ಶನಿವಾರ, ಜುಲೈ 13ರಂದು ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟನ್ನಲ್ಲಿ ನಡೆದ 2024ರ ವರ್ಲ್ಡ್ ಚಾಂಪಿಯನ್ಶಿಪ್ ಆಫ್ ಲೆಜೆಂಡ್ಸ್ನ ಫೈನಲ್ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ಚಾಂಪಿಯನ್ಸ್ ತಂಡವನ್ನು 5 ವಿಕೆಟ್ಗಳಿಂದ ಸೋಲಿಸಿದ ಭಾರತ ಚಾಂಪಿಯನ್ಸ್ ಉದ್ಘಾಟನಾ ಟೂರ್ನಿಯ ವಿಜೇತ ತಂಡವೆನಿಸಿತು.
ವಿಶ್ವ ಚಾಂಪಿಯನ್ಶಿಪ್ ಲೀಗ್ ಫೈನಲ್ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದ ನಂತರ, ಭಾರತದ ಲೆಜೆಂಡರಿ ಕ್ರಿಕೆಟಿಗ ಯುವರಾಜ್ ಸಿಂಗ್ ಇತ್ತೀಚೆಗೆ ತಮ್ಮ ಆಯ್ಕೆಯ ಸಾರ್ವಕಾಲಿಕ ಅತ್ಯುತ್ತಮ ಆಟಗಾರರ ಆಡುವ 11ರ ಬಳಗವನ್ನು ಹೆಸರಿಸಿದ್ದಾರೆ.

ಅನುಭವಿ ಕ್ರಿಕೆಟರ್ ಯುವರಾಜ್ ಸಿಂಗ್ ಅವರ ಸಾರ್ವಕಾಲಿಕ ಆಡುವ 11ರ ಬಳಗದಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಆಡಮ್ ಗಿಲ್ಕ್ರಿಸ್ಟ್ ಅವರಂತಹ ಆಟಗಾರರನ್ನು ಒಳಗೊಂಡಿದೆ. ಗಮನಾರ್ಹವಾಗಿ, ಯುವರಾಜ್ ಸಿಂಗ್ ತಮ್ಮ ಹೆಸರನ್ನು ಸೂಚಿಸಿಕೊಳ್ಳಲಿಲ್ಲ.
ಇನ್ನು ಹಲವು ಅಭಿಮಾನಿಗಳ ಅಚ್ಚರಿಗೆ ಕಾರಣವಾಗಿದ್ದು, ಯುವರಾಜ್ ಸಿಂಗ್ ಅವರ ಸಾರ್ವಕಾಲಿಕ ಅತ್ಯುತ್ತಮ ಆಟಗಾರರ ಆಡುವ 11ರ ಬಳಗದಲ್ಲಿ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ ಅವರಿಗೆ ಸ್ಥಾನ ನೀಡಲಾಗಲಿಲ್ಲ.
ಟಿವಿ ನಿರೂಪಕಿ ಶೆಫಾಲಿ ಬಗ್ಗಾ ಅವರೊಂದಿಗಿನ ಸಂದರ್ಶನದಲ್ಲಿ, ಯುವರಾಜ್ ಸಿಂಗ್ ತನ್ನ ಆಯ್ಕೆಯ ಆಡುವ 11ರ ಬಳಗದಲ್ಲಿ ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಅಗ್ರ ಕ್ರಮಾಂಕದ ಆಟಗಾರರು ಎಂದು ಹೆಸರಿಸಿದ್ದಾರೆ.

ಇದಲ್ಲದೆ, ಎಬಿ ಡಿವಿಲಿಯರ್ಸ್ ಮತ್ತು ಆಡಮ್ ಗಿಲ್ಕ್ರಿಸ್ಟ್ ಅವರನ್ನು ಸಹ ಯುವರಾಜ್ ಸಿಂಗ್ ಸೇರಿಸಿಕೊಂಡಿದ್ದಾರೆ. ಇನ್ನು ಸ್ಪಿನ್ ದಿಗ್ಗಜರಾದ ಶೇನ್ ವಾರ್ನ್ ಮತ್ತು ಮುತ್ತಯ್ಯ ಮುರಳೀಧರನ್ ಅವರನ್ನು ಸ್ಪಿನ್ನರ್ಗಳಾಗಿ ಆಯ್ಕೆ ಮಾಡಿಕೊಂಡರು.
ಇದರೊಂದಿಗೆ ಯುವರಾಜ್ ಸಿಂಗ್ ತನ್ನ ಆಯ್ಕೆಯ ಸಾರ್ವಕಾಲಿಕ ಆಡುವ 11ರ ಬಳಗದಲ್ಲಿ ವೇಗಿಗಳಾದ ಗ್ಲೆನ್ ಮೆಕ್ಗ್ರಾತ್, ಆಂಡ್ರ್ಯೂ ಫ್ಲಿಂಟಾಫ್ ಮತ್ತು ವಾಸಿಮ್ ಅಕ್ರಮ್ ಅವರನ್ನು ಸೇರಿಸಿಕೊಂಡಿದ್ದಾರೆ.
ಮೇಲೆ ತಿಳಿಸಿದಂತೆ, ಎಂಎಸ್ ಧೋನಿ ಅವರಿಗೆ ಯುವರಾಜ್ ಸಿಂಗ್ ಅವರ ಸಾರ್ವಕಾಲಿಕ ಆಡುವ 11ರ ಬಳಗದಲ್ಲಿ ತನ್ನ ಸ್ಥಾನವನ್ನು ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಯುವರಾಜ್ ಸಿಂಗ್ ತಮ್ಮನ್ನು ಸಾರ್ವಕಾಲಿಕ ತಂಡದ 12ನೇ ಆಟಗಾರ ಎಂದು ಹೆಸರಿಸಿದರು.
ಸಚಿನ್ ತೆಂಡೂಲ್ಕರ್, ರಿಕಿ ಪಾಂಟಿಂಗ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ಆಡಮ್ ಗಿಲ್ಕ್ರಿಸ್ಟ್, ಶೇನ್ ವಾರ್ನ್, ಮುತ್ತಯ್ಯ ಮುರಳೀಧರನ್, ಗ್ಲೆನ್ ಮೆಕ್ಗ್ರಾತ್, ವಾಸಿಮ್ ಅಕ್ರಮ್, ಆಂಡ್ರ್ಯೂ ಫ್ಲಿಂಟಾಫ್.