ಭಾನುವಾರ, ಜುಲೈ 21ರಂದು ಬೆಂಗಳೂರಿನಲ್ಲಿ ನಡೆದ 'ಮುಖ್ಯಮಂತ್ರಿ ಕಪ್' ಫುಟ್ಬಾಲ್ ಟೂರ್ನಿಯ ಫೈನಲ್ನಲ್ಲಿ ಬೆಂಗಳೂರು ಫುಟ್ಬಾಲ್ ಕ್ರೀಡಾಂಗಣದ (ಬಿಎಫ್ಎಸ್) ಸ್ಟ್ಯಾಂಡ್ನ ಒಂದು ಭಾಗ ಕುಸಿದಿದ್ದು, ಅಲ್ಲಿ ಕುಳಿತು ಆಟ ನೋಡುತ್ತಿದ್ದ ಪ್ರೇಕ್ಷಕರು ಕೆಳಗೆ ಬಿದ್ದಿದ್ದಾರೆ.
ಶಾಂತಿನಗರ ಶಾಸಕರ ಕ್ಷೇತ್ರ ಮತ್ತು ಸಿ.ವಿ. ರಾಮನ್ನಗರ ಶಾಸಕರ ಕ್ಷೇತ್ರಗಳ ನಡುವಿನ ಫುಟ್ಬಾಲ್ ಪಂದ್ಯದ ವೇಳೆ ಈ ಘಟನೆ ನಡೆದಿದೆ. ತಂಡವೊಂದರ ಡಗೌಟ್ ಮೇಲಿನ ಸ್ಟ್ಯಾಂಡ್ನ ಒಂದು ಭಾಗವು ಕುಸಿದು ಬಿದ್ದಿದೆ. ಆ ಸ್ಥಳದಲ್ಲಿ ಕುಳಿತಿದ್ದ ಪ್ರೇಕ್ಷಕರು ನೆಲದ ಮೇಲೆ ಬೀಳುವುದನ್ನು ವಿಡಿಯೋ ತುಣುಕಿನಲ್ಲಿ ತೋರಿಸುತ್ತದೆ.

ಸ್ಟ್ಯಾಂಡ್ ಕುಸಿದಿಂದ ಉಂಟಾದ ಗಾಯಾಳುಗಳ ಪ್ರಮಾಣವು ತಕ್ಷಣವೇ ತಿಳಿದಿಲ್ಲ. ಆದರೆ, ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್ (ಕೆಎಸ್ಎಫ್ಎ) ಪದಾಧಿಕಾರಿಯೊಬ್ಬರು ಈ ದುರ್ಘಟನೆಯನ್ನು ಸಣ್ಣ ಘಟನೆ ಎಂದು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಮತ್ತು ಯಾರಿಗೂ ಗಾಯವಾಗಿಲ್ಲ ಎಂದು ಹೇಳಿದ್ದಾರೆ.
"ನೀವು ಯಾವ ಕುಸಿತದ ಬಗ್ಗೆ ಮಾತನಾಡುತ್ತಿದ್ದೀರಿ? ಯಾವುದೇ ಕುಸಿತ ಇರಲಿಲ್ಲ. ದೊಡ್ಡದೇನೂ ಸಂಭವಿಸಿಲ್ಲ ಮತ್ತು ಯಾವುದೇ ಗಾಯಗಳಾಗಿಲ್ಲ," ಎಂದು ಹಿರಿಯ ಕೆಎಸ್ಎಫ್ಎ ಅಧಿಕಾರಿ ತಿಳಿಸಿದ್ದಾರೆ.
ವಿಡಿಯೋದಲ್ಲಿ ತೋರಿಸಿರುವಂತೆ, ಸ್ಟ್ಯಾಂಡ್ನಲ್ಲಿ ಕುಳಿತಿದ್ದ ಪ್ರೇಕ್ಷಕರು ನೆಲದ ಮೇಲೆ ಬಿದ್ದಿದ್ದಾರೆ ಮತ್ತು ಆರು ಪ್ರೇಕ್ಷಕರು ಗಾಯಗೊಂಡಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ಬಳಕೆದಾರರಿಂದ ಭಾರೀ ಪ್ರತಿಕ್ರಿಯೆ ಸೃಷ್ಟಿಸಿದೆ.
'ಮುಖ್ಯಮಂತ್ರಿ ಕಪ್' ಫುಟ್ಬಾಲ್ ಪಂದ್ಯವು ಪೂರ್ಣಗೊಂಡಿದ್ದು, ಶಾಂತಿನಗರ ಶಾಸಕರ ಕ್ಷೇತ್ರವು ಚಾಂಪಿಯನ್ ಆಗಿ ಹೊರಹೊಮ್ಮಿತು. ಮುಖ್ಯ ಅತಿಥಿಯಾಗಿದ್ದ ಕೆಎಸ್ಎಫ್ಎ ಅಧ್ಯಕ್ಷ ಹಾಗೂ ಎಐಎಫ್ಎಫ್ ಉಪಾಧ್ಯಕ್ಷ ಎನ್.ಎ.ಹ್ಯಾರಿಸ್ ಬಹುಮಾನ ವಿತರಿಸಿದರು.
ಸೋಮವಾರದಂದು ಬೆಂಗಳೂರು ಫಟ್ಬಾಲ್ ಸ್ಟೇಡಿಯಂ ಕೆಎಸ್ಎಫ್ಎ ಕರ್ನಾಟಕ ಮಹಿಳಾ ಲೀಗ್ನ ಆರಂಭಕ್ಕೆ ಸಾಕ್ಷಿಯಾಯಿತು. ಮೊದಲ ದಿನ ಮೂರು ಪಂದ್ಯಗಳು ನಡೆದವು.
ಬೆಂಗಳೂರು ಫಟ್ಬಾಲ್ ಸ್ಟೇಡಿಯಂ ಬಹಳ ಹಿಂದಿನಿಂದಲೂ ಶಿಥಿಲಾವಸ್ಥೆಯಲ್ಲಿದೆ. ಬೆಂಗಳೂರು ಎಫ್ಸಿ (ಬಿಎಫ್ಸಿ) ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ತೆರಳುವ ಮೊದಲು ಬಿಎಫ್ಎಸ್ನಲ್ಲಿ ತನ್ನ ಉದ್ಘಾಟನಾ ಆವೃತ್ತಿಯನ್ನು ಆಡಿತ್ತು.
ಬೆಂಗಳೂರು ಫಟ್ಬಾಲ್ ಸ್ಟೇಡಿಯಂ ಉನ್ನತ ರಾಜ್ಯ ಪುರುಷರ ಮತ್ತು ಮಹಿಳೆಯರ ಲೀಗ್ಗಳಾದ I-ಲೀಗ್ 2 ಮತ್ತು ಇಂಡಿಯನ್ ವುಮೆನ್ಸ್ ಲೀಗ್ನಲ್ಲಿ ಪಂದ್ಯಗಳನ್ನು ಆಯೋಜಿಸುವುದನ್ನು ಮುಂದುವರೆಸಿದೆ.