
ಹಿಂದಿನ ಯುವಿಯಾಗಿರಲಿಲ್ಲ
ಯುವರಾಜ್ ಸಿಂಗ್ ಕ್ಯಾನ್ಸರ್ ಚಿಕಿತ್ಸೆ ಪಡೆದು ಗುಣಮುಖರಾಗಿ ಬಂದ ನಂತರ ಹಿಂದಿನ ತಮ್ಮ ಲಯವನ್ನು ಹೊಂದಿರಲಿಲ್ಲ. ಹಾಗಿದ್ದರೂ ಯುವರಾಜ್ ಸಿಂಗ್ ಇಂಗ್ಲೆಂಡ್ ವಿರುದ್ಧ ತಮ್ಮ ಜೀವನ ಶ್ರೇಷ್ಠ 150 ರನ್ ಸಿಡಿಸಿ ಮಿಂಚಿದ್ದರು. ಆದರೆ 2017ರಲ್ಲಿ ತಮ್ಮ ಕೊನೆಯ ಅಂತಾರಾಷ್ಟ್ರೀಯ ಏಕದಿನ ಪಂದ್ಯವನ್ನು ಆಡಿದ ಬಳಿಕ ತಂಡಕ್ಕೆ ಮತ್ತೆ ಆಯ್ಕೆಯಾಗಲಿಲ್ಲ. ಹೀಗಾಗಿ ಎರಡು ವರ್ಷಗಳ ಕಾಯುವಿಕೆಯ ನಂತರ ಯುವಿ ನಿವೃತ್ತಿ ಘೋಷಿಸಿದರು.

ವಿರಾಟ್ ಇಲ್ಲದೆ ಕಮ್ಬ್ಯಾಕ್ ಸಾಧ್ಯವಿರಲಿಲ್ಲ
ಈ ಸಂದರ್ಭದಲ್ಲಿ ಯುವರಾಜ್ ಸಿಂಗ್ ಕಮ್ಬ್ಯಾಕ್ ಸಂದರ್ಭದಲ್ಲಿ ತನ್ನನ್ನು ಬೆಂಬಲಿಸಿದ ನಾಯಕ ವಿರಾಟ್ ಕೊಹ್ಲಿಯನ್ನು ಹೊಗಳಿದ್ದಾರೆ. ವಿರಾಟ್ ಕೊಹ್ಲಿಯ ಬೆಂಬವಿಲ್ಲದಿದ್ದರೆ ನಾನು ಕಮ್ಬ್ಯಾಕ್ ಮಾಡಲು ಸಾಧ್ಯವಿರಲಿಲ್ಲ. ಆತನ ಬೆಂಬಲ ನನಗೆ ಸಂಪೂರ್ಣವಾಗಿತ್ತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ.

ಧೋನಿಯಿಂದ ದೊರೆಯಿತು ಸಂಪೂರ್ಣ ಚಿತ್ರಣ
ಆದರೆ ಧೋನಿಯಿಂದ 2019ರ ವಿಶ್ವಕಪ್ಗೆ ನನ್ನ ಕ್ರಿಕೆಟ್ ಭವಿಷ್ಯದ ಚಿತ್ರಣ ನನಗೆ ದೊರೆಯಿತು ಎಂದು ಯುವರಾಜ್ ಸಿಂಗ್ ಹೇಳಿದ್ದಾರೆ. ಆಯ್ಕೆಗಾರರು ಮುಂದಿನ ವಿಶ್ವಕಪ್ಗೆ ನಿನ್ನತ್ತ ಗಮನಿಸುತ್ತಿಲ್ಲ ಎಂದು ಧೋನಿ ತಿಳಿಸಿದ್ದರು. ಆತನಿಂದ ಎಷ್ಟು ಸಾಧ್ಯವೋ ಅದನ್ನು ಆತ ಮಾಡಿದ್ದ ಎಂದು ಧೋನಿಯ ಕುರಿತಾಗಿ ಯುವಿ ಹೇಳಿದ್ದಾರೆ.

ಧೋನಿ ಸಾಕಷ್ಟು ಆತ್ಮವಿಶ್ವಾಸ ತುಂಬಿದ್ದರು
ಇದೇ ಸಂದರ್ಭದಲ್ಲಿ ಯುವರಾಜ್ ಸಿಂಗ್ 2011ರ ವಿಶ್ವಕಪ್ಗೂ ಮುನ್ನ ಧೋನಿ ನನ್ನಲ್ಲಿ ಸಾಕಷ್ಟು ಆತ್ಮವಿಶ್ವಾಸವನ್ನು ತುಂಬದ್ದರು ಎಂದು ಹೇಳಿದ್ದಾರೆ. ನೀನು ನನ್ನ ಪ್ರಮುಖ ಆಟಗಾರ ಎಂದು ಧೋನಿ ಹೇಳುತ್ತಿದ್ದರು. ಆದರೆ ಬಳಿಕ ಖಾಯಿಲೆಯಿಂದ ವಾಪಾಸ್ಸಾದ ಬಳಿಕ ಆಟ ಬದಲಾಯಿತು. ತಂಡದಲ್ಲೂ ಸಾಕಷ್ಟು ಬದಲಾವಣೆಗಳು ಆಯಿತು ಎಂದು ಯುವರಾಜ್ ಸಿಂಗ್ ಹೇಳಿಕೆಯನ್ನು ನೀಡಿದ್ದಾರೆ.


Click it and Unblock the Notifications
