ನನ್ನನ್ನು RCB ತಂಡದಿಂದ ಕೈಬಿಟ್ಟಿದ್ದಕ್ಕೆ ಅಸಲಿ ಕಾರಣವೇ ತಿಳಿದಿಲ್ಲ ಎಂದ ಯಶ್ ದಯಾಳ್
ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ವೇಗದ ಬೌಲರ್ ಯಶ್ ದಯಾಳ್ ಅವರು ಈ ಋತುವಿನಿಂದ ಹೊರಗುಳಿದ ಬಗ್ಗೆ ಮಹತ್ವದ ಹೇಳಿಕೆ ನೀಡಿದ್ದಾರೆ. ವೈಯಕ್ತಿಕ ಕಾರಣದಿಂದಾಗಿ ಅವರು ಈ ವರ್ಷ ಆಡುತ್ತಿಲ್ಲ ಎಂಬ ಫ್ರಾಂಚೈಸಿ ನೀಡಿದ್ದ ಅಧಿಕೃತ ಹೇಳಿಕೆಯನ್ನು ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ದಯಾಳ್ ಅವರ ಈ ಹೊಸ ಹೇಳಿಕೆ ಕ್ರಿಕೆಟ್ ವಲಯದಲ್ಲಿ ಹೊಸ ಚರ್ಚೆಯನ್ನು ಹುಟ್ಟಿಹಾಕಿದೆ.
ಆರ್ಸಿಬಿ ಮಂಗಳವಾರ ಮೊದಲ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನ ಯಶ್ ದಯಾಳ್ ನೀಡಿರುವ ಹೇಳಿಕೆ ಎಲ್ಲರೂ ಅವರತ್ತ ನೋಡುವಂತೆ ಮಾಡಿದೆ. 'ಟಾಕ್ ವಿತ್ ಮಾನವೇಂದ್ರ' ಯೂಟ್ಯೂಬ್ ಕಾರ್ಯಕ್ರಮದಲ್ಲಿ ಯಶ್ ದಯಾಳ್, ಈ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ.

ಐಪಿಎಲ್ನಿಂದ ದೂರ ಉಳಿಯುವ ನಿರ್ಧಾರ ತಮ್ಮದ್ದಾಗಿರಲಿಲ್ಲ ಎಂದು ಸ್ಪಷ್ಟಪಡಿಸಿದರು. ನಾನು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಬಹುದು. ಆದರೆ ತಂಡದಲ್ಲಿ ಆಡುವ ಬಗ್ಗೆ ಅಂತಿಮ ನಿರ್ಧಾರ ಮ್ಯಾನೇಜ್ಮೆಂಟ್ನದ್ದಾಗಿದೆ. ತಮ್ಮನ್ನು ಏಕೆ ತಂಡದಿಂದ ಹೊರಗಿಡಲಾಗಿದೆ ಎಂಬ ನಿಜ ಕಾರಣವೇ ತಮಗೆ ತಿಳಿದಿಲ್ಲ ಎಂದು ವೇಗಿ ಯಶ್ ತಿಳಿಸಿದ್ದಾರೆ.
ಯಶ್ ದಯಾಳ್ ಹೇಳಿದ್ದೇನು?
ಯಶ್ ದಯಾಳ್ ಉಪಸ್ಥಿತಿ ಬಗ್ಗೆ ಋತುವಿನ ಆರಂಭದಲ್ಲೇ ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಮಾತನಾಡಿ, ವೈಯಕ್ತಿಕ ಕಾರಣಗಳಿಂದಾಗಿ ದಯಾಳ್ ಟೂರ್ನಮೆಂಟ್ನಲ್ಲಿ ಭಾಗವಹಿಸುತ್ತಿಲ್ಲ ಎಂದು ಹೇಳಿದ್ದರು. ಆಟಗಾರ ಮತ್ತು ತಂಡದ ಇಬ್ಬರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡೇ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಬೊಬಾಟ್ ಹೇಳಿದ್ದರು.
ವಿವಾದಗಳ ನಡುವೆಯೂ ದಯಾಳ್ ಪ್ರಸ್ತುತ ಆರ್ಸಿಬಿ ತಂಡದಿಂದ ದೂರವಿದ್ದರೂ. ಯಶ್ ಅವರು ದಿನೇಶ್ ಕಾರ್ತಿಕ್, ಮುಖ್ಯ ಕೋಚ್ ಮತ್ತು ತಂಡದ ನಿರ್ದೇಶಕರೊಂದಿಗೆ ಸಂದರ್ಭಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ತಿಳಿಸಿದ್ದಾರೆ. ಈ ಋತುವಿನಲ್ಲಿ ಫ್ರಾಂಚೈಸಿ ಅವರ ಬದಲಿಗೆ ಯಾವುದೇ ಆಟಗಾರನನ್ನು ತಂಡಕ್ಕೆ ಸೇರಿಸಿಕೊಂಡಿಲ್ಲ.
ನೀವು ಎಂದಿಗೂ ನಿರೀಕ್ಷಿಸದ ವಿಷಯಗಳು ನಡೆದಾಗ, ನಾನು ತುಂಬಾ ಒಂಟಿತನ ಅನುಭವಿಸುತ್ತಿದ್ದೇನೆ. ಅಂತಹ ಪರಿಸ್ಥಿತಿಯಿಂದ ಹೊರಬರುವುದು ಹೇಗೆ ಎಂದು ಲೆಕ್ಕಾಚಾರ ಮಾಡಲು ಸಾಧ್ಯವಾಗುವುದಿಲ್ಲ. "ಕೆಟ್ಟ ದಿನಗಳು ಬರುವಂತೆಯೇ, ಒಳ್ಳೆಯ ದಿನಗಳು ಸಹ ಬರುತ್ತವೆ, ಮತ್ತು ಅವು ದೂರವಿಲ್ಲ ಎಂದು ನನಗೆ ಅನಿಸುತ್ತದೆ ಎಂದು ಯಶ್ ತಿಳಿಸಿದ್ದಾರೆ.
ಗಂಭೀರ ಆರೋಪಗಳು
ಮಾಧ್ಯಮ ವರದಿಗಳ ಪ್ರಕಾರ, ದಯಾಳ್ ಪ್ರಸ್ತುತ ಎದುರಿಸುತ್ತಿರುವ ಕಾನೂನು ಪ್ರಕರಣಗಳೇ ಅವರು ತಂಡದಿಂದ ದೂರ ಉಳಿಯಲು ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಜೈಪುರದಲ್ಲಿ ಅಪ್ರಾಪ್ತ ಹುಡುಗಿಯಿಂದ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಇವರ ಮೇಲಿವೆ ಎನ್ನಲಾಗಿದ್ದು, ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪ್ರಕರಣದ ಸೂಕ್ಷ್ಮತೆಯನ್ನು ಪರಿಗಣಿಸಿ, ರಾಜಸ್ಥಾನ ಹೈಕೋರ್ಟ್ ಅವರಿಗೆ ಬಂಧನದಿಂದ ರಕ್ಷಣೆ ನೀಡಲು ನಿರಾಕರಿಸಿತ್ತು. ಇದಲ್ಲದೆ, ಗಾಜಿಯಾಬಾದ್ನಲ್ಲಿಯೂ ಯಶ್ ದಯಾಳ್ ವಿರುದ್ಧ ಮದುವೆಯ ಭರವಸೆ ನೀಡಿ ಶೋಷಣೆ ಮಾಡಿದ ಆರೋಪದಡಿ ಮತ್ತೊಂದು ಪ್ರಕರಣ ದಾಖಲಾಗಿದ್ದು, ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ನಿಂದ ಅವರಿಗೆ ಬಂಧನದ ವಿರುದ್ಧ ರಕ್ಷಣೆ ದೊರೆತಿದೆ.
ಈ ಗಂಭೀರ ಕಾನೂನು ವಿವಾದಗಳಿಂದಾಗಿಯೇ ಕಳೆದ ವರ್ಷ ಅವರಿಗೆ ಯುಪಿ ಟಿ20 ಲೀಗ್ನಲ್ಲಿ ಆಡಲು ಸಂಪೂರ್ಣವಾಗಿ ನಿರ್ಬಂಧಿಸಲಾಗಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications