ವೆಸ್ಟ್ ಇಂಡೀಸ್ ಮತ್ತು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ (ಯುಎಸ್ಎ) ನಡೆಯಲಿರುವ 2024ರ ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅವಧಿ ವಿಸ್ತರಣೆಯು ನಿರ್ಣಾಯಕವಾಗಿದೆ ಎಂದು ಭಾರತದ ಮಾಜಿ ವೇಗದ ಬೌಲರ್ ಜಹೀರ್ ಖಾನ್ ಹೇಳಿದ್ದಾರೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಪ್ಯಾಟ್ ಕಮಿನ್ಸ್ ನಾಯಕತ್ವದ ಆಸ್ಟ್ರೇಲಿಯಾ ವಿರುದ್ಧ 2023ರ ವಿಶ್ವಕಪ್ನ ಫೈನಲ್ನಲ್ಲಿ ಭಾರತ ಸೋಲು ಅನುಭವಿಸಿದ ನಂತರ ರಾಹುಲ್ ದ್ರಾವಿಡ್ ಅವರ ಮುಖ್ಯ ಕೋಚ್ ಅವಧಿಯು ಕೊನೆಗೊಂಡಿತ್ತು.

ಆ ಬಳಿಕ, ಆಶಿಶ್ ನೆಹ್ರಾ ಅವರು ಟಿ20 ಸ್ವರೂಪದಲ್ಲಿ ಕೋಚ್ ಆಫರ್ ತಿರಸ್ಕರಿಸಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ರಾಹುಲ್ ದ್ರಾವಿಡ್ ಅವರ ಅವಧಿ ವಿಸ್ತರಣೆ ಮಾಡಿತು.
ಆಟದ ಬೇಡಿಕೆಗೆ ಅನುಗುಣವಾಗಿ ನಾಯಕ ಮತ್ತು ಉಪನಾಯಕರನ್ನು ಬದಲಾಯಿಸಲಾಗುತ್ತದೆ. ಕೋಚ್ನೊಂದಿಗೆ 'ನಿರಂತರತೆ' ಕಾಯ್ದುಕೊಳ್ಳುವುದು ಭಾರತ ತಂಡಕ್ಕೆ ಪ್ರಮುಖವಾಗಿರುತ್ತದೆ ಎಂದು ಜಹೀರ್ ಖಾನ್ ತಿಳಿಸಿದರು.
"ನಾವು ಅನೇಕ ನಾಯಕ ಮತ್ತು ಉಪನಾಯಕರ ಬಗ್ಗೆ ಮಾತನಾಡುತ್ತಿದ್ದೇವೆ. ಬಹಳಷ್ಟು ಕ್ರಿಕೆಟ್ ಪಂದ್ಯಗಳು ನಡೆಯುವುದರಿಂದ, ನಿಮಗೆ ಆ ನಿರಂತರತೆ ಅಗತ್ಯವಿದೆ, ಅದು ಬಹಳ ಮುಖ್ಯವಾಗಿರುತ್ತದೆ. ತಂಡಕ್ಕೆ ಆ ಸ್ಥಿರತೆ ಬೇಕು, ಪದೇ ಪದೇ ತಂಡದ ನಾಯಕ ಹಾಗೂ ಆಟಗಾರರನ್ನು ಬದಲಿಸಲಾಗುತ್ತದೆ," ಎಂದು ಜಹೀರ್ ಖಾನ್ ಕ್ರಿಕ್ಬಜ್ಗೆ ತಿಳಿಸಿದ್ದಾರೆ.

"ಯಾರು ಕೋಚ್ ಆಗಿರುತ್ತಾರೋ ಅವರು ನಿರಂತರವಾಗಿರಬೇಕು ಮತ್ತು ಸ್ವಲ್ಪ ಸಮಯದವರೆಗೆ ನಿರಂತರತೆಯನ್ನು ಕಾಪಾಡಿಕೊಳ್ಳಬೇಕು ಇದರಿಂದ ಎಲ್ಲಾ ಪ್ರಕ್ರಿಯೆಗಳನ್ನು ಸುಲಭವಾಗಿರುತ್ತವೆ ಮತ್ತು ಆ ನಿಟ್ಟಿನಲ್ಲಿ ಸಂವಹನ ಮಾಡಲಾಗುತ್ತದೆ. ಬಿಸಿಸಿಐನ ಉನ್ನತ ಮ್ಯಾನೇಜ್ಮೆಂಟ್, ಆಯ್ಕೆ ಸಮಿತಿ, ಎನ್ಸಿಎ, ಭಾರತ ತಂಡ ಮತ್ತು ಎಲ್ಲ ಸ್ವರೂಪಗಳ ನಾಯಕರಿಗೆ ಸಂಬಂಧಿಸಿದಂತೆ ನೀವು ಉತ್ತಮವಾದ ತಂಡವನ್ನು ರಚಿಸಬೇಕು," ಎಂದು ಮಾಜಿ ವೇಗಿ ಜಹೀರ್ ಖಾನ್ ಹೇಳಿದರು.
ಭಾರತ ಕ್ರಿಕೆಟ್ ತಂಡವು ಪ್ರಸ್ತುತ ದಕ್ಷಿಣ ಆಫ್ರಿಕಾದಲ್ಲಿದ್ದು, ಅಲ್ಲಿ ಟೀಮ್ ಇಂಡಿಯಾ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗವಹಿಸಲು ನಿರ್ಧರಿಸಿದ್ದಾರೆ, ನಂತರ ಅಷ್ಟೇ ಏಕದಿನ ಪಂದ್ಯಗಳು ಮತ್ತು ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯವು ಭಾನುವಾರ, ಡಿಸೆಂಬರ್ 10ರಂದು ಡರ್ಬನ್ನ ಕಿಂಗ್ಸ್ಮೀಡ್ನಲ್ಲಿ ಭಾರತ ತಂಡ ಆಡಲಿದೆ.