲಿಂಗ್ ದಾಳಿಯನ್ನು ಹೊಂದಿದೆ. ಅವರ ಬೌಲಿಂಗ್ ಮೊದಲ ಇನ್ನಿಂಗ್ಸ್ಗೆ ಹೆಚ್ಚು ಸೂಕ್ತವಾಗಿದೆ" ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ