ನವದೆಹಲಿ, ಮಾರ್ಚ್ 26: ಒಂದುವೇಳೆ ತನ್ನ ಬಯೋಪಿಕ್ ಮಾಡಿದರೆ ಬಾಲಿವುಡ್ ನಟ ಸಿದ್ಧಾಂತ್ ಚತುರ್ವೇದಿ ನಟಿಸಬೇಕು ಎಂದು ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ಮನ್ ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ. ತನ್ನ ಚಿತ್ರದಲ್ಲಿ ತಾನೇ ನಟಿಸಬಲ್ಲೆ ಎಂದೂ ಯುವಿ ಹೇಳಿದ್ದಾರೆ.
ಸಿಎಸ್ಕೆ ಗೆಲುವು, ಆರ್ಸಿಬಿ ಸೋಲಿಗೆ ಕಾರಣ ಹೇಳಿದ ರಾಹುಲ್ ದ್ರಾವಿಡ್!
ಟೈಮ್ಸ್ ಆಫ್ ಇಂಡಿಯಾ ಜೊತೆ ಮಾತನಾಡುತ್ತ ಪಂಜಾಬ್ ಶೇರ್ ಯುವಿ, 'ಬಹುಶ ನನ್ನ ಚಿತ್ರದಲ್ಲಿ ನಾನೇ ನಟಿಸುತ್ತೇನೆ. ಆದರೆ ಅದು ಬಹಳ ಕೆಟ್ಟದಾಗಿರುತ್ತದೆ, ಅಲ್ವಾ?' ಎಂದು ಮರುಪ್ರಶ್ನಿಸಿದವರೆ ಜೋರಾಗಿ ನಕ್ಕುಬಿಟ್ಟರು. ಮಾತು ಮುಂದುವರೆಸಿದ ಯುವಿ ತನಗೆ ಸಿದ್ಧಾಂತ್ ಸಿನಿಮಾಗಳು ಇಷ್ಟ ಎಂದೂ ತಿಳಿಸಿದ್ದಾರೆ.
ರಿಷಬ್ ಪಂತ್ ಯಶಸ್ಸಿಗೆ ಮಹತ್ವದ ಸಲಹೆ ನೀಡಿದ ಆಸಿಸ್ ದಿಗ್ಗಜ
ತನ್ನ ಬಯೋಪಿಕ್ ಬಗ್ಗೆ ಮಾತನಾಡಿದ ಸಿಂಗ್, 'ನೋಡಿ, ಬಯೋಪಿಕ್ ಮಾಡಬೇಕಾಗಿ ಬಂದರೆ ನನ್ನ ಪಾತ್ರಕ್ಕೆ ನಟ ಯಾರಾಗಬೇಕು ಎಂದು ನಿರ್ದೇಶಕರು ನಿರ್ಧರಿಸುತ್ತಾರೆ. ಆ ಕೆಲಸ ಅವರದ್ದು. ಬಾಲಿವುಡ್ಗೆ ಬಂದರೆ ಇಲ್ಲಿ ನನ್ನ ಪ್ರಕಾರ ಸಿದ್ಧಾಂತ್ ಚತುರ್ವೇದಿ ಉತ್ತಮ ಆಯ್ಕೆ. ಚಿತ್ರದಲ್ಲಿ ಆತನನ್ನು ನೋಡಲು ನನಗಿಷ್ಟ,' ಎಂದರು.
ಕೊಹ್ಲಿಯ ನಂತರ ನಾಯಕತ್ವ ರೋಹಿತ್ಗೆ ಅಲ್ಲ, ಕನ್ನಡಿಗನಿಗಿದೆ ಭಾರೀ ಪೈಪೋಟಿ!
ಕಳೆದ ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿರುವ ಯುವರಾಜ್ ಸಿಂಗ್, ಸದ್ಯ ಗ್ಲೋಬಲ್ ಟಿ20 ಕೆನಡಾ, ಅಬುದಾಬಿ ಟಿ10 ಲೀಗ್ನಂತ ವಿದೇಶಿ ಟೂರ್ನಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಇತ್ತೀಚೆಗೆ ರದ್ದಾದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ 2020ಯಲ್ಲಿ ಯುವಿ, ಇಂಡಿಯಾ ಲೆಜೆಂಡ್ಸ್ ಪ್ರತಿನಿಧಿಸಿದ್ದರು.