
ನಾಲ್ಕು ದಿನಗಳ ಅಂತರದಲ್ಲಿ 2ನೇ ಬಾರಿ ಮುಖಾಮುಖಿ
ಈ ಬಗ್ಗೆ ಮಾತನಾಡಿರುವ ಒಡಿಶಾ ತಂಡದ ಕೋಚ್ ಸ್ಟುವರ್ಟ್ ಬ್ಯಾಕ್ಸ್ಟರ್, ನಾಲ್ಕು ದಿನಗಳ ಅಂತರದಲ್ಲಿ ಮತ್ತೆ ಅದೇ ತಂಡದ ವಿರುದ್ಧ ಪೈಪೋಟಿ ನಡೆಸುವಂತ್ತಾಗಿರುವುದಕ್ಕೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇದು ಎರಡೂ ತಂಡಕ್ಕೆ ಒಂದೇ ಆಗಿದೆ ಎಂದು ಹೇಳಿದ್ದಾರೆ. "ಲೋಟದಲ್ಲಿ ನೀಡು ಅರ್ಧ ಇದೆಯೋ ಅಧವಾ ಖಾಲಿ ಇದೇಯೋ? ಎಂಬುದನ್ನು ನೀವೇ ನೋಡಬೇಕು. ಎರಡೂ ತಂಡಕ್ಕೆ ಇದು ಒಂದೇ ಆಗಿರುತ್ತದೆ. ಒಂದಂತ್ತೂ ನಿಜ ಈ ಪಂದ್ಯ ಎರಡೂ ತಂಡಗಳಿಗೆ ಅತ್ಯಂತ ಕಠಿಣವಾಗಿರಲಿದೆ," ಎಂದು ಬ್ಯಾಕ್ಸ್ಟರ್ ಹೇಳಿದ್ದಾರೆ.

ಸುಳಿವು ನೀಡದ ಕೋಚ್
ಇನ್ನು ಈ ಪಂದ್ಯಕ್ಕೆ ತಂಡ ತನ್ನ ತಂತ್ರಗಾರಿಕೆಯನ್ನು ಬದಲಾವಣೆ ಮಾಡಲಿದೆಯೇ ಎಂಬುದಕ್ಕೆ ಬ್ಯಾಕ್ಸ್ಟರ್ ಸುಳಿವು ನೀಡಲು ನಿರಾಕರಿಸಿದ್ದಾರೆ. ಹೀಗಾಗಿ ಚೆನ್ನೈ ತಂಡದ ಮುಂದಿನ ನಡೆ ಏನೆಂಬುದು ಸಾಕಷ್ಟು ಕುತೂಹಲ ಕೆರಳುವಂತೆ ಮಾಡಿದೆ. "ಹೌದು ಈ ಸಾಧ್ಯತೆ ಇದೆ. ಅದರಲ್ಲು ಬ್ಯಾಕ್ ಟು ಬ್ಯಾಕ್ ಒಂದೇ ತಂಡದ ಎದುರು ಆಡುವಾಗ ಬದಲಾವಣೆ ಬೇಕಾಗುತ್ತದೆ. ಕೆಲವೊಮ್ಮೆ ಯಾವುದೇ ಬದಲಾವಣೆ ಮಾಡದೇ ಇರುವ ಅಗತ್ಯವೂ ಇರುತ್ತದೆ. ಗಾಯದ ಸಮಸ್ಯೆಗಳ ಕಡೆಗೆ ಗಮನ ನೀಡಿ ಸಂಪೂರ್ಣ ಫಿಟ್ ಇರುವ ಆಟಗಾರರನ್ನು ಆಡಿಸಬೇಕಾಗುತ್ತದೆ. ಜಾಕೋಬ್ ಟ್ರಾಟ್ ನಿಷೇಧ ಎದುರಿಸಿದ್ದಾರೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವುದು ಬಾಕಿಯಿದೆ," ಎಂದಿದ್ದಾರೆ.

ಚೆನ್ನೈ ತಂಡಕ್ಕೆ ಗೋಲ್ಗಳ ಬರ
ಚೆನ್ನೈಯಿನ್ ಎಫ್ಸಿ ತಂಡ ಟೂರ್ನಿಯಲ್ಲಿ ತನ್ನ ಗೋಲ್ಗಳ ಬರವನ್ನು ಮುಂದುವರಿಸಿದೆ. ಸ್ಟಾರ್ ಆಟಗಾರರಾದ ರಹಿಇಮ್ ಅಲಿ ಮತ್ತು ಯಾಕುಬ್ ಸಿಲ್ವೆಸ್ಟರ್ ಇಬ್ಬರೂ ಕೂಡ ಗೋಲ್ ಗಳಿಸುವ ಸುಲಭದ ಅವಕಾಶಗಳನ್ನು ಕೈಚೆಲ್ಲಿದರು. ಇನ್ನು ಟೂರ್ನಿಯಲ್ಲಿ ಅತಿ ಕಡಿಮೆ ಗೋಲ್ ಗಳಿಸಿರುವ ತಂಡ ಚೆನ್ನೈ. ಆಟಿರುವ ಒಟ್ಟು ಪಂದ್ಯಗಳಲ್ಲಿ ಅರ್ಧದಷ್ಟು ಪಂದ್ಯಗಳಲ್ಲಿ ಒಂದು ಗೋಲ್ ಕೂಡ ಗಳಿಸಿಲ್ಲ. ಸ್ಟಾರ್ ಆಟಗಾರ ರಫಾಯೆಲ್ ಕ್ರಿವೆಲಾರೊ ಟೂರ್ನಿಯಿಂದಲೇ ಹೊರಬಿದ್ದ ಹಿನ್ನೆಲೆಯಲ್ಲಿ ತಂಡದ ಫಾರ್ವರ್ಡ್ ವಿಭಾಗ ಬಲಹೀನವಾಗಿದೆ.

ಪಂದ್ಯ ಗೆಲ್ಲುವುದು ಕಷ್ಟವಾಗಿದೆ
ಒಡಿಶಾ ತಂಡದ ಕೋಚ್ ಸಾಬಾ ಲಾಝ್ಲೋ ತಂಡದ ಪ್ರಮುಖ ಸಮಸ್ಯೆಯನ್ನು ಗುರುತಿಸಿದ್ದಾರೆ. "ಗೋಲ್ ಗಳಿಸುವುದೇ ನಮ್ಮ ತಂಡಕ್ಕೆ ಇರುವ ಬಹುದೊಡ್ಡ ಸಮಸ್ಯೆ. ಹೆಚ್ಚು ಅವಕಾಶಗಳನ್ನು ಸೃಷ್ಟಿಸುತ್ತಿದ್ದೇವೆ. ಆದರೆ, ಅದರಲ್ಲಿ ತೃಪ್ತಿಯಾಗುವಷ್ಟು ಗೋಲ್ಗಳು ಮಾತ್ರವೇ ಸಿಕ್ಕಿಲ್ಲ. ಹೀಗಾಗಿ ಪಂದ್ಯಗಳನ್ನು ಗೆಲ್ಲುವುದು ಬಹಳಾ ಕಷ್ಟವಾಗಿದೆ," ಎಂದು ಹೇಳಿಕೊಂಡಿದ್ದಾರೆ.


Click it and Unblock the Notifications


